ಉದಯರಶ್ಮಿ ದಿನಪತ್ರಿಕೆ
ಕೊಲ್ಹಾರ: ಸರಕಾರದ ಜಾತಿ ಪಟ್ಟಿಯಲ್ಲಿ ಆದಿಬಣಜಿಗ ಸಮಾಜವನ್ನು ಪರಿಗಣಿಸಿರುವದನ್ನು ಅಖಿಲ ಕರ್ನಾಟಕ ಆದಿಬಣಜಿಗ ಸಮಾಜ ಕಲ್ಯಾಣ ಸಮಿತಿ ರಾಜ್ಯ ಘಟಕದ ಆಡಳಿತ ಮಂಡಳಿ ಸ್ವಾಗತಿಸಿದ್ದಾರೆ.
ಈ ಕುರಿತು ಪತ್ರಿಕಾ ಪ್ರಕಟಣೆ ನಿಡಿರುವ ಸಮಿತಿಯ ಸಂಘಟನಾ ಕಾರ್ಯದರ್ಶಿ ಶರಣಬಸವ ಕಿವಡನ್ನವರ ಸರಕಾರ ಆದಿಬಣಜಿಗ ಸಮಾಜ ಜಾತಿಯನ್ನು ೨ಎ ಅಡಿಯಲ್ಲಿ ಸೇರಿಸಿ ಆದೇಶ ಮಾಡಬೇಕು ಎಂದು ಆಗ್ರಹಿಸಿದರು.
೧೮೯೩ ಬ್ರಿಟಿಷರ ಆಡಳಿತ ಕಾಲದಲ್ಲಿ ಆದಿಬಣಜಿಗ ಎಂದು ಜಾತಿ ಗೆಜೆಟ್ ನಲ್ಲಿ ನಮೂದಾಗಿತ್ತು ಆದಾದ ಮೇಲೂ ನಂತರ ರಾಜ್ಯ ಸರಕಾರ ಜಾತಿ ಪಟ್ಟಿಯಲ್ಲಿ ಸೇರಿಸಿದ್ದರೂ ಅದು ಬಹಳ ದಿನ ಉಳಿಯಲಿಲ್ಲ ಆದರೂ ಸಂಘಟನೆಯವರೂ ಸುಮ್ಮನೆ ಕೂಡದೆ ಹಲವಾರೂ ಬಾರಿ ಹೋರಾಟ ನಡೆಸಿದ ಹಿನ್ನೆಲೆಯಲ್ಲಿ ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷ ಜಯಪ್ರಕಾಶ ಹೆಗಡೆ ಅವರು ೨೦೨೨ ರಲ್ಲಿ ಸಮಾಜದ ಬಹಿರಂಗ ವಿಚಾರಣೆ ನಡೆಸಿ ಎಲ್ಲ ರೀತಿಯ ಮಾಹಿತಿ ಸಂಗ್ರಹಿಸಿದ ಹೊತ್ತಿಗೆಯನ್ನು ಅಂದಿನ ಮುಖ್ಯಮಂತ್ರಿ ಬಸವರಾಜ ಭೂಮ್ಮಾಯಿ ಅವರಿಗೆ ಸಲ್ಲಿಸಿದ ಪ್ರಯುಕ್ತ ಜಾತಿ ಪಟ್ಟಿಯಲ್ಲಿ ಹೆಸರು ಸೆರ್ಪಡೆಯಾಗಿದೆ ಎಂದರು.
ಈಗಿನ ಸರಕಾರ ಆಯೋಗದ ಹಿಂದಿನ ಅಧ್ಯಕ್ಷರಾದ ಎಚ್ ಕಾಂತರಾಜು ಅವರು ನಿಡಿದ ಹಾಗೂ ಜಯಪ್ರಕಾಶ ಹೆಗಡೆ ಅವರ ಸಲ್ಲಿಸಿದ ಸಮಗ್ರ ವರದಿಯನ್ನು ಕ್ರೂಡಿಕರಿಸಿದ ಸರಕಾರ ಹಿಂದೂಳಿದ ವರ್ಗಗಳ ಆಯೋಗವು ಪ್ರವರ್ಗವಾರು ಜನಸಂಖ್ಯೆ ಅಂದಾಜು ಪತ್ರಿಕೆಯನ್ನು ನಿಡಿರುವದನ್ನು ನಾವು ಸ್ವಾಗತಿಸುತ್ತೇವೆ ಎಂದ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯನವರು ಆದಿಬಣಜಿಗ ಜಾತಿಯನ್ನು ೨ ಎ ವರ್ಗಕ್ಕೆ ಸೇರಿಸಿ ಆದೇಶ ಮಾಡಬೇಕು ಎಂದರು.
ಸಮಿತಿ ಅಧ್ಯಕ್ಷ ಸದಾಶಿವ ಕಾರಡಗಿ ಮಲ್ಲಿಕಾರ್ಜುನ ಗುರನಳ್ಳಿ ಕಾಡಸಿದ್ದಪ್ಪ ಗೌರಿ ಬಸವರಾಜ ಪೀರಣ್ಣವರ ವೈ ಬಿ ಪಾಟೀಲ ಅನೇಕರು ಇದ್ದರು.
