ರಚನೆ
– ಡಾ. ಶಶಿಕಾಂತ ಪಟ್ಟಣ
ರಾಮದುರ್ಗ
ಉದಯರಶ್ಮಿ ದಿನಪತ್ರಿಕೆ
ಜಗದ ಮೇಲೊಂದು
ಹಿರಿದಿಪ್ಪ ಕಲ್ಯಾಣವೆಂಬ
ಪಟ್ಟಣದಲ್ಲಿ ನೆರೆದರಯ್ಯ
ಅಸಂಖ್ಯಾತ ಶರಣರು
ನಿತ್ಯ ಕಾಯಕ ದಾಸೋಹ
ಲಿಂಗ ಜಂಗಮ ಸೇವೆ
ಬರೆದರಯ್ಯ ಬಂಡಾಯದ
ಲಕ್ಷ ಲಕ್ಷ ವಚನಗಳನ್ನು
ಬಸವಣ್ಣ ಕಟ್ಟಿದನಯ್ಯಾ
ಹಿರಿಯ ಅನುಭವ ಮಂಟಪವ
ಚರ್ಚೆ ವಾದ ಶೂನ್ಯ ಪೀಠ
ಇಲ್ಲೊಬ್ಬ ಅವಿವೇಕಿ
ಅನುಭವ ಮಂಟಪ ಇರಲಿಲ್ಲವೆಂದು
ಹೇಳಿದಳು
ಅರೆ ಹುಚ್ಚನೊಬ್ಬ ಅವಳನ್ನು
ಸಮರ್ಥಿಸುತ್ತಿರುವನಯ್ಯ
ಅನುಭವ ಮಂಟಪ
ಇಲ್ಲ ಎನ್ನುವ ಭಂಡ ಮೂಳರ
ಕರೆದು ಎಡ ಪಾದದ
ಕೆರವ ತೆಗೆದು ಹರಿಯುವ
ಹಾಗೆ ಹೊಡೆ ಎಂದ ನಮ್ಮ
ಬಸವ ಪ್ರಿಯ ಶಶಿಕಾಂತ
