ರಾಜ್ಯ ರೈತಸಂಘ ಹಾಗೂ ಹಸಿರು ಸೇನೆ ರಾಜ್ಯಧ್ಯಕ್ಷ ಚಂದ್ರಶೇಖರ ಕೊಡಿಹಳ್ಳಿ ಆರೋಪ
ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ಭಾರತ ಸರ್ಕಾರ 16.35 ಲಕ್ಷ ಕೋಟಿ ಸಾಲ ಕೈ ಬಿಡುವ ತೀರ್ಮಾನ ಕೈಗೊಳ್ಳುತ್ತಾರೆ. ಇದು ಯಾರಪ್ಪನ ಮನೆ ದುಡ್ಡು? ಆಪ್ತ ಉದ್ದಿಮೆದಾರರ ಸಾಲ ಮನ್ನಾ ಮಾಡುವ ನೀವು ಯಾವ ಸೀಮೆ ರಾಜಕಾರಣಿಗಳು..? ಕಾರ್ಪೋರೇಟ್ ಕಂಪನಿಗಳ ಹಿತಾಸಕ್ತಿಯೇ ಇವರ ಉದ್ದೇಶವಾಗಿದೆ. ದೇಶ ಕಟ್ಟವ ಸರಕಾರಗಳು ಇಡೀ ಸರಕಾರ ಬರ್ಬಾದ ಮಾಡಿವೆ. ಜನರು ಇವರನ್ನು ಯಾವುದೆ ಕಾರಣಕ್ಕೂ ಕ್ಷಮಿಸಬಾರದು ಎಂದು ಕರ್ನಾಟಕ ರಾಜ್ಯ ರೈತ ಹಾಗೂ ಹಸಿರು ಸೇನೆ ಸಂಘಟನೆ ರಾಜ್ಯಧ್ಯಕ್ಷ ಚಂದ್ರಶೇಖರ ಕೊಡಿಹಳ್ಳಿ ರಾಷ್ಟ್ರೀಯ ಪಕ್ಷಗಳ ವಿರುದ್ಧ ತೀವ್ರವಾಗಿ ಕಿಡಿಕಾರಿದರು.
ಬುಧವಾರ ನಗರದಲ್ಲಿ ಆಯೋಜಿಸಿರುವ ವಿಜಯಪುರ ಜಿಲ್ಲೆಯ ರೈತರ ಜಲ್ವಂತ ಸಮಸ್ಯೆಗಳ ಕುರಿತು ಚೆರ್ಚಾಗೋಷ್ಠಿ ಸಭೆಯಲ್ಲಿ ಮಾತನಾಡಿದರು.
ಏನಾಗಿದೆ ಈ ರಾಷ್ಟ್ರೀಯ ಪಕ್ಷಗಳಿಗೆ..? ಜನರ ಹಿತ, ರೈತರ ಹಿತ, ಕೂಲಿ ಕಾರ್ಮಿಕರ, ಬಡ ಬಲ್ಲಿದರ ಹಾಗೂ ದೇಶದ ಶ್ರಯೋಭಿವೃದ್ದಿಗಾಗಿ ಕೆಲಸ ಮಾಡಬೇಕಾಗಿದ್ದ ಸರಕಾರಗಳು, ಉದ್ದಿಮಪತಿಗಳ ಸಾಲ ಮನ್ನಾ ಮಾಡುತ್ತೀರುವ ಯಾವ ನ್ಯಾಯ..?
ಶೇಕಡಾ 60 ರಷ್ಟು ಇರುವ ಕೃಷಿಕರನ್ನು ಕಡೆಗಣಿಸಿರುವ ಸರಕಾರಗಳ ನಡೆ ತೀವ್ರವಾಗಿ ಖಂಡಿಸುತ್ತೆವೆ. ಕೇಂದ್ರ ಹಾಗೂ ರಾಜ್ಯ ಸರ್ಕಾರ ಬಜೆಟ್ಗಳಿಂದ ಬಿಡಿಕಾಸಿನ ಪ್ರಯೋಜನವೂ ರೈತ ವಲಯಕ್ಕೆ ದೊರಕಿಲ್ಲ. ರೈತರಿಗೆ ಕೇವಲ ಸಮಾಧಾನದ ಮಾತುಗಳನ್ನು ಮಾತ್ರ ಸರ್ಕಾರಗಳು ಹೇಳುತ್ತಿದ್ದು, ರೈತರ ಸಾಮಾಜಿಕ, ಆರ್ಥಿಕ ಸುಧಾರಣೆ ಮರೀಚಿಕೆಯಾಗಿದೆ ಎಂದರು. ಪ್ರತಿಪಕ್ಷ ಸಂಪೂರ್ಣ ವಿಫಲವಾಗಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ವಿರೋಧ ಪಕ್ಷಗಳಿಗೆ ಚಳ್ಳೆಹಣ್ಣು ತಿನಿಸುತ್ತಾ ಸಾಗುತ್ತಿದ್ದಾರೆ. ವಿರೋಧ
ಪಕ್ಷಕ್ಕೆ ಯಾವುದು ಮಹತ್ವ, ಯಾವ ವಿಷಯದಲ್ಲಿ ಸರ್ಕಾರವನ್ನು ಕಟ್ಟಿ ಹಾಕಬೇಕು ಎಂಬ ಸಾಮಾನ್ಯ ಜ್ಞಾನವೇ ಇಲ್ಲ. ಕೇವಲ ಮುಸ್ಲಿಂ, ಸಂಘ ಪರಿವಾರ ಹೆಸರು ಹೇಳಿದರೆ ಸಾಕು ಅವರು ಕೂಗಾಡುತ್ತಾರೆ. ಸರ್ಕಾರ ತಮಗೆ ಬೇಕಾದ ಬಿಲ್ ಪಾಸು ಮಾಡಿಕೊಳ್ಳುತ್ತದೆ ಎಂದು ಟೀಕಿಸಿದರು.
ಸೇರಿದಂತೆ ಎಲ್ಲ ವರ್ಗಗಳ ಹಿತರಕ್ಷಣೆ ಕೇಂದ್ರಿಕರಿಸಿ ಪ್ರಾದೇಶಿಕ ಪಕ್ಷ ರಚನೆಯಾಗಬೇಕಿದೆ, ಹೊಸ ದಿಕ್ಕಿನಲ್ಲಿ ಸಾಗಬೇಕಾಗಿದೆ. ಪ್ರಾದೇಶಿಕ ಪಕ್ಷ ಈಗ ರಾಜ್ಯಕ್ಕೆ ಅನಿವಾರ್ಯ, ಎಲ್ಲ ಸಮಾನ ಮನಸ್ಕ ಸಣ್ಣ ಪಕ್ಷಗಳನ್ನು ಒಂದೇ ಬ್ಯಾನರ್ ಅಡಿಯಲ್ಲಿ ತರುವ ಪ್ರಯತ್ನ ಮುಂದಾಗಿದ್ದು, 2028 ರಲ್ಲಿ ಈ ಪ್ರಾದೇಶಿಕ ಪಕ್ಷದ ನೇತೃತ್ವದಲ್ಲಿ ಚುನಾವಣೆ ಎದುರಿಸಲಾಗುವುದು ಎಂದರು.
ಈ ಸಂದರ್ಭದಲ್ಲಿ ಜಿಲ್ಲಾ ಅಧ್ಯಕ್ಷ ಎಸ್ ಬಿ ಕೆಂಬೋಗಿ ಮಾತನಾಡಿದ ಅವರು, ಎಸಿ ಎಸ್ಟಿ ಚಾಂಪಿಯನ್ ಸರಕಾರ ಆ ಸಮುದಾಯದ ಹಣ ದುರ್ಬಳಕೆ ಮಾಡಿಕೊಂಡಿದ್ದಲ್ಲದೆ, 16 ನೇ ಬಜೆಟ್ ರೈತರು ಸೇರಿದಂತೆ ಸಮಾನ್ಯ ಜನರಿಗೆ ಕಪ್ಪೆ ಚಿಪ್ಪು ಕೊಟ್ಟಿದೆ ಎಂದು ಆರೋಪಿಸಿ ಸರಕಾರದ ವಿರುದ್ಧ ಹರಿಹಾಯಿದ್ದರು.
ವಿಜಯಪುರ ಜಿಲ್ಲೆಯಲ್ಲಿ ಪಂಚ ನದಿಗಳು ಹರಿದರೂ, ನೀರಿಗಾಗಿ ರೈತರ ಪ್ರತಿಭಟನೆ ನಿಂತಿಲ್ಲ. ಈ ಭಾಗದಲ್ಲಿ ಕೃಷ್ಣೆ, ಭೀಮೆ ಅಂತಹ ಪ್ರಸಿದ್ಧ ನದಿಗಳಿವೆ. ಅವುಗಳ ನೀರು ಬೇಕಾ ಬಿಟ್ಟಿಯಾಗಿ ಹರಿಯುತ್ತೆವೆ. ಅದಕ್ಕೆ ಹೊಸ ಸ್ವರೂಪ ಕೊಡದೆ, ರೈತರು ನೀರಿಗಾಗಿ ಪರಿತಪ್ಪಿಸುವ ಕಾರ್ಯ ಇಂದಿಗೂ ಮುಂದುವರೆದಿದೆ.
ರಾಜ್ಯದ ಕೇಂದ್ರ ಕಛೇರಿ ಲಿಂಬೆ ಅಭಿವೃದ್ಧಿ ಮಂಡಳಿ ಮಾಡಿದ್ದು, ಇವತ್ತಿಗೂ ರೈತರಿಗೆ ಕಾಣುತ್ತಿಲ್ಲ. ಆದ್ದರಿಂದ ರೈತರಿಗೆ ಸೂಕ್ತ ಮಾರ್ಗದರ್ಶನ, ಪ್ರೊತ್ಸಾಹ ಮತ್ತು ಇತರೆ ಕಾರ್ಯಚಟುವಟಿಕೆಗಳು ನಡೆಯಬೇಕು. ಆದರೆ ಅದಕ್ಕೆ ಅನುದಾನದ ಕೊರತೆ ಮತ್ತು ಸಿಬ್ಬಂದಿ ಕೊರತೆ ಇದೆ ಎಂಬುದು ರೈತರ ಧ್ವನಿಯಲ್ಲಿ ಕೇಳುತ್ತೆವೆ ಎಂದು ಹೇಳಿದರು. ಈ ಭಾಗದ ತೋಟಗಾರಿಕೆ ಬೆಳೆಗಳಾದ ಲಿಂಬೆ, ದಾಳಿಂಬೆ, ದ್ರಾಕ್ಷಿ ಬೆಳೆಗಳಿಗೆ ವಿಶೇಷ ಪ್ಯಾಕೆಜ್ ಮೂಲಕ ಪ್ರೊತ್ಸಾಹ ನೀಡಬೇಕು. ಇನ್ನೂ ಬೆಂಗಳೂರಿನ ಜನರಂತೆ, ಮುಖ್ಯ ಮಂತ್ರಿ ಸಿದ್ದರಾಮಯ್ಯ ಕುಟುಂಬಕ್ಕೆ ಸಿಗುವ ಸರಕಾರದ ಸೌಲಭ್ಯಗಳು ನಮ್ಮ ಹಳ್ಳಿಗರಿಗೆ, ಕಟ್ಟ ಕಡೆಯ ಜನರಿಗೆ ಅವಕಾಶಗಳು ಸಿಗಬೇಕೆಂದು ಹೇಳಿದರು.
ಈ ಸಂದರ್ಭದಲ್ಲಿ ಆರ್ ಪಿ ಐ ಅಧ್ಯಕ್ಷ ಮೋಹನ ರಾಜ್, ಪುಟ್ಟುರಾಜು, ಹಣಂತಪ್ಪ ಹೋಳ್ಯಾಚ್ಚೆ, ಮಲ್ಲನಗೌಡ ಪಾಟೀಲ, ದೇವಮ್ಮ ಯಾಳವಾರ, ವಿರಭದ್ರಸ್ವಾಮಿ, ಸುರೇಶ ಕಾಂಬಳೆ, ಸಿದ್ದರಾಮ ತಳವಾರ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.
ಜಿಲ್ಲಾ ಕಾರ್ಯದರ್ಶಿ ತಮ್ಮರಾಯ ಆಸಂಗಿ
ಸ್ವಾಗತಸಿ, ನಿರೂಪಿಸಿ ವಂದಿಸಿದರು.

