ಉದಯರಶ್ಮಿ ದಿನಪತ್ರಿಕೆ
ಜಮಖಂಡಿ: ಸಮೀಪದ ರಬಕವಿ-ಬನಹಟ್ಟಿ ತಾಲೂಕಿನ ಬನಹಟ್ಟಿಯ ಸೋಮವಾರ ಪೇಟೆಯ ನಾಮದೇವ ಗಲ್ಲಿಯ ಹನುಮ ದೇವಾಲಯದಲ್ಲಿ ಭಾನುವಾರ ಸಂಜೆ ಅರಳಿ ಮರದ ಕಾಂಡದಲ್ಲಿ ಶ್ರೀರಾಮನ ಬಂಟ ಹನುಮ ದೇವರನ್ನು ಹೋಲುವ ಆಕೃತಿ ಕಂಡುಬಂದಿದ್ದು, ಅದನ್ನು ವೀಕ್ಷಿಸಲು ಸಹಸ್ರಾರು ಜನರು ತಂಡೋಪತಂಡವಾಗಿ ಧಾವಿಸುತ್ತಿದ್ದಾರೆ.
ಆಗಿದ್ದೇನು?: ಜೀರ್ಣೋದ್ದಾರ ಸಲುವಾಗಿ ದೇವಾಲಯ ಮುಂಭಾಗ ಇದ್ದ ಅರಳಿಮರ ಕಡಿದು ಕಟ್ಟಡ ನಿರ್ಮಾಣ ಮಾಡಲು ಸಮಿತಿ ಮುಂದಾಗಿತ್ತು. ಅರಳಿಮರದ ಕಾಂಡವನ್ನು ಅರ್ಧ ಕಡಿಯುವಷ್ಟರಲ್ಲಿ ಗರಗಸ ಸೇರಿದಂತೆ ಇತರೆ ಸಾಮಗ್ರಿಗಳು ಮುರಿದು ಹೋಗಿದ್ದು, ಮರಕ್ಕೆ ಯಾವುದೇ ರೀತಿ ಧಕ್ಕೆಯಾಗದೆ ಅರ್ಧಕ್ಕೆ ಕಾಂಡ ಮುರಿದಿದೆ. ಅದರೊಳಗೆ ಹನುಮನ ಚಿತ್ರ ಪ್ರತ್ಯಕ್ಷವಾಗುತ್ತಿದೆ ಎನ್ನಲಾಗಿದ್ದು, ಅಲ್ಲಿದ್ದಭಕ್ತರು ಪೂಜೆ ಸಲ್ಲಿಸಿ ಭಕ್ತಿ-ಭಾವ ಮೆರೆದರು.
ವಿಷಯ ತಿಳಿದ ಸಾವಿರಾರು ಭಕ್ತರು ದೇವಾಲಯಕ್ಕೆ ಆಗಮಿಸಿ ಮರದಲ್ಲಿದ್ದ ಹನುಮನ ಆಕೃತಿ ನೋಡಿ ಅಚ್ಚರಿ ವ್ಯಕ್ತಪಡಿಸಿದರು.

