ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ೨೦೨೫-೨೬ನೇ ಸಾಲಿನ ಮೂಲಭೂತ ಸೌಕರ್ಯ ಯೋಜನೆಯಡಿ ನಗರ ಮತಕ್ಷೇತ್ರದ ವ್ಯಾಪ್ತಿಯ ವಿವಿಧ ತಾಂಡಾಗಳಲ್ಲಿ ಹೈಮಾಸ್ಕ ದೀಪಗಳನ್ನು ಅಳವಡಿಸುವ ಕಾಮಗಾರಿ ಕೈಗೊಳ್ಳಲು ರೂ.೪೯.೯೦ ಲಕ್ಷ ಅನುದಾನ ಮಂಜೂರಿಸಲಾಗಿದೆ.
ಕಳೆದ ಚಳಿಗಾಲ ಅಧಿವೇಶನದ ವೇಳೆ (೨೦೨೫ ಮಾರ್ಚ ೧೮ ರಂದು) ನಗರ ಶಾಸಕರಾದ ಬಸನಗೌಡ ಪಾಟೀಲ ಯತ್ನಾಳ ರವರು, ಕರ್ನಾಟಕ ತಾಂಡಾ ಅಭಿವೃದ್ಧಿ ನಿಗಮದ ಅಧ್ಯಕ್ಷರಿಗೆ ಪತ್ರ ಬರೆದು, ಈ ಕೆಳಕಂಡ ತಾಂಡಾಗಳಲ್ಲಿ ಹೈಮಾಸ್ಕ್ ದೀಪಗಳನ್ನು ಅಳವಡಿಸುವ ಕಾಮಗಾರಿಗೆ ಅನುದಾನ ಬಿಡುಗಡೆಗೊಳಿಸಲು ಕೋರಿದ್ದರು. ಅದಕ್ಕೆ ಸ್ಪಂದಿಸಿ, ಇದೀಗ ಮಂಜೂರಾತಿ ನೀಡಲಾಗಿದೆ. ಆದಷ್ಟು ಶೀಘ್ರವಾಗಿ ಪಂಚಾಯತ್ ರಾಜ್ ಎಂಜನಿಯರಿಂಗ್ ವಿಭಾಗ ವಿಜಯಪುರ ಮೂಲಕ ಕಾಮಗಾರಿ ಕೈಗೊಳ್ಳಲಾಗುವುದು.
ತೊರವಿ ತಾಂಡಾ ನಂ.೧, ೨, ೩, ಕೌಜಲಗಿ ತಾಂಡಾ, ಬಾರಾಕೊಟ್ರಿ ತಾಂಡಾ, ಭೂತನಾಳ ತಾಂಡಾ (ಪೂರ್ವ), ಭೂತನಾಳ ತಾಂಡಾ (ಪಶ್ಚಿಮ), ಸೇವಾಲಾಲ್ ನಗರ ತಾಂಡಾ, ಖಂಡಕಾರಿ ತಾಂಡಾ ಹಾಗೂ ಬೇಗಮ್ ತಲಾಬ್ ತಾಂಡಾ (ದೊಡ್ಡಿ) ದಲ್ಲಿ ತಲಾ ರೂ.೪.೯೯ ಲಕ್ಷದಂತೆ ಒಟ್ಟು ರೂ.೪೯.೯೦ ಲಕ್ಷ ಮೊತ್ತದಲ್ಲಿ ೧೦ ಹೈಮಾಸ್ಟ್ ಗಳನ್ನು ಅಳವಡಿಸಲಾಗುತ್ತದೆ ಎಂದು ನಗರ ಶಾಸಕರ ಸಾರ್ವಜನಿಕನ ಸಂಪರ್ಕ ಕಾರ್ಯಾಲಯದ ಪ್ರಕಟಣೆ ತಿಳಿಸಿದೆ.
