ಉದಯರಶ್ಮಿ ದಿನಪತ್ರಿಕೆ
ಬಸವನಬಾಗೇವಾಡಿ: ತಾಲೂಕಿನ ಮನಗೂಳಿ ಪಟ್ಟಣದ ಪಟ್ಟೀಕಂಥಿ ಹಿರೇಮಠದ ಗುರು ಮಹಾಂತೇಶ್ವರ ಸ್ವಾಮೀಜಿಯವರ ಪುಣ್ಯಸ್ಮರಣೆಯ ಅಮೃತ ಮಹೋತ್ಸವ , ತಪೋಭೂಷಣ ಶ್ರೀಗುರು ಸಂಗನಬಸವ ಶಿವಾಚಾರ್ಯ ಸ್ವಾಮೀಜಿಯವರ ೨೪ನೇ ಸಂಸ್ಮರಣೋತ್ಸವಯಂಗವಾಗಿ ಗ್ರಂಥ ಬಿಡುಗಡೆ, ಪಂಚಾಕ್ಷರಿಜಪಯಜ್ಞ, ಮೂರ್ತಿ ಪ್ರತಿಷ್ಠಾಪನೆ, ತುಲಾಭಾರ, ಸಿಲಿಕಾನ್ ಮೂರ್ತಿಗಳ ಶುಭಾಗಮನ, ಗುರುಮಹಾಂತೇಶ್ವರ ಪ್ರಶಸ್ತಿ ಪ್ರದಾನ ಸಮಾರಂಭ ಸೇರಿದಂತೆ ವಿವಿಧ ಕಾರ್ಯಕ್ರಮಗಳನ್ನು ಮಾ. ೩೦ ರಿಂದ ಏ.೨೭ ರವೆರೆಗೆ ಹಮ್ಮಿಕೊಳ್ಳಲಾಗಿದೆ ಎಂದು ಮನಗೂಳಿ ಪಟ್ಟೀಕಂಥಿ ಹಿರೇಮಠ, ಬೆಂಗಳೂರಿನ ವಿಭೂತಿಪುರ ಮಠದ ಡಾ.ಮಹಾಂತಲಿಂಗ ಶಿವಾಚಾರ್ಯ ಸ್ವಾಮೀಜಿ ತಿಳಿಸಿದ್ದಾರೆ.
ಈ ಕುರಿತು ಪತ್ರಿಕಾ ಪ್ರಕಟಣೆ ನೀಡಿರುವ ಅವರು, ಈಗಾಗಲೇ ಮಾ.೩೦ ರಿಂದ ಶ್ರೀಮಠದಲ್ಲಿ ಕಾರ್ಯಕ್ರಮಗಳು ಆರಂಭವಾಗಿವೆ. ಏ.೨೧ ರಂದು ಸಂಜೆ ೭ ಗಂಟೆಗೆ ೭೫ ಜನ ಮನಗೂಳಿ ಪಟ್ಟಣ ಪಂಚಾಯಿತಿಯ ಪೌರಕಾರ್ಮಿಕರಿಗೆ ಗುರುರಕ್ಷೆ ಕಾರ್ಯಕ್ರಮ, ಏ.೨೨ ರಂದು ಸಂಜೆ ೭ ಗಂಟೆಗೆ ೭೫ ಜನ ಕಲಾವಿದರಿಗೆ ಗುರುರಕ್ಷೆ ಕಾರ್ಯಕ್ರಮ ಜರುಗಲಿದೆ. ಏ.೨೩ ರಂದು ಬೆಳಗ್ಗೆ ೬ ಗಂಟೆಗೆ ಜಗದ್ಗುರು ರೇಣುಕಾಚಾರ್ಯ ಮೂರ್ತಿ, ಶ್ರೀಗುರು ಸಂಗನಬಸವ ಶಿವಾಚಾರ್ಯ ಸ್ವಾಮೀಜಿ ಕರ್ತೃ ಗದ್ದುಗೆಯಲ್ಲಿ ಶಿವಲಿಂಗ ಪ್ರತಿಷ್ಠಾಪನೆ ಜಾಲಹಳ್ಳಿಯ ಜಯಶಾಂತಲಿಂಗೇಶ್ವರ ಶಿವಾಚಾರ್ಯ ಸ್ವಾಮೀಜಿ ಸಾನಿಧ್ಯದಲ್ಲಿ ಕಢೂರಿನ ಶಿವಪ್ರಸಾದ ಶಾಸಿ, ಪ್ರಭು ಶಾಸಿ ವೈದಿಕತ್ವದಲ್ಲಿ ನೆರವೇರಲಿದೆ. ನಂತರ ೯ ಗಂಟೆಗೆ ಶಂಕರಗೌಡ ಹಾವಣ್ಣವರ ಮನೆಯಿಂದ ಶ್ರೀಗುರು ಮಹಾಂತೇಶ್ವರರ ರಜತ ಮೂರ್ತಿ ಆಗಮನವಾಗುತ್ತದೆ. ಸಂಜೆ ೭ ಗಂಟೆಗೆ ಧರ್ಮಚಿಂತನ ಹಾಗೂ ೭೫ ಜನ ದೀರ್ಘಾಯುಗಳಿಗೆ ಗುರುರಕ್ಷೆ ಕಾರ್ಯಕ್ರಮ ಜರುಗಲಿದೆ. ಸಾನಿಧ್ಯವನ್ನು ಜಾಲಹಳ್ಳಿಯ ಜಯಶಾಂತಲಿಂಗೇಶ್ವರ ಶಿವಾಚಾರ್ಯ ಸ್ವಾಮೀಜಿ ವಹಿಸುವರು. ಅಭಿನವ ಸಂಗನಬಸವ ಶಿವಾಚಾರ್ಯ ಸ್ವಾಮೀಜಿ, ಪ್ರಭುಕುಮಾರ ಶಿವಾಚಾರ್ಯ ಸ್ವಾಮೀಜಿ, ಮುರುಘೇಂದ್ರ ದೇವರು ಸಮ್ಮುಖ ವಹಿಸುವರು. ಇದೇ ಸಂದರ್ಭದಲ್ಲಿ ವಿವಿಧ ಗಣ್ಯರಿಗೆ ಗುರುರಕ್ಷೆ ನೆರವೇರುವದು. ಏ.೨೪ ರಂದು ಸಂಜೆ ೭ ಗಂಟೆಗೆ ಧರ್ಮಚಿಂತನ ಹಾಗೂ ೭ ಜನ ಆದರ್ಶ ದಂಪತಿಗಳಿಗೆ ಗುರುರಕ್ಷೆ ಕಾರ್ಯಕ್ರಮ ಜರುಗಲಿದೆ. ಇದೇ ಸಂದರ್ಭದಲ್ಲಿ ವಿಜಯಪುರದ ಸಿದ್ದಲಿಂಗ ದೇವರು ಧರ್ಮೋಪದೇಶ ನೀಡುವರು. ಏ.೨೫ ರಂದು ಬೆಳಗ್ಗೆ ೬ ಗಂಟೆಗೆ ಸಾಮೂಹಿಕ ಅಯ್ಯಾಚಾರ, ಶಿವದೀಕ್ಷಾ ಕಾರ್ಯಕ್ರಮ ಬೃಂಗೀಶ್ವರಲಿಂಗ ಶಿವಾಚಾರ್ಯ ಸ್ವಾಮೀಜಿ ನೇತೃತ್ವದಲ್ಲಿ ನೆರವೇರುವದು. ಸಂಜೆ ೭ ಗಂಟೆಗೆ ೭೫ ಜನ ಸೈನಿಕರಿಗೆ ಮತ್ತು ಅವರ ಕುಟುಂಬಸ್ಥರಿಗೆ ಗುರುರಕ್ಷೆ ಕಾರ್ಯಕ್ರಮ ಶಿವಗಂಗೆಯ ಡಾ.ಮಲಯಶಾಂತಮುನಿ ಶಿವಾಚಾರ್ಯ ಸ್ವಾಮೀಜಿ ಸಾನಿಧ್ಯದಲ್ಲಿ ನೆರವೇರುವದು. ಡಾ.ಬಸವಜಯಚಂದ್ರ ಸ್ವಾಮೀಜಿ ಸಮ್ಮುಖ ವಹಿಸುವರು. ಡಾ.ಮಹಾಂತಲಿಂಗ ಶಿವಾಚಾರ್ಯ ಸ್ವಾಮೀಜಿ ನೇತೃತ್ವ ವಹಿಸುವರು. ಏ.೨೬ ರಂದು ಬೆಳಗ್ಗೆ ೬ ಗಂಟೆಗೆ ಡಾ.ನೀಲಕಂಠ ಶಿವಾಚಾರ್ಯ ಸ್ವಾಮೀಜಿಯವರಿಂದ ವೀರಶೈವಧರ್ಮ ಧ್ವಜಾರೋಹಣ ನೆರವೇರುವದು. ನಂತರ ೯ ಗಂಟೆಗೆ ಕುಂಭಮೇಳ, ವೀರಗಾಸೆ ಕುಣಿತ ವಿವಿಧ ಸಕಲ ವಾದ್ಯಮೇಳದೊಂದಿಗೆ ರಜತಮೂರ್ತಿಗಳ, ರಜತ ಕಳಸ, ರಜತ ಪಾದರಕ್ಷೆ ಆಗಮನವಾದ ನಂತರ ಉಭಯ ಕರ್ತೃ ಗದ್ದುಗೆಗೆ ಕುಂಭಾಭಿಷೇಕ, ರುದ್ರಾಭಿಷೇಕ, ಬಿಲ್ವಾರ್ಚನೆ, ಪುಷ್ಪಾರ್ಚನೆ, ಶಿಖರಕ್ಕೆ ಕಳಸಾರೋಹಣ, ಮಹಾಮಂಗಳಾರತಿ ನೆರವೇರುವದು.ಬೆಳಗ್ಗೆ ೧೧ ಗಂಟೆಗ ೭೭೭೫ ಜನ ಮಾತೆಯರಿಗೆ ಉಡಿತುಂಬುವ ಕಾರ್ಯಕ್ರಮ ಡಾ.ಶಿವಕುಮಾರ ಶಿವಾಚಾರ್ಯ ಸ್ವಾಮೀಜಿ, ಶಿವಪ್ರಕಾಶ ಶಿವಾಚಾರ್ಯ ಸ್ವಾಮೀಜಿ ಸೇರಿದಂತೆ ವಿವಿಧ ಶ್ರೀಗಳ ಸಾನಿಧ್ಯದಲ್ಲಿ ನೆರವೇರುವದು.
ಸಂಜೆ ೪ ಗಂಟೆಗೆ ಕಾಶೀ ಜಗದ್ಗುರುಗಳು ಶುಭ ಆಗಮನ. ಸಂಜೆ ೬ ಗಂಟೆಗೆ ಕಾಶೀ ಜಗದ್ಗುರು ಡಾ.ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿ ದಿವ್ಯಸಾನಿಧ್ಯದಲ್ಲಿ ಶ್ರೀಗುರು ಮಹಾಂತೇಶ್ವರ ಸ್ವಾಮೀಜಿಯ ಪುಣ್ಯಸ್ಮರಣೆಯ ಅಮೃತ ಮಹೋತ್ಸವ, ಶ್ರೀಗುರು ಮಹಾಂತೇಶ್ವರ ಪುರಾಣ ಗ್ರಂಥ ಬಿಡುಗಡೆ, ಶ್ರೀಗುರು ಮಹಾಂತೇಶ್ವರ ಪ್ರಶಸ್ತಿ ಪ್ರದಾನ ಸಮಾರಂಭ ಜರುಗಲಿದೆ. ಅಧ್ಯಕ್ಷತೆಯನ್ನು ಡಾ.ಸಿದ್ದಲಿಂಗ ಶಿವಾಚಾರ್ಯ ಸ್ವಾಮೀಜಿ ವಹಿಸುವರು. ಸಚಿವ ಶಿವಾನಂದ ಪಾಟೀಲ ಉದ್ಘಾಟಿಸುವರು. ಸಂಗಮೇಶ ಹಾವಣ್ಣವರ ಅವರಿಗೆ ಶ್ರೀಗುರು ಮಹಾಂತೇಶ್ವರ ಪ್ರಶಸ್ತಿ ಪ್ರದಾನ ಮಾಡಲಾಗುವದು. ಶಾಸಕ ರಾಜುಗೌಡ ಪಾಟೀಲ, ಸೋಮನಗೌಡ ಪಾಟೀಲ ಸೇರಿದಂತೆ ಅನೇಕರು ಆಗಮಿಸುವರು. ಏ. ೨೭ ರಂದು ಬೆಳಗ್ಗೆ ೯ ಗಂಟೆಗೆ ಉಭಯ ಶ್ರೀಗಳ ರಜತಮೂರ್ತಿಗಳ ಅಡ್ಡಪಲ್ಲಕ್ಕಿ ಮಹೋತ್ಸವ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಸಕಲ ವಾದ್ಯಮೇಳದೊಂದಿಗೆ ಜರುಗಲಿದೆ. ನಂತರ ಶ್ರೀಮಠದ ಪೂಜ್ಯರ ಸಿಂಹಾಸನಾರೋಹಣ ನೆರವೇರುವದು. ೧೧ ಗಂಟೆಗೆ ಶ್ರೀಗುರು ಮಹಾಂತೇಶ್ವರ ಪುರಾಣ ಮಹಾಮಂಗಲ ೭೫ ವಿದ್ಯಾರ್ಥಿಗಳಿಗೆ ಗುರುರಕ್ಷೆ ಮತ್ತು ಧರ್ಮಜಾಗೃತಿ ಸಮಾರಂಭ ಡಾ.ಪ್ರಭುಸಾರಂಗದೇವ ಶಿವಾಚಾರ್ಯ ಸ್ವಾಮೀಜಿ ಸಾನಿಧ್ಯದಲ್ಲಿ ಜರುಗಲಿದೆ. ಸಚಿವ ಡಾ.ಎಂ.ಬಿ.ಪಾಟೀಲ ಅಧ್ಯಕ್ಷತೆ ವಹಿಸುವರು. ಈ ಕಾರ್ಯಕ್ರಮಕ್ಕೆ ನಾಡಿನ ವಿವಿಧ ಶ್ರೀಗಳು ಆಗಮಿಸುವರು ಎಂದು ಡಾ.ಮಹಾಂತಲಿಂಗ ಶಿವಾಚಾರ್ಯ ಸ್ವಾಮೀಜಿ ತಿಳಿಸಿದ್ದಾರೆ.

