ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ಮಕ್ಕಳ ವಿದ್ಯಾಭ್ಯಾಸದ ಜತೆಗೆ ಶೈಕ್ಷಣಿಕ ಬೆಳವಣಿಗೆ ಕಾಣಲು ಪಾಲಕ-ಪೋಷಕರ ಪಾತ್ರ ಶಿಕ್ಷಕರಷ್ಟೇ ಮಹತ್ವದ್ದಾಗಿದೆ ಎಂದು ನಾಗಠಾಣ ಗ್ರಾಪಂ ಮಾಜಿ ಅಧ್ಯಕ್ಷ ಚಂದ್ರಶೇಖರ ಅರಕೇರಿ ಹೇಳಿದರು.
ಬುಧವಾರದಂದು ತಾಲೂಕಿನ ಅಂಕಲಗಿ ಗ್ರಾಮದ ದುಸಂಗರಾಯ ಗುಡಿಯಲ್ಲಿ ನವ ಚೇತನ ವಿದ್ಯಾ ಸಂಸ್ಥೆಯ ಅಡಿಯಲ್ಲಿ ವಿದ್ಯಾಚೇತನ ಕಿರಿಯ ಪ್ರಾಥಮಿಕ ಶಾಲೆಯನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಮಕ್ಕಳಿಗೆ ಮನೆಯೇ ಮೊದಲ ಪಾಠಶಾಲೆ, ಆದ್ದರಿಂದ ಮಕ್ಕಳ ಉತ್ತಮ ಕಲಿಕೆಗೆ ಪಾಲಕರ ಸಹಕಾರ ಅವಶ್ಯವಿದೆ
ಎಂದು ಹೇಳಿದರು.
ಶಿಕ್ಷಕ ಸಂತೋಷ ಬಂಡೆ ಮಾತನಾಡಿ, ಭಾರತೀಯ ಪರಂಪರೆಯಲ್ಲಿ ಮಕ್ಕಳೇ ದೇವರು ಎಂಬ ಭಾವನೆಯಿದ್ದು, ಅವರಿಗೆ ಬಾಲ್ಯದಿಂದಲೇ ಸಂಸ್ಕಾರ, ಪರಂಪರೆ, ಸಂಸ್ಕೃತಿ ಬಗ್ಗೆ ಅರಿವು ಮೂಡಿಸಬೇಕು. ತಮ್ಮ ಬದುಕಿನ ಗುರಿ ಈಡೇರಿಕೆಗಾಗಿ ಕಾರ್ಯಪ್ರವೃತ್ತರಾಗಬೇಕು. ಈ ಮೂಲಕ ಕುಟುಂಬ, ರಾಜ್ಯ ಮತ್ತು ದೇಶಕ್ಕೆ ಕೀರ್ತಿ ತರಬೇಕು ಎಂದು ಹೇಳಿದರು.
ಸಾನಿಧ್ಯ ವಹಿಸಿದ್ದ ಆಹೇರಿ ವಿರಕ್ತಮಠದ ಚಿಲ್ಲಾಲಿಂಗ ಸ್ವಾಮೀಜಿ ಮಾತನಾಡಿ, ಪಾಲಕರು ಮಕ್ಕಳನ್ನು ಶಾಲೆಗೆ ಕಳುಹಿಸಿದ ನಂತರ ಪ್ರತಿಯೊಂದು ಹಂತದಲ್ಲಿ, ಶಾಲೆಗೆ ಬಂದು ಮಕ್ಕಳ ಶೈಕ್ಷಣಿಕ ಪ್ರಗತಿಯನ್ನು ಪರಿಶೀಲಿಸಬೇಕು ಮತ್ತು ಮಕ್ಕಳ ಉಜ್ವಲ ಭವಿಷ್ಯಕ್ಕಾಗಿ ಶಿಕ್ಷಕರೊಂದಿಗೆ ಪಾಲಕರ ಸ್ಪಂದನೆ ಅಗತ್ಯವಾಗಿದೆ ಎಂದರು.
ದುಸಂಗರಾಯ ಪೂಜೇರಿ, ಭೀಮರಾಯ ಪೂಜೇರಿ ಸಾನಿಧ್ಯ ವಹಿಸಿದ್ದರು. ದೇವಸ್ಥಾನ ಸಮಿತಿ ಅಧ್ಯಕ್ಷ ಕಲ್ಲಪ್ಪ ಇಂಡಿ, ಕಾರ್ಯದರ್ಶಿ ಕರೆಪ್ಪ ನಾಗರಾಳ, ಗ್ರಾಪಂ ಅಧ್ಯಕ್ಷರ ಪತಿ ಬಾಬು ನಾಯಕ, ಉಪಾಧ್ಯಕ್ಷ ಸಿದ್ದಪ್ಪ ಬಿಸನಾಳ, ಸದಸ್ಯರಾದ ರಾಮು ಅಂಕಲಗಿ, ಹನಮಂತ ತೇಲಿ, ದುರ್ಗಪ್ಪ ವಡ್ಡರ, ಗ್ರಾಪಂ ಮಾಜಿ ಅಧ್ಯಕ್ಷ ಬಸವರಾಜ ಗಾಣಿಗೇರ,
ಇಂಡಿ ಎಸ್ ಬಿ ಐ ಬ್ಯಾಂಕ್ ಕೃಷಿ ಅಧಿಕಾರಿ ಪ್ರಕಾಶ ಗುಜ್ಜಲಕರ, ನಾಗಠಾಣದ ಸೋಮು ಹಂಡಿ, ಸುರೇಶ ಗಿರಿಸಾಗರ, ಅಮೋಘಸಿದ್ದ ಗಿರಿಸಾಗರ, ಸೋಮನಾಥ ದೇವಕರ, ವಿದ್ಯಾ ಸಂಸ್ಥೆಯ ಅಧ್ಯಕ್ಷ ಲಕ್ಷ್ಮಣ ಪಾತ್ರೋಟಿ, ಉಪಾಧ್ಯಕ್ಷ ಶ್ರೀಕಾಂತ ಗುಜ್ಜಲಕರ, ಕಾರ್ಯದರ್ಶಿ ಎನ್ ಎಲ್ ಪಾತ್ರೋಟಿ ಸೇರಿದಂತೆ ಅನೇಕರು ಭಾಗವಹಿಸಿದ್ದರು. ಡಾ ಪ್ರಶಾಂತ ಗುಜ್ಜಲಕರ, ಉದಯಕುಮಾರ ದೇವಕರ ಸರಸ್ವತಿ ಮತ್ತು ಬಸವಣ್ಣನವರ ಫೋಟೋ ಪೂಜೆ ನೆರವೇರಿಸಿದರು.
ಗ್ರಾಮದ ಹಿರಿಯರು, ತಾಯಂದಿರರು,ಮಕ್ಕಳು ಹಾಜರಿದ್ದರು.

