ವಕ್ಫ್ ನೆಪದಲ್ಲಿ ನಡೆವ ಹೋರಾಟದ ಸಮಯದಲ್ಲಿ ಹಿಂದೂಗಳ ಆಸ್ತಿಗಳಿಗೆ ಹಾನಿಯಾದರೆ, ಕರೆ ನೀಡಿದ ಮುಖಂಡರು & ಹೋರಾಟಗಾರರ ಮೇಲೆ ಕಾನೂನು ಕ್ರಮ ಜರುಗಿಸಲು ಒತ್ತಾಯಿಸಿ ಶಾಸಕ ಯತ್ನಾಳ ಪತ್ರ
ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ನಗರದಲ್ಲಿ ನನ್ನ ವಿರುದ್ಧ ಅಥವಾ ವಕ್ಫ್ ನೆಪದಲ್ಲಿ ನಡೆಯುವ ಹೋರಾಟದ ಸಮಯದಲ್ಲಿ ಆಕಸ್ಮಾತ ಹಿಂದೂಗಳ ಆಸ್ತಿ-ಪಾಸ್ತಿಗಳಿಗೆ ಹಾನಿಯಾದರೆ, ಹೋರಾಟಕ್ಕೆ ಕರೆ ನೀಡಿದ ಮುಖಂಡರುಗಳು ಹಾಗೂ ಹೋರಾಟಗಾರರ ಮೇಲೆ ಕಾನೂನು ಕ್ರಮ ಜರುಗಿಸುವವಂತೆ ಒತ್ತಾಯಿಸಿ ನಗರ ಶಾಸಕರಾದ ಬಸನಗೌಡ ಪಾಟೀಲ ಯತ್ನಾಳ ರವರು ಗೃಹ ಸಚಿವರು, ಪೊಲೀಸ್ ಮಹಾನಿರ್ದೇಶಕರು, ಐಜಿಪಿ ಉತ್ತರ ವಲಯ ಬೆಳಗಾವಿ ಹಾಗೂ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಿಗೆ ಮಂಗಳವಾರ ಪತ್ರ ಬರೆದಿದ್ದಾರೆ.
ಇದೇ ಬರುವ 28-4-2025 ರಂದು ಕೆಲವು ಅಲ್ಪಸಂಖ್ಯಾತ ಮುಸ್ಲಿಂ ಮುಖಂಡರು ನನ್ನ ವಿರುದ್ಧ ವಿಜಯಪುರ ನಗರದಲ್ಲಿ ಹೋರಾಟಕ್ಕೆ ಕರೆ ನೀಡಿದ್ದು, ಅಲ್ಲದೆ ವಕ್ಫ್ ತಿದ್ದುಪಡಿ ಕಾಯ್ದೆ ವಿರುದ್ಧವಾಗಿಯೂ ಹೋರಾಟಕ್ಕೆ ಸಜ್ಜಾಗಿರುವುದು ತಿಳಿದುಬಂದಿದೆ. ಈ ಹೋರಾಟದಲ್ಲಿ ಭಾಗವಹಿಸಿದವರಿಂದ, ನಗರದಲ್ಲಿ ಯಾವುದೇ ಅಹಿತಕರ ಘಟನೆಗಳಾಗಲಿ ಅಥವಾ ಹಿಂದೂಗಳ ಮೇಲಾಗಲಿ ಅಥವಾ ಹಿಂದೂಗಳ ಆಸ್ತಿ ಪಾಸ್ತಿಗಳಿಗೆ, ಹಾನಿಯುಂಟು ಮಾಡುವುದಾಗಲಿ ಆಗಿದ್ದೆ ಆದರೆ, ಹೋರಾಟಕ್ಕೆ ಕರೆ ನೀಡಿದ ಈ ಮುಖಂಡರನ್ನೇ ಜವಾಬ್ದಾರಿಯನ್ನಾಗಿಸಿ/ ಹೊಣೆಗಾರರನ್ನಾಗಿಸಿ. ಅವರಿಂದಲೇ ಹಾನಿಯನ್ನು ಭರಿಸಿಕೊಳ್ಳವ ಮತ್ತು ಅವರ ಮೇಲೆ ಕಾನೂನು ಕ್ರಮ ಜರುಗಿಸುವ ಕುರಿತು ಮುಂಚಿತವಾಗಿಯೇ ಮುಚ್ಚಳಿಕೆಯನ್ನು ಬರೆಯಿಸಿಕೊಳ್ಳಬೇಕು. ಏಕೆಂದರೆ, ಇವರು ಕರೆ ಕೊಟ್ಟಿರುವ ಹೋರಾಟದ ಉದ್ದೇಶ ಸರಿಯಿಲ್ಲ. ಈ ಮುಖಂಡರುಗಳು ಕಿಡಿಗೇಡಿಗಳು ಮಾಡಿದ ಕೃತ್ಯ ಎಂದು ಹಿಂಜರಿದು ಕೈತೊಳೆದುಕೊಂಡು ಹೋಗುವ ಸಂಭವವಿರುತ್ತದೆ.
ಕಾರಣ ಈ ಹೋರಾಟಕ್ಕೆ ಕರೆ ನೀಡಿದ ಮುಖಂಡರುಗಳನ್ನು ಹಾಗೂ ಹೋರಾಟದಲ್ಲಿ ಭಾಗವಹಿಸಿದ ಪ್ರಮುಖರನ್ನು ಹೊಣೆಗಾರರನ್ನಾಗಿ ಮಾಡಬೇಕು. ಹೋರಾಟದ ಸಮಯದಲ್ಲಿ ಶಾಂತಿ ಭಂಗವಾಗಿ, ಹಿಂದೂಗಳ ಮೇಲೆ ಗಲಭೆಗಳಾಗುವ ಸಂಭವವಿರುವುದರಿಂದ, ಈ ಹೋರಾಟಕ್ಕೆ ಕರೆ ನೀಡಿ ಪತ್ರಿಕಾ ಗೋಷ್ಠಿ ನಡೆಸಿದ ಈ ಮುಖಂಡರಿಂದ ಮುಂಚಿತವಾಗಿ ಮುಚ್ಚಳಿಕೆ ಪತ್ರವನ್ನು ಬರೆಯಿಸಿಕೊಂಡು, ಹೋರಾಟಕ್ಕೆ ಅನುಮತಿ ನೀಡಬೇಕು. ಹಾಗೂ ಹೋರಾಟಗಾರರ ಪತ್ರಿಯೊಬ್ಬರ ಮೇಲೆ ನಿಗಾವಹಿಸಿ, ಸಂಪೂರ್ಣ ವಿಡಿಯೋ ಚಿತ್ರೀಕರಣ ಮಾಡಲು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು, ವಿಜಯಪುರ ಇವರಿಗೆ ಆದೇಶಿಸಬೇಕೆಂದು ಒತ್ತಾಯಿಸಿದ್ದಾರೆ.