ಉದಯರಶ್ಮಿ ದಿನಪತ್ರಿಕೆ
ಇಂಡಿ: ಮಹಿಳೆಯರು ಬೆಳಗ್ಗೆ ಎದ್ದ ಕ್ಷಣದಿಂದ ಮಲಗುವವರೆಗೆ ಒತ್ತಡದಲ್ಲೇ ಆ ದಿನವನ್ನು ಕಳೆಯುತ್ತಿದ್ದೆವೆ. ಮನೆ-ಮಕ್ಕಳ ಜವಾಬ್ದಾರಿ, ಟ್ರಾವೆಲ್ ಮಾಡುವಾಗ ಟ್ರಾಫಿಕ್ ಸಮಸ್ಯೆ, ಆಫೀಸ್ಗೆ ಬಂದರೆ ಗೋಲ್, ಟಾರ್ಗೆಟ್ ಹೀಗೆ ಇಡೀ ದಿನ ಒಂದೆಲ್ಲಾ ಒಂದು ರೀತಿಯ ಮಾನಸಿಕ ಒತ್ತಡಕ್ಕೆ ಒಳಗಾಗುತ್ತಿದ್ದೇವೆ. ಆ ಕಾರಣದಿಂದಾಗಿ ಮಾನಸಿಕ ಅನಾರೋಗ್ಯಕ್ಕೆ ತುತ್ತಾಗಿ ಅನೇಕ ರೂಗಗಳಿಂದ ಬಳಲುವ ಪರಿಸ್ಥಿತಿ ನಿರ್ಮಾಣವಾಗುತ್ತಿದೆ. ಆದ್ದರಿಂದ ಮಹಿಳೆಯರು ಪ್ರತಿ ನಿತ್ಯ ಧ್ಯಾನ ಮತ್ತು ಯೋಗದಲ್ಲಿ ಪಾಲ್ಗೊಂಡು ಆರೋಗ್ಯದತ್ತ ಗಮನ ಹರಿಸಲು ರಾಜಯೋಗಿ ಬಿ ಕೆ ಯಮುನಾ ಅಕ್ಕನವರು ಹೇಳಿದರು.
ಭಾನುವಾರ ಪಟ್ಟಣದ ಶಾಂತೇಶ್ವರ ಮಂಗಲ ಕಾರ್ಯಾಲಯದಲ್ಲಿ ತಳವಾರ ಮಹಿಳಾ ಸಮಾಜವತಿಯಿಂದ ಜರುಗಿದ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ ಕಾರ್ಯಕ್ರಮ ಉದ್ಘಾಟಕರಾಗಿ ಬ್ರಹ್ಮ ಕುಮಾರಿ ಈಶ್ವರಿ ವಿಶ್ವವಿದ್ಯಾಲಯದ ಸೇವಾ ಕೇಂದ್ರ ಇಂಡಿಯ ರಾಜಯೋಗಿನಿ ಬಿಕೆ ಯಮುನಾ ಅಕ್ಕನವರು ಉದ್ಘಾಟಿಸಿ ಮಾತನಾಡಿದರು.
ಲಿಂಗ ತಾರತಮ್ಯದಿಂದ ಮುಕ್ತವಾದ ಉತ್ತಮ ಸಮಾಜವನ್ನು ನಿರ್ಮಿಸಲು ಮತ್ತು ಲಿಂಗ ಸಮಾನತೆಯ ಸಂದೇಶವನ್ನು ನೀಡಲು ಪ್ರತಿ ವರ್ಷ ಮಾರ್ಚ್ 8 ರಂದು ಅಂತರರಾಷ್ಟ್ರೀಯ ಮಹಿಳಾ ದಿನವನ್ನು ಆಚರಿಸಲಾಗುತ್ತದೆ. ಇತಿಹಾಸ ಮತ್ತು ಸಮಕಾಲೀನ ಸಮಾಜದಲ್ಲಿನ ಘಟನೆಗಳಿಗೆ ಮಹಿಳೆಯರ ಕೊಡುಗೆಗಳನ್ನು ಎತ್ತಿ ತೋರಿಸುವ ದಿನವೇ ಮಾರ್ಚ್ 8 ರ ಅಂತಾರಾಷ್ಟ್ರೀಯ ಮಹಿಳಾ ದಿನ ಎಂದು ಹೇಳಿದರು.
ಮುಖ್ಯ ಅತಿಥಿಯಾಗಿ ಕದಳಿ ವೇದಿಕೆಯ ಅಧ್ಯಕ್ಷೆ ಗಂಗೂಬಾಯಿ ಗಲಗಲಿ ಮಾತನಾಡಿದ ಅವರು, ಸ್ತ್ರೀ ಎಂದರೆ ಬರಿ ಹೆಣ್ಣಲ್ಲ, ಅವಳೊಂದು ಅದ್ಬುತ ಶಕ್ತಿ. ಇಂದು ಮಹಿಳಾ ಸಮಾನತೆ, ಶೋಷಣೆ, ತಾರತಮ್ಯ ಮತ್ತು ಹಿಂಸೆ ಮುಕ್ತ ಜೀವನಕ್ಕಾಗಿ ಈ ಹೋರಾಟ ನಡೆದೇ ಇದೆ. ಪ್ರತಿ ಮಹಿಳೆಯೂ ಹೋರಾಟದ ಪರಂಪರೆ ಯನ್ನು ಎತ್ತಿ ಹಿಡಿಯಬೇಕು ಮತ್ತು ಶೋಷಣೆಯ ವ್ಯವಸ್ಥೆಯನ್ನು ಬದಲಿಸಲು ಸಂಘಟಿತರಾಗಬೇಕಿದೆ ಎಂದು ಹೇಳಿದರು. ಹೆಣ್ಣು ಸಂಸಾರದ ಕಣ್ಣು, ಹೆಣ್ಣು ಮನೆಯ ಮಹಾಲಕ್ಷ್ಮಿ, ಮನೆ ಮೊದಲು ಪಾಠ ಶಾಲೆ, ಜನನಿ ತಾನೇ ಮೊದಲು ಗುರು ಎಂದು ಹೆಣ್ಣನ್ನು ಬಣ್ಣಿಸಿದರು.
ಅಧ್ಯಕ್ಷತೆ ವಹಿಸಿ ಸಾಹಿತಿ, ಶಿಕ್ಷಕ ಪಾರ್ವತಿ ಸೊನ್ನದ ಮಾತನಾಡಿದ ಅವರು, ಹೆಣ್ಣು ಮಕ್ಕಳು ನಾನಾ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ್ದಾರೆ. ಸಮಾಜದಲ್ಲಿ ಹೆಣ್ಣು ಮಗುವಿನ ಹಕ್ಕುಗಳ ಬಗ್ಗೆ ಜಾಗೃತಿ ಮೂಡಿಸಬೇಕು. ಅಸಮಾನತೆಯನ್ನು ಹೋಗಲಾಡಿಸಲು ಸರ್ವರು ಕೈಜೋಡಿಸಬೇಕು ಎಂದರು. ಅದಲ್ಲದೇ ಮಹಿಳೆಯರು ಸಂಕೋಚ ಬಿಟ್ಟು ಸಿಕ್ಕ ಅವಕಾಶಗಳನ್ನು ಚನ್ನಾಗಿ ಉಪಯೋಗಿಸಿಕೊಂಡು ಸಾಧನೆ ಮಾಡಬೇಕು. ಮಹಿಳೆಯರಿಗೆ ಸಾಧನೆ ಮಾಡಲು ಪುರುಷರಷ್ಟು ಸಮಾನ ಅವಕಾಶಗಳಿದ್ದು ಕೀಳಿರಿಮೆ ಪಡದೆ ಸಾಧನೆ ಮಾಡಬೇಕು.ಮಹಿಳೆಯರ ಸಾಂಸ್ಕೃತಿಕ, ರಾಜಕೀಯ ಮತ್ತು ಸಾಮಾಜಿಕ ಆರ್ಥಿಕ ಹೀಗೆ ವಿವಿಧ ಕ್ಷೇತ್ರಗಳಲ್ಲಿ ಮಾಡಿದ ಸಾಧನೆಗಳನ್ನು ಗಮನಿಸುತ್ತದೆ. ಮಹಿಳಾ ದಿನವು ಲಿಂಗ ತಾರತಮ್ಯ, ಪಕ್ಷಪಾತದಿಂದ ಮುಕ್ತವಾಗಿರುವ ಲಿಂಗ-ಸಮಾನ ಜಗತ್ತಿಗೆ ಕರೆ ನೀಡುತ್ತದೆ.
ಈ ದಿನವನ್ನು ಮಹಿಳೆಯರ ಗೌರವಾರ್ಥವಾಗಿ ಆಚರಿಸಲಾಗುತ್ತದೆ ಎಂದು ಹೇಳಿದರು.
ಮಹಿಳೆಯರಿಂದ ಅನೇಕ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು. ತದನಂತರ ಅನೇಕ ಮಹಿಳಾ ಸಾಧಕರಿಗೆ ಸನ್ಮಾನ ಹಾಗೂ ಮಹರ್ಷಿ ವಾಲ್ಮೀಕಿ ಭಾವಚಿತ್ರವಿರುವ ಪೋಟೊವನ್ನು ಕೊಡಮಾಡಿದರು.
ಈ ಸಂದರ್ಭದಲ್ಲಿ ಪ್ರಜಾತಾ ಜಮಾದಾರ, ಭಾಗ್ಯ ಪಾಟೀಲ, ಸಾವಿತ್ರಿ ವಾಲೀಕಾರ, ಗಂಗೂ ವಾಲೀಕಾರ, ನಿಂಗಮ್ಮ ದಿಕ್ಸಂಗಿ, ಜ್ಯೋತಿ ಬಸರಕೊಡ, ದೀಪಿಕಾ ಸಾತಿಹಾಳ, ಭಕ್ತಿ ಜಮಾದಾರ, ರೇಖಾ ವಗ್ಗಿ, ಲಕ್ಷ್ಮೀ ಸೊನ್ನದ, ಪವಿತ್ರಾ ನಾಲವಾರ ಸೇರಿದಂತೆ ಇನ್ನೂ ಅನೇಕ ಮಹಿಳೆಯರು ಭಾಗವಹಿಸಿದ್ದರು.
ಸುಜಾತಾ ಮಡ್ನಳ್ಳಿ ಸ್ವಾಗತ, ಜಯಮಾಲಾ ಪಾಟೀಲ ನಿರೂಪಣೆ, ಪಾರ್ವತಿ ಕೋಳಿ ವಂದಿಸಿ ನಿರ್ವಹಿಸಿದರು.

