ಉದಯರಶ್ಮಿ ದಿನಪತ್ರಿಕೆ
ಬಸವನಬಾಗೇವಾಡಿ: ಪಟ್ಟಣದ ತಾಲೂಕು ಪಂಚಾಯಿತಿ ಮುಂಭಾಗ ಕರ್ನಾಟಕ ರಾಜ್ಯ ಗ್ರಾಮ ಪಂಚಾಯಿತಿ ನೌಕರರ ಸಂಘದ ತಾಲೂಕು ಘಟಕದಿಂದ ಗ್ರಾಮ ಪಂಚಾಯಿತಿ ನೌಕರರ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸುವ ಮನವಿ ಪತ್ರವನ್ನು ಬುಧವಾರ ತಾಪಂ ಇಓ ಪ್ರಕಾಶ ದೇಸಾಯಿ ಅವರಿಗೆ ಸಲ್ಲಿಸಲಾಯಿತು.
ಅವರು ಸಲ್ಲಿಸಿದ ಮನವಿಯಲ್ಲಿ ಗ್ರಾಮ ಪಂಚಾಯಿತಿ ನೌಕರರ ಬಾಂಧವರ ಜೇಷ್ಠತಾ ಪಟ್ಟಿ ತಯಾರಿಸುವದು. ಬಡ್ತಿ ನೀಡುವದು. ಬಾಕಿ ವೇತನ ನೀಡುವುದು. ಬಾಕಿ ಉಳಿದ ಅನೋದನೆ ನೀಡುವದು. ಕಾರ್ಮಿಕ ವಿರೋಧಿ ನಾಲ್ಕು ಲೇಬರ್ ಕೋಡ್ಗಳ ಜಾರಿ ವಿರೋಧಿಸಿ, ಕರಡು ಅಧಿಸೂಚನೆಯಲ್ಲಿ ರೂ.೩೧೦೦೦ ನಿಗದಿಪಡಿಸಿ ಅಂತಿಮಗೊಳಿಸಬೇಕು. ಪಿಂಚಿಣಿ, ಸೇವಾ ಹಿರಿತನ ಭತ್ಯೆ ಹೆಚ್ಚಳ, ಪಂಚಾಯಿತಿಗೊಂದು ಎಸ್ಡಿಎ ೨ ನೇ ಡಿಇಓ ನೇಮಕಾತಿ ಮತ್ತು ಆರೋಗ್ಯ ವಿಮೆ ಜಾರಿ ಮಾಡುವುದು. ಸ್ವಚ್ಛವಾಹಿನಿಯರ ಒಡಂಬಡಿಕೆ ರದ್ದು. ತರಬೇತಿ ಪಡೆದ ಎಲ್ಲರಿಗೂ ಕಡ್ಡಾಯ ಕೆಲಸ ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸಬೇಕೆಂದು ಆಗ್ರಹಿಸಲಾಗಿದೆ.
ಮನವಿ ಪತ್ರವನ್ನು ಸ್ವೀಕರಿಸಿದ ತಾಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಪ್ರಕಾಶ ದೇಸಾಯಿ ತಮ್ಮ ಬೇಡಿಕೆಗಳನ್ನು ಈಡೇರಿಸಲು ಮೇಲಾಧಿಕಾರಿಗಳ ಗಮನಕ್ಕೆ ತಂದು ಪ್ರಾಮಾಣಿಕವಾಗಿ ಪ್ರಯತ್ನಿಸಲಾಗುವದು ಎಂದು ಭರವಸೆ ನೀಡಿದರು.
ಈ ಸಂದರ್ಭದಲ್ಲಿ ಕರ್ನಾಟಕ ರಾಜ್ಯ ಗ್ರಾಮ ಪಂಚಾಯಿತಿ ನೌಕರರ ಸಂಘದ ತಾಲೂಕಾಧ್ಯಕ್ಷ ಎಸ್.ಬಿ.ಗಂಗಶೆಟ್ಟಿ, ಪ್ರಧಾನ ಕಾರ್ಯದರ್ಶಿ ಮಲ್ಲಯ್ಯ ಗಣಿಮಠ, ಶಿವಾನಂದ ಭಾವಿಕಟ್ಟಿ, ಚಂದ್ರಶೇಖರ ಗಿರಿನಿವಾಸ , ಮಡೆಪ್ಪ ಪೂಜಾರಿ, ಚಂದ್ರಶೇಖರ ಉಂಡಿ, ದಸ್ತಗೀರ ಇನಾಮದಾರ, ಎಸ್.ಎಸ್.ಬಿರಾದಾರ, ಎಸ್.ಆರ್.ಹಾವಿನಾಳ, ಯಮನಪ್ಪ ಉಮನಾಬಾದಿ,ಎಂ.ಕೆ.ನಡಗೇರಿ, ಎಂ.ಆರ್.ತಳಕೇರಿ, ಎಸ್.ಆರ್.ಬಳಗಾನೂರ, ಎಲ್.ಎನ್.ಮಳಗಿ, ಬಿ.ಟಿ.ನೇಗಿನಾಳ, ಮಹಾದೇವಪ್ಪ ಬಿಸನಾಳ ಇತರರು ಇದ್ದರು.

