ಚಿಂತನೆ
-ಡಾ. ತಾರಾ ಬಿ ಏನ್
ಧಾರವಾಡ
ಉದಯರಶ್ಮಿ ದಿನಪತ್ರಿಕೆ
ಸಿದ್ಧರಾಮೇಶ್ವರರು ಒಬ್ಬ ಶ್ರೇಷ್ಠ ಅನುಭವಿಗಳಾಗಿದ್ದರು ಅಲ್ಲಮಪ್ರಭು ಬಸವೇಶ್ವರರು ಚನ್ನಬಸವ ಮುಂತಾದ ಶರಣ ಶ್ರೇಷ್ಠ ಸಾಲಿನಲ್ಲಿ ನಿಲ್ಲುವ ಸಮಕಾಲಿನ ಶಿವಶರಣರು..
ಯೋಗಿಗಳ ಯೋಗಿ ಶಿವಯೋಗಿ ಸೊಡ್ದಳ ಸಿದ್ದರಾಮಯ್ಯ ಎಂದು ಸೊಡ್ದಳ ಬಾಚರಿಸರಿಂದ
ಹೊಗಳಿಸಿಕೊಂಡ ಮಹಾನ್ ಚೇತನ, ಮಹಾನ್ ಯೋಗಿ ಸಿದ್ಧರಾಮೇಶ್ವರರು.
ಅನೌತಿಕ ಶಕ್ತಿಯನ್ನು ಪಡೆದ ಅನುಪಮಾ ಸಾಧನೆಗಳ ಸಿದ್ಧಾಪುರುಷ ಆಗಿದ್ದರು ಅವರ 68000 ವಚನಂಗಳ ಹಾಡಿ ಹಾಡಿ ಸೋತಿದ್ದನ್ನ ಮನ ಎಂದು ಅವರೇ ತಮ್ಮ( ವಚನ ಸಂಖ್ಯೆ 909 )ವಚನ ಒಂದರಲ್ಲಿ ಹೇಳಿಕೊಂಡಿದ್ದಾರೆ .ಇವರ ವಚನಗಳಲ್ಲಿ ಕಪಿಲಸಿದ್ಧಮಲ್ಲಿಕಾರ್ಜುನ ಅಥವಾ ಕಬಲಿಸಿದ್ದಮಲ್ಲ ಕಪಿಲಸಿದ್ಧ ಮಲ್ಲಿನಾಥ ಕಪಿಲಸಿದ್ಧ ಮಲ್ಲೇಂದ್ರ ಕಪಿಲಸಿದ್ಧ ಮಲ್ಲೇಶ್ವರ ಕಪಿಲಸಿದ್ಧ ಮಲ್ಲೇಶ್ವರ ದೇವರು ಕಪಿಲಸಿದ್ಧ ಮಲ್ಲ ಎಂಬ ಅಂಕಿತಗಳು ಕಂಡುಬರುತ್ತದೆ ಚಿತ್ರದುರ್ಗದ ಬ್ರಹನ್ಮಠದಲ್ಲಿ ಇತ್ತೀಚೆಗೆ ದೊರೆತ ಓಲೆ ಪ್ರತಿಗಳಲ್ಲಿ ಕವಿಲಸಿದ್ಧ ಮಲ್ಲಿಕಾರ್ಜುನ, ಕವಿಲಸಿದ್ಧಮಲ್ಲಿಕಾರ್ಜುನ ಲಿಂಗ . ಕವಿಲಸಿದ್ಧಮಲ್ಲೇಶ್ವರ. ಕವಿಲಸಿದ್ಧಮಲ್ಲಿನಾಥಯ್ಯ ಎಂಬ ಅಂಕಿತಗಳು ಕೂಡ ಬಳಕೆಯಾಗಿದೆ.
ಇನ್ನು ಕೆಲವೊಂದು ವಚನಗಳಲ್ಲಿ ವಿರಳವಾಗಿ ಕಪಿಲಸಿದ್ಧ ಮಲ್ಲಿಕಾರ್ಜುನ ಯೋಗಿನಾಥ ಎಂಬ ಅಂಕಿತವನ್ನು ಕೂಡ ಕಾಣಬಹುದಾಗಿದೆ.
ಸೊನ್ನಲಿಗಿಯ ಸಿದ್ದರಾಮಯ್ಯರೆಂದೆ ಕರೆಯಲ್ಪಡುವ ಇವರು ಶಿವಯೋಗಿ ಸಿದ್ದರಾಮಯ್ಯ ಸೋಲಾಪುರ್ ಮತ್ತು ವಿಜಯಪುರ ಜಿಲ್ಲೆಗಳ ಮಧ್ಯದಲ್ಲಿರತಕ್ಕಂತ ಸೊನ್ನಲಗಿಯ ಮುದ್ದಯ್ಯ ಮತ್ತು ಸುಗ್ಗೆವ್ಯೆಯರ ಮಗ ಇವರಾಗಿದ್ದರು.
ವಚನಗಳು ಆಚಾರ್ಯರ ಸಾಹಿತ್ಯವಲ್ಲ, ಇದು ಅನುಭಾವಿಗಳ ಸಾಹಿತ್ಯ. ಮೂಲತಃ ವಚನ ನಿಧಿ ಜನರಿಂದ ಜನರಿಗಾಗಿ ಹುಟ್ಟಿ ಜನರ ಮಧ್ಯದಲ್ಲಿ ಬಾಳಿ ಬೆಳಗಿದ ಸಾಹಿತ್ಯವಾಗಿದೆ 12 ನೇ ಶತಮಾನದಿಂದ 15 ನೇ ಶತಮಾನದವರೆಗೆ ವಚನ ಸಾಹಿತ್ಯ ವಿಪುಲವಾಗಿ ಹುಟ್ಟಿಕೊಂಡಿತ್ತು .ಕವಿ ಸಾಹಿತ್ಯಕ್ಕಿಂತ ವಚನ ಸಾಹಿತ್ಯ ಅತ್ಯಂತ ಮಹತ್ವದ್ದಾಗಿದೆ.
ಸಿದ್ದರಾಮೇಶ್ವರರ ವಚನಗಳು ಕೇವಲ ಅಭಿವ್ಯಕ್ತಿ ಮಾಧ್ಯಮದಲ್ಲಿ ರಚಿತವಾಗಿಲ್ಲ ಅವು ಕಪಿಲಸಿದ್ಧ ಮಲ್ಲಿಕಾರ್ಜುನನ ತಿಳಿಯಲು ನೆರವಾಗುವ ಸಾಧನಗಳಾಗಿವೆ ಪಾಂಡಿತ್ಯಕ್ಕಿಂತ ಮನೋಭಾವಕ್ಕೆ ಹೃದಯ ಸುದ್ದಿಗೆ ಸರ್ವ ಜೀವಾನುಕಂಪಕ್ಕೆ ಹೆಚ್ಚಿನ ಮಹತ್ವ ನೀಡಬೇಕೆನ್ನುವುದು ಸಿದ್ದರಾಮರ ಇಚ್ಚೆಯಾಗಿತ್ತು.
ಹೀಗಾಗಿ ಶಿವಶರಣರ ವಚನಗಳು ನಮ್ಮ ನಡೆ ನುಡಿಗಳನ್ನು ತಿದ್ದಿಕೊಳ್ಳಲು, ವ ಮತ್ತು ವರೆಗೆ ಹಚ್ಚಲು ರಚಿತವಾದಂತಹ ವಚನಗಳು ಎಂಬುದು ಸ್ಪಷ್ಟವಾಗಿ ತಿಳಿದು ಬರುತ್ತದೆ.
ಸಿದ್ದರಾಮೇಶ್ವರರ ಜೀವನದಲ್ಲಿ ಎರಡು ಹಂತಗಳು ಒಂದು ಕಲ್ಯಾಣಕ್ಕೆ ಬರುವ ಮುನ್ನ ಸೊನ್ನಲಿಗೆಯಲ್ಲಿ ಸಾಮಾಜಿಕ ಚಟುವಟಿಕೆಗಳಲ್ಲಿ ತೊಡಗಿಕೊಂಡಿದ್ದು ಎರಡನೆಯದ್ದು ಕಲ್ಯಾಣಕ್ಕೆ ಬಂದು ಬಸವಾದಿ ಶಿವಶರಣರ ಜೊತೆಗೆ ಸೇರಿಕೊಂಡು ತಾವು ಹಿಂದೆ ಕೈಕೊಂಡ ಲೌಕಿಕ ಸಾಮಾಜಿಕ ಕಾರ್ಯಗಳ ಬಗ್ಗೆ ಒಂದು ರೀತಿಯ ತೃಪ್ತಿಯನ್ನು ಕಂಡಿಕೊಂಡದ್ದು ಇಲ್ಲಿ ಬಸವಣ್ಣನವರ ಬಗೆಗೆ ಅಪಾರ ಗೌರವ ಭಕ್ತಿಯನ್ನ ಸೂಚಿಸಿದಂತ ಸಿದ್ದರಾಮರು ತಮ್ಮ ವಚನದಲ್ಲಿ (ಸಂಖ್ಯೆ 815 )
ವಚನ ವಿಶ್ಲೇಷಣೆ
ಬಸವಾ ಬಸವಾ ನಿಮ್ಮಿಂದ ಕಂಡೆನಯ್ಯ
ಭಕ್ತಿಯ
ಬಸವಾ ಬಸವಾ ನಿಮ್ಮಿಂದ ಕಂಡೆನಯ್ಯ
ಜ್ಞಾನವ
ಬಸವಾ ಬಸವಾ ನಿಮ್ಮಿಂದ ಕಂಡೆನಯ್ಯ
ವೈರಾಗ್ಯವ
ಕಪಿಲಸಿದ್ದನಾಥಯ್ಯ
ನಿಮಗೂ ನಮಗೂ ಬಸವಣ್ಣನೇ ಶಿವಪತಿಕನಯ್ಯಾ
ಎಂದು ಬಸವಣ್ಣನನ್ನು
ನಿಮ್ಮಿಂದ ನಾನು ಭಕ್ತಿಯ ಭಾವ ಅರ್ಥವನ್ನು. ಸರ್ವರೊಳಗೆ ಒಂದಾಗುವ ಸಾಮಾಜಿಕ ಹೊಣೆಗಾರಿಕೆಯನ್ನು, ವೈಚಾರಿಕ ಮನೋಭಾವದಂಜಾನವನ್ನು,
ದುಡ್ಡಿನ ಲಿಂಗವು ಮೋಕ್ಷ ಕೊಡಬಲ್ಲದೆ ಆತ್ಮ ಬೀಳೋದೇಕಯ್ಯ ಗುರುವಿಗೆ ಇಷ್ಟಲಿಂಗವನ್ನು ಧರಿಸಿದ ಮೇಲು ತಾವರೆ ಲಿಂಗವನ್ನು ಪೂಜಿಸುವ ಭಕ್ತರನ್ನು ನೋಡಿ ಕಟ್ಟಿದ ಲಿಂಗವೇ ಮೊದಲಾದ ಪುಷ್ಪ ಧರಿಸುವ ಆತ ನೀರವು ಚಾಂಡಾಲನ ಇರವು ನೋಡ ಎಂದು ಟೀಕೆ ಮಾಡುತ್ತಾರೆ ತಪಸ್ಸಿಗಾಗಿ ಪರ್ವತ ಕಾಡು ಮೇಡುಗಳಿಗೆ ಹೋಗುವುದು ಬರಿ ಆ ಭ್ರಮೆಯಾಗಿ ತೋರಿ, ಬಸವಣ್ಣ ನಾನು ನಿನ್ನಿಂದ ವೈರಿದಾಗ ನಿಗ್ರಹ ಮಾಡಿದನಯ್ಯ ಎಂದು ಹೇಳುತ್ತಾ ಇದೆಲ್ಲದಕ್ಕೂ ಬಸವಣ್ಣನ ಶಿವಪಥಿಕನಯ್ಯಾ ಎಂದು ಅತ್ಯಂತ ವಿನಮ್ರತೆಯಿಂದ ಬಸವಣ್ಣನ ಮೇಲು ದರ್ಜೆಗೆ ಏರಿಸಿ ಬಸವಣ್ಣ ನೀನೇ ಎಲ್ಲ ,ನಿನ್ನಿಂದಲೇ ಎಲ್ಲ, ಎಂಬ ಭಾವವನ್ನ ಅತ್ಯಂತ ವಿನಯ ಪೂರ್ವಕವಾಗಿ ಪ್ರಚುರ ಪಡಿಸುತ್ತಾರೆ.