ಉದಯರಶ್ಮಿ ದಿನಪತ್ರಿಕೆ
ಬಸವನಬಾಗೇವಾಡಿ: ತಾಲೂಕಿನ ನಾಗೂರ ಗ್ರಾಮದ ಆರಾಧ್ಯದೈವ ಯಮನೂರೇಶ್ವರ ಜಾತ್ರೆಯು (ಉರುಸ್) ಬುಧವಾರ ಸಡಗರ, ಸಂಭ್ರಮದಿಂದ ಜರುಗಿತು.ಯೋಗಿ ಚಕ್ರವರ್ತಿ ಚಾಂಗದೇವರ ಪುಣ್ಯದಿನ, ಜಾತ್ರಾಮಹೋತ್ಸವದಂಗವಾಗಿ ಬೆಳಗ್ಗೆ ಚಾಂಗದೇವರಿಗೆ ಅಭಿಷೇಕ, ವಿಶೇಷ ಪೂಜೆ ನೆರವೇರಿತು. ಬೆಳಗ್ಗೆಯಿಂದಲೇ ಬಸವನಬಾಗೇವಾಡಿ ಪಟ್ಟಣ ಸೇರಿದಂತೆ ವಿವಿಧ ಗ್ರಾಮಗಳಿಂದ ಕೆಲ ಜನರು ಕಾಲ್ನಡಿಗೆಯಿಂದ ನಾಗೂರ ಗ್ರಾಮಕ್ಕೆ ಆಗಮಿಸಿ ಯಮನೂರೇಶ್ವರ ದೇವಸ್ಥಾನಕ್ಕೆ ತೆರಳಿ ಪೂಜೆ ಸಲ್ಲಿಸಿ ಧನ್ಯತಾ ಭಾವ ಅನುಭವಿಸಿದರು.
ಭಕ್ತರು ದೇವರಿಗೆ ಸಕ್ಕರೆ, ಲೋಬಾನ ಕೊಡುವ ಮೂಲಕ ತಮ್ಮ ಹರಕೆ ತೀರಿಸಿದರು. ಕೆಲ ಭಕ್ತರು ದೀಡ್ ನಮಸ್ಕಾರ ಹಾಕಿದರು. ವಿವಿಧ ಗ್ರಾಮಗಳಿಂದ ಅಪಾರ ಸಂಖ್ಯೆಯ ಜನಸ್ತೋಮ ಜಾತ್ರಾಮಹೋತ್ಸವದಲ್ಲಿ ಕಂಡುಬಂದಿತ್ತು. ಯಮನೂರೇಶ್ವರ ಭಜನಾ ಮಂಡಳಿಯಿಂದ ಭಜನಾ ಪದಗಳು ಜರುಗಿದವು. ಜಾತ್ರೆಗೆ ಬಂದಿರುವ ವಿವಿಧ ಮನರಂಜನಾ ಆಟಗಳಲ್ಲಿ ಜನರು ಭಾಗವಹಿಸಿ ಸಂಭ್ರಮಿಸಿದರು. ಪಾಲಕರು ತಮ್ಮ ಮಕ್ಕಳಿಗೆ ಆಟಿಕೆ ಸಾಮಾನುಗಳನ್ನು ಖರೀದಿಸಿದರು. ಬೆಂಡು, ಬತ್ತಾಸ್ ಸೇರಿದಂತೆ ವಿವಿಧ ಸಾಮಾನುಗಳನ್ನು ಜನತೆ ಖರೀದಿಸಿದರು.
ಜಾತ್ರಾಮಹೋತ್ಸವದಂಗವಾಗಿ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಅಭಿಮಾನಿ ಬಳಗದಿಂದ ಹಮ್ಮಿಕೊಂಡಿದ್ದ ಟಗರಿನ ಕಾಳಗವನ್ನು ವೀಕ್ಷಿಸಿಲು ವಿವಿಧೆಡೆಗಳಿಂದ ಅಪಾರ ಜನರು ಬಂದಿದ್ದರು.
ಜಾತ್ರಾಮಹೋತ್ಸವದಲ್ಲಿ ಚಂದ್ರಶೇಖರ ಮುಳವಾಡ, ಸಿ.ಐ.ಮರೋಳ, ಮಹೇಶ ಮುಳವಾಡ, ಬಂದೇನವಾಜ ವಾಲೀಕಾರ, ಮಲ್ಲಪ್ಪ ಪೂಜಾರಿ, ಧರ್ಮಣ್ಣ ಪೂಜಾರಿ, ಬಾಬು ದರ್ಗಾ, ಕಲಂದರ ದರ್ಗಾ, ಹೈದರಸಾಬ ಚಪ್ಪರಬಂದಿ, ಅಲ್ಲಾಭಕ್ಷ ದರ್ಗಾ, ಶರಣಪ್ಪ ನಿಡಗುಂದಿ, ಮಲ್ಲನಗೌಡ ಪಾಟೀಲ, ಶ್ರೀಶೈಲ ಮಸೂತಿ, ಶರಣು ಮರೋಳ, ಮಣ್ಣೂರ ಗ್ರಾಮ ಪಂಚಾಯಿತಿ ಅಧ್ಯಕ್ಷ ಬಾಲು ಲಮಾಣಿ, ವಿನೋದ ಲಮಾಣಿ, ಭೋಜು ನಾಯಕ, ಅಣ್ಣಾರಾಯಗೌಡ ಪಾಟೀಲ, ಯಮನಪ್ಪ ಪೂಜಾರಿ, ರಾವುತಪ್ಪ ತೆಲಗಿ, ಸುಬ್ಬು ಲಮಾಣಿ, ಮಲ್ಲಪ್ಪ ಆಲಕೊಪ್ಪರ, ಬಾಬು ಆರ್ಯರ, ನಬಿಸಾಬ ಕೊರಬು, ಎಂ.ಬಿ.ಕೊರಬು, ಅಮೀರ ಚಪ್ಪರಬಂದ, ಅಮರಯ್ಯ ಹಿರೇಮಠ, ರೇವಣಸಿದ್ದ ನಂದಿಹಾಳ, ವಿರೇಶ ಮರೋಳ, ರಾವುತಪ್ಪ ತೆಲಗಿ, ಶಿವಪ್ಪ ಹಚ್ಯಾಳ, ಎಂ.ಬಿ.ರಗಟಿ, ಶರಣಪ್ಪ ನಾಲತವಾಡ, ಸಂಗಪ್ಪ ಮಾದರ, ಈರಪ್ಪ ಭದ್ರಗೊಂಡ, ಬಾಬು ನಂದಿಹಾಳ, ಶಿವಬಸಪ್ಪ ಭದ್ರಗೊಂಡ, ಸುಬ್ಬು ಲಮಾಣಿ ಸೇರಿದಂತೆ ಅನೇಕರು ಇದ್ದರು.
ಗಂಧಾಭಿಷೇಕ, ದೀಪೋತ್ಸವಃ ದೇವಸ್ಥಾನ ಆವರಣದಲ್ಲಿ ಜಾತ್ರಾಮಹೋತ್ಸವದಂಗವಾಗಿ ಮಂಗಳವಾರ ಸಂಜೆ ೧೧೧೧ ದೀಪೋತ್ಸವ ಜರುಗಿದ ನಂತರ ವಾದ್ಯವೈಭವದೊಂದಿಗೆ ಯಮನೂರೇಶ್ವರ ದೇವರಿಗೆ ಗಂಧಾಭಿಷೇಕ (ಸಂದಲ್) ನೆರವೇರಿತು. ಇದಕ್ಕೂ ಮುನ್ನ ಸಂಜೆ ೫ ಗಂಟೆಗೆ ಚಾಂಗದೇವರ ಭಾವಚಿತ್ರ ಮೆರವಣಿಗೆ ವಿವಿಧ ಕಲಾ ತಂಡಗಳೊಂದಿಗೆ ಗ್ರಾಮದ ಪ್ರಮುಖ ಬೀದಿಗಳಲ್ಲಿ ಜರುಗಿತು. ರಾತ್ರಿ ವಾದಿ ಪ್ರತಿವಾದಿ ಡೊಳ್ಳಿನ ಪದಗಳು ಜರುಗಿದವು. ಕಾರ್ಯಕ್ರಮದಲ್ಲಿ ಮಣ್ಣೂರ ಗ್ರಾಪಂ ಅಧ್ಯಕ್ಷ ಬಾಲು ಲಮಾಣಿ, ಸಿ.ಎಂ.ಮರೋಳ, ಸಿ.ಐ.ಮುಳವಾಡ, ಧರ್ಮಣ್ಣ ಪೂಜಾರಿ, ಮಲ್ಲಪ್ಪ ಪೂಜಾರಿ, ಶ್ರೀಶೈಲ ಮಸೂತಿ, ಹೈದರ ಚಪ್ಪರಬಂದ, ವಿನೋದ ನಾಯಕ, ಬೋಜು ನಾಯಕ, ಶರಣು ಮರೋಳ, ಮಹೇಶ ಮುಳವಾಡ, ಬಂದೇನವಾಜ ವಾಲೀಕಾರ, ದಸ್ತಗೀರ ಮುಲ್ಲಾ ಸೇರಿದಂತೆ ಇತರರು ಭಾಗವಹಿಸಿದ್ದರು.

