ಉದಯರಶ್ಮಿ ದಿನಪತ್ರಿಕೆ
ಚಿಕ್ಕಪಡಸಲಗಿ: ದೈಹಿಕ ಶಿಕ್ಷಣ ಕ್ಷೇತ್ರದಲ್ಲಿ ಅಮೋಘ ಸೇವೆ ಸಲ್ಲಿಸಿ ವಯೋ ನಿವೃತ್ತರಾಗಿರುವ ದೈಹಿಕ ಶಿಕ್ಷಣ ಶಿಕ್ಷಕರನ್ನು ಕನಾ೯ಟಕ ರಾಜ್ಯ ದೈಹಿಕ ಶಿಕ್ಷಣ ಶಿಕ್ಷಕರ ಸಂಘ ಜಮಖಂಡಿ ತಾಲೂಕು ಘಟಕ ವತಿಯಿಂದ ಸನ್ಮಾನಿಸಿ ಗೌರವಿಸಲಾಯಿತು.
ಕ್ಷೇತ್ರ ಸಮನ್ವಯಾಧಿಕಾರಿಗಳ ಕಾಯಾ೯ಲಯದಲ್ಲಿ ಪ್ರಸ್ತುತ 2025-26 ನೇ ಸಾಲಿನ ಜಮಖಂಡಿ ತಾಲ್ಲೂಕು ಪ್ರಾಥಮಿಕ ಹಾಗೂ ಪ್ರೌಢಶಾಲೆಗಳ ವಲಯ ಮತ್ತು ತಾಲೂಕು ಮಟ್ಟದ ಕ್ರೀಡಾಕೂಟದ ಸಂಘಟನೆಗಾಗಿ ಹಮ್ಮಿಕೊಂಡಿದ್ದ ಪೂರ್ವಭಾವಿ ಸಭೆಯಲ್ಲಿ ಚಿಕ್ಕಪಡಸಲಗಿ ಶಿವಶರಣ ಹರಳಯ್ಯ ಸ್ಮಾರಕ ಪ್ರೌಢಶಾಲೆಯ ನಿವೃತ್ತ ದೈಹಿಕ ಶಿಕ್ಷಕ ಬಸವರಾಜ ಅನಂತಪೂರ ಹಾಗೂ ಜಮಖಂಡಿ ಡಿ.ಬಿ.ಇ.ಸಂಸ್ಥೆಯ ದೈಹಿಕ ಶಿಕ್ಷಕ ಮಲ್ಲು ಪಟ್ಟಣಶೆಟ್ಟಿ ಅವರನ್ನು ಹೃದಯಸ್ಪರ್ಶಿಯಾಗಿ ಸನ್ಮಾನಿಸಿ ಗೌರವಿಸಲಾಯಿತು.
ಅಧ್ಯಕ್ಷತೆ ವಹಿಸಿ ಮಾತನಾಡಿದ ಬಿಇಒ ಅಶೋಕ ಬಸಣ್ಣವರ, ಅನುಪಮ ಸೇವೆ ಸಲ್ಲಿಸಿ ವಿಶ್ರಾಂತ ಜೀವನಕ್ಕೆ ಕಾಲಿರಿಸಿರುವ ಈ ಮಹನೀಯರ ಸೇವಾವಧಿಯಲ್ಲಿನ ಕಾಯಕಗಳು ಕಾರ್ಯಕ್ಷಮತೆಯಿಂದ ಸಾಗಿವೆ.ಅನಂತಪೂರ ಅವರು ವೃತ್ತಿಯಿಂದ ನಿವೃತ್ತಿ ಹೊಂದಿದರು ಸಹ ಇನ್ನೂ ಚಿಕ್ಕಪಡಸಲಗಿ ಹರಳಯ್ಯ ಪ್ರೌಢಶಾಲೆಗೆ ಅವರ ಸೇವೆ ಲಭಿಸುತ್ತಿದೆ.ಇಂಥ ಸೇವಾಭಾವದ ಮನೋಭಾವವುಳ್ಳವರನ್ನು ಕಾಣುವುದು ವಿರಳ.ಮಕ್ಕಳಿಗೆ ಕ್ರೀಡಾ ಪ್ರೇರಣೆಯ ಉತ್ತೇಜನ ದೊರೆಯಲಿ ಎಂದು ಶುಭ ಹಾರೈಸಿದರು.
ಅತಿಥಿಗಳಾಗಿ ತಾಲೂಕಾ ದೈಹಿಕ ಶಿಕ್ಷಣ ಪರಿವೀಕ್ಷಕಿ ಶ್ರೀಮತಿ ಪಂಚಾಕ್ಷರಿ ನಂದೀಶ ಮೇಡಂ, ದೈಹಿಕ ಶಿಕ್ಷಕರ ಸಂಘದ ತಾಲೂಕಾಧ್ಯಕ್ಷ ಸುರೇಶ ಬೋಸ್ಲೆ ಇತರರು ಪಾಲ್ಗೊಂಡಿದ್ದರು.
ತಾಲೂಕು ಪ್ರೌಢಶಾಲಾ ಸಹ ಶಿಕ್ಷಕರ ಸಂಘದ ನರಸಿಂಹ ಕಲ್ವೊಳ್ಳಿ, ಹಿರೇಪಡಸಲಗಿ ಜಿಎಚ್ ಎಸ್ ಶಾಲೆಯ ನಂದಗಾವ್, ಜಮಖಂಡಿ ಬನಶಂಕರಿ ಶಾಲೆಯ ದೈಹಿಕ ಶಿಕ್ಷಕ ಬೆಳ್ಳಿಕಟ್ಟಿ, ಟೀಚರ್ ಸೊಸೈಟಿ ಅಧ್ಯಕ್ಷೆ ಶ್ರೀಮತಿ ಮಿಜಿ೯ ಮೇಡಂ, ದೈಹಿಕ ಶಿಕ್ಷಕ ಸದಾಶಿವ ಪಕಾಲಿ,ಶರಣಪ್ಪ ಅರೆವ್ವಗೋಳ, ತೇಲಿ, ಕುಮಾರ ಜನವಾಡ,ಸದಾಶಿವ ಕುಂಬಾರ, ಅಪ್ಪು ಧರಿಗೌಡ, ಶೂಪಾ೯ಲಿ ಮೊದಲಾದವರು ಉಪಸ್ಥಿತರಿದ್ದರು.

