ಉದಯರಶ್ಮಿ ದಿನಪತ್ರಿಕೆ
ಚಡಚಣ: ಗುರು ಶಿಷ್ಯರ ನಡುವಿನ ಅನ್ಯೋನ್ಯ ಸಂಬಂಧವಿದೆ. ಗುರುವಿನ ನೆರವು ಇಲ್ಲದೆ ಏನು ಸಾಧಿಸಲು ಸಾಧ್ಯವಿಲ್ಲ. ನನ್ನ ಗುರು ನವಲಗುಂದ ಹುರಕಡ್ಲಿ ಅಜ್ಜನವರಿಂದ ನಾನು ಪ್ರಭಾವಿತನಾಗಿ ಅವರು ಹೇಳಿಕೊಟ್ಟ ಹಾದಿಯಲ್ಲಿ ಇರುವೆ ಗುರುಪೌರ್ಣಿಮೆಯ ದಿನ ಅವರ ನೆನೆಪಿನ ದಿನ ಕೂಡ ಎಂದು ಸಂಸದ ರಮೇಶ ಜಿಗಜಿಣಗಿ ಹೇಳಿದರು.
ಶ್ರೀ ಗುರು ಚಂದ್ರಶೇಖರ ಸಂಸ್ಥಾನ ಹಿರೇಮಠ ತದ್ದೇವಾಡಿಯಲ್ಲಿ ಗುರುಪೌರ್ಣಿಮೆಯ ಧರ್ಮಸಭೆಯನ್ನು ಉದ್ಘಾಟಿಸಿ ಮಾತನಾಡಿದ ಅವರು, ಹಿಂದಿನ ಕಾಲದಲ್ಲಿ ನಾನು ಕೂಡ ಮಠಗಳಿಂದ ಸಣ್ಣ ವಯಸ್ಸಿನಲ್ಲಿ ಮುಧೋಳ ಶ್ರೀ ಮೃತ್ಯುಂಜಯ ಮಠದಿಂದ ನನ್ನ ಶಿಕ್ಷಣ ಪ್ರಾರಂಭವಾಯಿತು. ಆ ದಿನ ಉತ್ತರ ಕರ್ನಾಟಕದಲ್ಲಿ ವಿದ್ಯಾರ್ಥಿಗಳು ವಸತಿ ಶಾಲೆಗಳು ಇಲ್ಲದೆ ಮಠದಲ್ಲಿ ಇರುವ ದಿನವಾಗಿತು. ಆದ್ದರಿಂದ ಮಠಗಳ ಮೇಲೆ ನನಗೆ ಹೆಚ್ಚು ಗೌರವವಿದೆ.
ನಾನು ಸಮಾಜ ಕಲ್ಯಾಣ ಸಚಿವ ಇದ್ದಾಗ ಉತ್ತರ ಕರ್ನಾಟಕದಲ್ಲಿ ವಿದ್ಯಾರ್ಥಿಗಳಿಗೆ ವಸತಿ ನಿಲಯ ಸೌಲಭ್ಯವಿಲ್ಲದ ಪರಿಸ್ಥಿತಿಯನ್ನು ಗಮನಿಸಿ ನಾನು ಆವಾಗ ಸದನದಲ್ಲಿ ವಸತಿ ನಿಲಯಕ್ಕೆ ಪ್ರಸ್ತಾವನೆ ಸಲ್ಲಿಸಿದ್ದೆ ಉತ್ತರ ಕರ್ನಾಟಕದಲ್ಲಿ ಮೊಟ್ಟ ಮೊದಲು ವಸತಿ ನಿಲಯಗಳು ಪ್ರಾರಂಭ ಮಾಡಿದ್ದು ನಾನೆ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮಾಜಿ ಸಚಿವ ಅಪ್ಪಾಸಾಹೇಬ ಪಟ್ಟಣಶೆಟ್ಟಿ ವಹಿಸಿ ಮಾತನಾಡಿ, ತದ್ದೇವಾಡಿ ಗ್ರಾಮದ ಶ್ರೀ ಮಠ ಕಳೆದ ೯ ದಿನಗಳಿಂದ ದಿನಂಪ್ರತಿ ಧಾರ್ಮಿಕ ಕಾರ್ಯಗಳು, ಕೃಷಿ ಚಿಂತನೆ, ಬಯಲಾಟ, ಸಾಮೂಹಿಕ ವಿವಾಹ, ಗುರುವಂದನ ಹಾಗೂ ಕವಿಗೊಷ್ಠಿ, ಹಳ್ಳಿಯ ಜನಪದ ಸಿರಿ ಮತ್ತು ಮಕ್ಕಳ ಮನರಂಜನೆ, ಸಸಿ ವಿತರಣೆ, ಕಲಾವಿದರಿಗೆ, ನಿವೃತ್ತ ನೌಕರರಿಗೆ ಮತ್ತು ವಿಶೇಷ ಸಾಧನೆ ಮಾಡಿದ ಸಾಧಕರಿಗೆ ಸನ್ಮಾನ,ಯೋದರಿಗೆ ಗೌರವ ಕಾರ್ಯಕ್ರಮ ಹಿಡಿದು ಈ ಶ್ರೀ ಮಠ ಸಾಗಿ ಬಂದು ಇವತ್ತು ಗುರು-ಶಿಷ್ಯರಿಗಾಗಿ ಗೌರುಪೌರ್ಣಿಮೆಯ ಹಬ್ಬವನ್ನು ಈ ಸಂಸ್ಥಾನ ಮಠ ಆಯೋಜನೆ ಮಾಡಿದ್ದು ಗ್ರಾಮಸ್ಥರಲ್ಲಿ ಸಂತಸ ಮತ್ತು ಗೌರವ ತಂದಿದೆ ಎಂದರು.
ಕಾರ್ಯಕ್ರಮದ ಸಾನಿಧ್ಯವನ್ನು ಶ್ರೀಗುರುಪಾದೇಶ್ವರ ಶಿವಾಚಾರ್ಯ ಮಾಹಾಸ್ವಾಮಿ ವಹಿಸಿ,ಈ ಗ್ರಾಮ ಹತ್ತು ದಿನಗಳಿಂದ ಅನೇಕ ಕಾರ್ಯಕ್ರಮದಿಂದ ಆಚಾರ-ವಿಚಾರ ಮತ್ತು ಸಾಮಾಜಿಕ, ಧಾರ್ಮಿಕ, ಶೈಕ್ಷಣಿಕ, ರೈತರ ಚಿಂತನೆ, ಗೌರವ ಸನ್ಮಾನಕ್ಕೆ ಸಾಕ್ಷಿಯಾಗಿ.ಇಂದು ಗ್ರಾಮಸ್ಥರೆಲ್ಲ ಸುಮಾರು ೫ ಕ್ವಿಂಟಲ್ ಕಲರ-ಕಲರ ಬಣ್ಣಗಳಿಂದ ಈ ಹಬ್ಬವನ್ನು ಅತೀ ವಿಜೃಂಭಣೆಯಿಂದ ಮೇರವಣಿಗೆ ಮೂಲಕ ಎಲ್ಲರೂ ಆಚರಣೆ ಮಾಡಿದ್ದಾರೆ.
ಗುರುಪೌರ್ಣಿಮೆಯನ್ನು ಗುರುವನ್ನು ಆರಾಧನೆ ಮಾಡುವ ಒಂದು ವಿಶೇಷ ದಿನವಾಗಿದೆ. ಈ ಗ್ರಾಮದ ಮಠ ಸರ್ವರನ್ನು ಸಮಾನವಾಗಿ ಕಂಡಿದೆ. ನಾನಾ ಕಾರ್ಯಕ್ರಮದಿಂದ ಈ ಮಠ ಕೆಲಸ ಮಾಡುತ್ತಿದೆ.ಈ ಭಾಗದಲ್ಲಿ ಯಾವುದಾದರೂ ಹಬ್ಬದಿಂದ ಗುರುವಿಗೆ ಗೌರವ ಸಲ್ಲುತ್ತಿದೆ ಎಂದರೆ ಅದು ತದ್ದೇವಾಡಿ ಶ್ರೀ ಗುರು ಮಠ ಇಂತಹ ಕಾರ್ಯಗಳು ಹೀಗೆ ಮುಂದುವರೆಯಲಿ ಎಂದು ಆಶೀರ್ವಚನ ನೀಡಿದರು.
ಈ ವೇಳೆ ಅಭಿನವ ರಾಜೋಟೇಶ್ವರ ಶಿವಾಚಾರ್ಯ ಮಹಾಸ್ವಾಮಿಗಳು ತಡವಲಗಾ, ಗುರುಚಂದ್ರಶೇಖರ ತದ್ದೇವಾಡಿ ಶ್ರೀಗಳು ಸಾನಿಧ್ಯ ವಹಿಸಿದ್ದರು.
ರಾಘವೇಂದ್ರ ಕಾಪಸೆ, ಭೀಮನಗೌಡ ಬಿರಾದಾರ, ಬಾಪುರಾಯ ಲೋಣಿ, ಶ್ರೀಶೈಲಗೌಡ ಬಿರಾದಾರ, ಸಂಜೀವ ಐಹೊಳೆ, ಸಾಹೇಬಗೌಡ ಪಾಟೀಲ, ಭೀಮರಾಯ ಬಿರಾದಾರ, ಎಲ್.ಜೆ.ಹಿರೇಮಠ, ವಿಠ್ಠಲ ವಡಗಾಂವ,ಸಾಹೇಹಗೌಡ ಬಿರಾದಾರ, ಜಗನ್ನಾಥಗೌಡ ಬಿರಾದಾರ, ಗ್ರಾಮಸ್ಥರು ಮತ್ತು ಸುತ್ತಮುತ್ತಲಿನ ಗ್ರಾಮಸ್ಥರು ಉಪಸ್ಥಿತರಿದ್ದರು.
ಕಾರ್ಯಕ್ರಮ ನಿಯೋಜನೆ ವ್ಯವಸ್ಥಾಪಕರು ಮಹಾತೇಂಶ ಸ್ವಾಮಿಗಳು ಕಾರ್ಯಕ್ರಮ ಸ್ವಾಗತ, ನಿರೂಪಣೆ, ವಂದನಾರ್ಪಣೆ ಮಾಡಿದರು. ಕಾರ್ಯಕ್ರಮಕ್ಕೆ ಬಂದ ಭಕ್ತರು ಅನ್ನ ಪ್ರಸಾದ ಸವಿದರು.
ಶ್ರೀಗಳ ಪಾದಪೂಜೆ
ಶ್ರೀ ಗುರುಚಂದ್ರಶೇಖರ ತದ್ದೇವಾಡಿ ಶ್ರೀಗಳು ಶ್ರೀ ಗುರುಗುರುಪಾದೇಶ್ವರ ಶಿವಾಚಾರ್ಯ ಮಹಾಸ್ವಾಮಿ ಹತ್ತಳ್ಳಿ ಮತ್ತು ಶ್ರೀ ಅಭಿನವ ರಾಜೋಟೇಶ್ವರ ಶಿವಾಚಾರ್ಯ ಮಹಾಸ್ವಾಮಿಗಳು ತಡವಲಗಾ ಇವರ ಪಾದ ಪೂಜೆ ಮಾಡುವ ಮೂಲಕ ಗುರುಪೌರ್ಣಿಮೆ ಕಾರ್ಯಕ್ರಮಕ್ಕೆ ಸಾಕ್ಷಿಯಾದರು.

