ಉದಯರಶ್ಮಿ ದಿನಪತ್ರಿಕೆ
ಚಿಕ್ಕಪಡಸಲಗಿ: ಪ್ರಸ್ತುತ ಬೇಸಿಗೆಯ ಬೀರು ಬಿಸಿಲಿನ ತಾಪಮಾನದಲ್ಲಿ ಜಮಖಂಡಿ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾಯಾ೯ಲಯದ ಆವರಣದಲ್ಲಿ ಕುಡಿಯುವ ನೀರಿನ ಸಮರ್ಪಕವಾದ ವ್ಯವಸ್ಥೆಗೆ ಬಿಇಒ ಅಶೋಕ ಬಸಣ್ಣವರ ಚಾಲನೆ ನೀಡಿದರು.
ಕಚೇರಿ ಆವರಣದಲ್ಲಿ ಬೋರವೆಲ್ ಕೊರೆಸಿ ವಾಟರ್ ಟ್ಯಾಂಕ್ ಯೊಂದನ್ನು ನಿಮಿ೯ಸಿದ್ದು ಅದಕ್ಕೆ ನೂತನ ವಿದ್ಯುತ್ ಮೀಟರ್ ಬೋರ್ಡ್ ಆಳವಡಿಸಿ ವಿದ್ಯುಕ್ತವಾಗಿ ನೀರು ಹರಿಸುವ ಕಾರ್ಯಕ್ರಮಕ್ಕೆ ಬಿಇಒ ಅಶೋಕ ಬಸಣ್ಣವರ ಬಟನ್ ಒತ್ತುವ ಮೂಲಕ ಅಧಿಕೃತವಾಗಿ ಚಾಲನೆ ನೀಡಿದರು. ಈ ಸಂದರ್ಭದಲ್ಲಿ ಕಚೇರಿಯ ಸಿಬ್ಬಂದಿಗಳು, ಸಂಘ, ಸಂಸ್ಥೆಗಳ ಮುಖಂಡರು, ಗಣ್ಯರು, ಹಲ ಮಹನೀಯರು ಉಪಸ್ಥಿತರಿದ್ದರು.
ನೀರು ಚಿಮ್ಮುತ್ತಿದ್ದಂತೆ ಅಲ್ಲಿದ್ದವರ ಮೊಗಭಾವದಲ್ಲಿ ಜಲಸೆಲೆಯ ಹರ್ಷಯುತ ಸಂತಸ ಮೊಳಕೆಯೊಡೆದು ಚಿಮ್ಮಿತು. ಹಷೋ೯ಲ್ಲಾಸದ ಜಲನೊರೆ ಸಂಭ್ರಮ ಕಳೆಗಟ್ಟಿತ್ತು. ಶುಚಿ ಪರಿಸರಕ್ಕಾಗಿ ಕಚೇರಿ ಆವರಣದಲ್ಲಿ ನೆಡಲಾದ ಹಲ ಸಸ್ಯ ಜೀವಗಳಿಗೂ ಈ ನೀರಿನ ವ್ಯವಸ್ಥೆ ಅನುಕೂಲವಾಗಲಿದೆ. ಅಲ್ಲಿನ ಗಿಡಗಳಿಗೆ ಜಲದಾಹ ನೀಗಿಸಿ ಹಸಿರು ತೋರಣ ಸೃಷ್ಟಿಸಿ ತಂಪು ವಾತಾವರಣ ಸೂಸಲಿದೆ. ಮುಂದಿನ ದಿನಮಾನಗಳಲ್ಲಿನ ಬೇಸಿಗೆ ಕಾಲದಲ್ಲಿ ಎದುರುಗೊಳ್ಳಲ್ಲಿರುವ ಸಂಭವನೀಯ ವಿಪರೀತ ಬಿಸಿಲು ಝಳದ ಖಡಕ್ ಉಷ್ಣಾಂಶವುಳ್ಳ ಋತುಮಾನದಲ್ಲಿ ಜಮಖಂಡಿ ಬಿಇಒ ಕಚೇರಿ ಕೂಲ್ ಕೂಲ್ ಧಾರಣೆಯೊಂದಿಗೆ ಮಿನುಗಲಿದೆ ಎಂಬುದು ಸದ್ಯ ಪ್ರಜ್ಞಾವಂತರ ಅಂಬೋಣ.

