ಉದಯರಶ್ಮಿ ದಿನಪತ್ರಿಕೆ
ಸಿಂದಗಿ: ಬಸವಣ್ಣನವರ ಕಾಯಕ ಮತ್ತು ದಾಸೋಹ ತತ್ವಗಳು ವಿಶ್ವ ಮಾನ್ಯವಾದ ತತ್ವಗಳಾಗಿದ್ದು, ೧೨ನೇ ಶತಮಾನದ ಅಸ್ಪೃಶ್ಯ ಸಮುದಾಯಗಳ ಕಾಯಕಗಳನ್ನು ಗುರುತಿಸಿ ಅವರ ಕಾಯಕಗಳಿಗೆ ಶ್ರೇಷ್ಠ ಮಟ್ಟದ ಸ್ಥಾನಮಾನಗಳನ್ನು ದೊರಕುವಂತೆ ಮಾಡಿದ್ದು ವಿಶ್ವಗುರು ಬಸವಣ್ಣ ಎಂದು ಶಿವಕುಮಾರ ಶಿವಸಿಂಪಿ ಹೇಳಿದರು.
ಸಿಂದಗಿ ಪಟ್ಟಣದ ಸಿ.ಎಮ್.ಮನಗೂಳಿ ಕಲಾ,ವಿಜ್ಞಾನ ಹಾಗೂ ವಾಣಿಜ್ಯ ಮಹಾವಿದ್ಯಾಲಯದಲ್ಲಿ ವಿಶ್ವಗುರು ಬಸವಣ್ಣನವರ ೮೯೨ನೇ ಜಯಂತಿಯ ಅಂಗವಾಗಿ ಐಕ್ಯೂಎಸಿ ಹಾಗೂ ಸಾಂಸ್ಕೃತಿಕ ವೇದಿಕೆ ಇವುಗಳ ಅಡಿಯಲ್ಲಿ ನಡೆದ ಕಾಯಕ ಮತ್ತು ದಾಸೋಹದ ಪರಿಕಲ್ಪನೆ ಎಂಬ ವಿಶೇಷ ಉಪನ್ಯಾಸದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಕಾಯಕದಿಂದ ಬಂದ ಫಲದ ಒಂದು ಪಾಲನ್ನು ಸಮಾಜಕ್ಕೆ ನೀಡುವುದರ ಮೂಲಕ ದಾಸೋಹ ತತ್ವವನ್ನು ಪ್ರಪಂಚಕ್ಕೆ ಪರಿಚಯಿಸಿ ಸಮಾಜದ ಇತರೆ ಕಾರ್ಯಗಳಿಗಿಂತ ಶ್ರೇಷ್ಠ ಮಟ್ಟದ ಕಾರ್ಯವಾಗುವಂತೆ ಮಾಡಿದವರು ಬಸವಣ್ಣನವರಾಗಿದ್ದಾರೆ ಎಂದರು.
ಈ ವೇಳೆ ಡಾ.ಚಂದ್ರಕಾಂತ ಪಾಟೀಲ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ ಪ್ರಾಚಾರ್ಯ ಡಾ.ಬಿ.ಜಿ ಪಾಟೀಲ ಮಾತನಾಡಿದರು. ಕಾರ್ಯಕ್ರಮದಲ್ಲಿ ಡಾ.ಅರವಿಂದ ಮನಗೂಳಿ ಡಾ.ಅಂಬರೀಶ ಬಿರಾದರ, ಎಸ್.ಕೆ. ಹೂಗಾರ, ಜಿ.ಜಿ.ಕಾಂಬಳೆ, ಸತೀಶ ಬಿರಾದಾರ, ಎಂ.ಡಿ.ಸುಂಗಠಾಣ, ಅಮಿತ ಈಳಗೇರ, ಡಾ.ಆರತಿ ಅಳಗುಂಡಗಿ, ಗೀತಾ ಮುರುಗಾನೂರ, ಸುಧಾ ಮೈಶಾಳೆ, ಸುರೇಖಾ ರಾಠೋಡ ಸೇರಿದಂತೆ ಮಹಾವಿದ್ಯಾಲಯದ ಬೋಧಕ ಬೋಧಕೇತರ ಸಿಬ್ಬಂದಿಗಳು ಹಾಗೂ ವಿದ್ಯಾರ್ಥಿಗಳು ಇದ್ದರು.
ಸಭಾ ಫೂಲವಾಲೆ ನಿರೂಪಿಸಿದರು. ರಾಹುಲ ಕಾಂಬಳೆ ಸ್ವಾಗತಿಸಿದರು. ಐಕ್ಯೂಎಸಿ ಸಂಯೋಜಕ ಬಿ.ಡಿ.ಮಾಸ್ತಿ ವಂದಿಸಿದರು.

