ಜನಿವಾರ ತಗೆಯುವಂತೆ ಒತ್ತಾಯ ಮಾಡಿದ ಅಧಿಕಾರಿಗೆ ಅಮಾನತ್ತು ಮಾಡಲು ಆಗ್ರಹ | ಜಿಲ್ಲಾಧಿಕಾರಿ ಮೂಲಕ ರಾಜ್ಯ ಪಾಲರಿಗೆ ಮತ್ತು ಮುಖ್ಯಮಂತ್ರಿಗಳಿಗೆ ಮನವಿ
ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ನಗರದಲ್ಲಿ ಅಖಿಲ ಕರ್ನಾಟಕ ರಾಜ್ಯ ಬ್ರಾಹ್ಮಣ ಕ್ಷೇಮಾಭಿವೃದ್ಧಿ ಸಂಘ, ಅಖಿಲ ಭಾರತೀಯ ಬ್ರಾಹ್ಮಣ ಸಂಘ, ಅಖಿಲ ಕರ್ನಾಟಕ ಬ್ರಾಹ್ಮಣ ಮಹಾ ಸಭಾ ಹಾಗೂ ಶ್ರೀ ಚಿದಂಬರ ಸೇವಾ ಸಮಿತಿ ನೇತೃತ್ವದಲ್ಲಿ ಕೆ. ಇ. ಎಯಿಂದ ನಡೆಸುತ್ತಿರುವ ವಿವಿಧ ವೃತ್ತಿಪರ ಪದವಿಗಳ ಪ್ರವೇಶ ಪರೀಕ್ಷೆಯಲ್ಲಿ ಶಿವಮೊಗ್ಗ ಮತ್ತು ಬೀದರ ಜಿಲ್ಲೆಗಳಲ್ಲಿ ಬ್ರಾಹ್ಮಣ ವಿದ್ಯಾರ್ಥಿಗಳಿಗೆ ಜನಿವಾರ ತೆಗೆಯುವಂತೆ ಒತ್ತಾಯ ಮಾಡಿ ಅವಮಾನಿಸಿರುವ ಘಟನೆ ಖಂಡಿಸಿ ವಿಜಯಪುರ ಜಿಲ್ಲಾಧಿಕಾರಿಗಳ ಮುಖಾಂತರ ರಾಜ್ಯ ಪಾಲರಿಗೆ ಮತ್ತು ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಲಾಯಿತು.
ಈ ಸಂದರ್ಭದಲ್ಲಿ ಅಖಿಲ ಕರ್ನಾಟಕ ಬ್ರಾಹ್ಮಣ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ಆನಂದ ಕುಲಕರ್ಣಿ ಅವರು ಮಾತನಾಡಿ ಕೆ. ಇ. ಎಯಿಂದ ನಡೆಸುತ್ತಿರುವ ಸಿ ಇ ಟಿ ಪರೀಕ್ಷೆಯಲ್ಲಿ ಬ್ರಾಹ್ಮಣ ವಿದ್ಯಾರ್ಥಿಗಳಿಗೆ ಆಗಿರುವ ಅವಮಾನಕ್ಕೆ ರಾಜ್ಯ ಸರಕಾರ ನೇರ ಹೊಣೆ ಹೊರಬೇಕು ತಪ್ಪಿತಸ್ಥ ಅಧಿಕಾರಿಗಳ ಮೇಲೆ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.
ಈ ಸಂದರ್ಭದಲ್ಲಿ ಕರ್ನಾಟಕ ರಾಜ್ಯ ಬ್ರಾಹ್ಮಣ ಕ್ಷೇಮಾಭಿವೃದ್ಧಿ ಸಂಘದ ರಾಜ್ಯ ಅಧ್ಯಕ್ಷ ಆನಂದ್ ಜೋಶಿ ಅವರು ಮಾತನಾಡುತ್ತಾ ಬೇಜವಾಬ್ದಾರಿ ಘಟನೆ ಹೊಣೆಯನ್ನು ರಾಜ್ಯ ಸರ್ಕಾರವೇ ಹೊರಬೇಕು ಎಂದು ಎಚ್ಚರಿಸಿದರು.
ಕಾರಣ ಬೆಲೆ ಏರಿಕೆಯ ವಿಷಯದ ಪರಿಸ್ಥಿತಿ ಹಾಗೂ ಜಾತಿ ಗಣತಿಯ ಹೆಸರಿನಲ್ಲಿ ಈಗಾಗಲೇ ಸರ್ಕಾರದ ನಿಷ್ಕೃತೀಯತೆಯಿಂದ ಉದ್ಭವಿಸಿದ ಗೊಂದಲಗಳ ಗಮನವನ್ನು ಬೇರೆಡೆಗೆ ಸೆಳೆಯಲು ಆಯ್ದ ಕೆಲವೇ ಪರೀಕ್ಷಾ ಕೇಂದ್ರಗಳಲ್ಲಿ ಈ ರೀತಿಯ ಗೊಂದಲ ಸೃಷ್ಟಿಸಿ ಬ್ರಾಹ್ಮಣರನ್ನು ಅವಮಾನ ಮಾಡಿದ್ದಾರೆ ಎಂದು ರಾಜ್ಯ ಸರ್ಕಾರವನ್ನು ಟೀಕಿಸಿದರು. ಯಾಕೆ ಸಿದ್ದರಾಮಯ್ಯ ಸರ್ಕಾರವೇ ನೇರವಾಗಿ ಹೊಣೆಯಾಗುತ್ತದೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಅಖಲ ಕರ್ನಾಟಕ ಬ್ರಾಹ್ಮಣ ಮಹಾಸಭಾ ಜಿಲ್ಲಾ ಪ್ರತಿನಿಧಿ ಸತೀಶಚಂದ್ರ ಕುಲಕರ್ಣಿ ಮಾತನಾಡಿ, ಧಾರ್ಮಿಕ ಆಚರಣೆಗಳು ಮಾಡುವುದು ಧಾರ್ಮಿಕ ಹಕ್ಕು, ಪರೀಕ್ಷೆ ನೆಪದಲ್ಲಿ ಅನಾವಶಕವಾಗಿ ಬ್ರಾಹ್ಮಣ ಸಮುದಾಯ ವಿದ್ಯಾರ್ಥಿಗಳನ್ನು ಕೇಂದ್ರಿಕರಿಸಿ ಪವಿತ್ರ ಜನಿವಾರ ತಗೆಯುವುದು ನೋವಿನ ಸಂಗತಿ. ಕೂಡಲೇ ರಾಜ ಸರ್ಕಾರ ಮಧ್ಯ ಪ್ರವೇಶಿಸಿ ತಪಿತಸ್ಥ ಅಧಿಕಾರಿಗಳ ಮೇಲೆ ಕೂಡಲೇ ಕಠೀಣ ಕ್ರಮ ಕೈಗೊಳ್ಳಬೇಕು ಇಂತಹ ಸಂಗತಿಗೆ ಕಾರಣಿಭೂತರಾದ ಅಧಿಕಾರಿಗೆ ಅಮಾನತ್ತುಗೊಳಿಸಬೇಕು. ಮಂದಿನ ದಿನಮಾನದಲ್ಲಿ ಇಂತಹ ಘಟನೆ ಮರುಕಳಿಸಿದಂತೆ ಕ್ರಮ ವಹಿಸಬೇಕೆಂದು ಆಕ್ರೋಶ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ಅಖಿಲ ಭಾರತೀಯ ಬ್ರಾಹ್ಮಣ ಮಹಾಸಂಘದ ರಾಷ್ಟ್ರೀಯ ಅಧ್ಯಕ್ಷ ಗೋವಿಂದರಾವ್ ಕುಲಕರ್ಣಿ ಮಾತನಾಡಿ, ಜನಿವಾರ ಸಲುವಾಗಿ ಪ್ರವೇಶ ನಿರಾಕರಿಸಿನ್ನು ಕತ್ತರಿಸಿದ ಭ್ರಷ್ಟ ಅಧಿಕಾರಿಯನ್ನು ಹಾಗೂ ಅದಕ್ಕೆ ಕುಮಕ್ಕು ನೀಡಿದ ಮೇಲಾಧಿಕಾರಿಗಳ ಮೇಲೆ ಕ್ರಿಮಿನಲ್ ಮೊಖದ್ದಮೆ ಹೂಡಿ ಜೈಲಿಗಟ್ಟಬೇಕೆಂದರು.
ಚಿದಂಬರ ಸೇವಾ ಸಮಿತಿಯ ಅಧ್ಯಕ್ಷರಾದ ಲಕ್ಷ್ಮೀಕಾಂತ ಕುಲಕರ್ಣಿ ಸಹ ಮಾತನಾಡಿದರು.
ಈ ಸಂದರ್ಭದಲ್ಲಿ ಮುಖಂಡರುಗಳಾದ ಪಂಡಿತರಾದ ಅಜೀತಾಚಾರ್ಯ ಹನಗಂಡಿ, ಶ್ರೀಪೂರ್ಣಾಚಾರ ಅರುಣ್ ಸೋಲಾಪೂರಕರ್, ಪ್ರಕಾಶ ಅಕ್ಕಲಕೋಟ, ವಿಜಯ ಜೋಶಿ, ರಾಜು ಪದಕಿ, ರವಿಂದ್ರ ಪದಕಿ, ಗೋವಿಂದ ಜೋಶಿ, ವೆಂಕಟೇಶ ಜೋಶಿ, ಸುದೀರ ಕುಲಕರ್ಣಿ, ಕೃಷ್ಣಾ ಗುನಾಳಕರ, ಉಲ್ಲಾಸ ಪಾಟೀಲ, ಪವನ ಕುಲಕರ್ಣಿ, ರಾಜೇಂದ್ರ ಜೋಶಿ, ಬಾಬುರಾವ ಕುಲಕರ್ಣಿ, ರೋಹನ ಆಪ್ಟೆ, ಎಸ್.ಎಮ್. ದೇಸಾಯಿ, ರವಿ ಕುಲಕರ್ಣಿ, ಸಂಪತ್ ಕುಲಕರ್ಣಿ, ರಾಕೇಶ ಕುಲಕರ್ಣಿ, ದತ್ತಾ ಜೋಶಿ, ವಿಶ್ವನಾಥ ಕುಲಕರ್ಣಿ, ರವಿ ಕಟ್ಟಿ, ಆನಂದ ಕುಲಕರ್ಣಿ, ವಿದ್ಯಾ ಕುಲಕರ್ಣಿ, ಸವಿತಾ ಗಲಗಲಿ, ಜಯಶ್ರೀ ಇಂಗಳೇಶ್ವರ, ಸಂತೋಷ್ ದೇಶಪಾಂಡೆ, ರಜನಿಕಾಂತ ಕುಲಕರ್ಣಿ, ಉಮೇಶ್ ಕುಲಕರ್ಣಿ ವಿಶ್ವನಾಥ್ ಕುಲಕರ್ಣಿ, ರವೀಂದ್ರ ಕುಲಕರ್ಣಿ, ಗಿರೀಶ್ ಕುಲಕರ್ಣಿ ಮುಂತಾದವರು ಇದ್ದರು.

