ಉದಯರಶ್ಮಿ ದಿನಪತ್ರಿಕೆ
ತಿಕೋಟಾ: ಪ್ರತಿಯೊಬ್ಬರ ಸಹಕಾರದಿಂದ ಪ್ರಥಮವಾಗಿ ಜರುಗುವ ತಾಲ್ಲೂಕ ಸಾಹಿತ್ಯ ಸಮ್ಮೇಳನ ಯಶಸ್ವಿಯಾಗಬೇಕು ಎಂದು ತಾಲ್ಲೂಕ ಘಟಕದ ಅಧ್ಯಕ್ಷ ಸಿದ್ರಾಮಯ್ಯ ಲಕ್ಕುಂಡಿಮಠ ಹೇಳಿದರು.
ಪಟ್ಟಣದ ವಿರಕ್ತಮಠದಲ್ಲಿ ಬುಧವಾರ ಸಂಜೆ ನಡೆದ ತಾಲ್ಲೂಕ ಮಟ್ಟದ ಸಾಹಿತ್ಯ ಸಮ್ಮೇಳನದ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದ ಅವರು ಶಿಸ್ತುಬದ್ದವಾಗಿ, ಅಚ್ಚುಕಟ್ಟಾಗಿ ಬೇರೆ ತಾಲ್ಲೂಕಗಳಿಗಿಂತ ವಿಶಿಷ್ಟವಾಗಿ ಮಾದರಿಯಾಗಿ ಜರುಗುವ ನಿಟ್ಟಿನಲ್ಲಿ ಕಾರ್ಯಗತವಾಗಬೇಕು ಎಂದರು.
ಕಸಾಪ ಜಿಲ್ಲಾಧ್ಯಕ್ಷ ಹಾಸಿಂಪೀರ ವಾಲಿಕಾರ ಮಾತನಾಡಿ, 14 ತಾಲ್ಲೂಕ, 5 ಜಿಲ್ಲಾ ಸಮ್ಮೇಳನಗಳನ್ನು ಇಲ್ಲಿಯವರೆಗೆ ಆಯೋಜನೆ ಮಾಡಲಾಗಿದೆ. ಸಾಹಿತ್ಯಸಕ್ತರ ಮೂಲಕ ಸಮ್ಮೇಳನ ಯಶಸ್ಸು ಮಾಡಬೇಕಾಗಿದೆ. ಗೋಷ್ಟಿ ಏರ್ಪಾಟ, ತಾಲ್ಲೂಕಿನ ಪ್ರತಿ ಗ್ರಾಮಕ್ಕೆ ಭೇಟಿ ನೀಡಿ ಅವರ ಸಹಕಾರ ಪಡೆದುಕೊಂಡು ಯಶಸ್ಸು ಮಾಡೋಣ ಎಂದರು.
ಗ್ರೇಡ್ 2 ತಹಶಿಲ್ದಾರ ಎಸ್.ಎಚ್.ಅರಕೇರಿ ಮಾತನಾಡಿ ತಾಲ್ಲೂಕ ಆಡಳಿತದಿಂದ ಸಂಪೂರ್ಣ ಸಹಕಾರ, ಶಿಸ್ತುಬದ್ದವಾಗಿ ಕೈಜೋಡಿಸಿ ಯಶಸ್ಸಿಗೆ ಪಣ ತೊಡುತ್ತೇವೆ ಎಂದರು.
ಸಾಮಾಜಿಕ ಬದ್ದತೆಯಿಂದ ಕಾರ್ಯ ನಿರ್ವಹಿಸಬೇಕು. ಕಡಿಮೆ ಅವಧಿಯಲ್ಲಿ ಸಮ್ಮೇಳನದ ಯಶಸ್ಸು ಮಾಡಬೇಕಾಗಿದೆ. ವಿವಿಧ ಸಮಿತಿಗಳನ್ನು ಮಾಡಬೇಕು. ಮಾದರಿಯಾಗುವ ಸಮ್ಮೇಳನ ಆಗಬೇಕು. ಹಣಕಾಸಿನ ಪಾರದರ್ಶಕತೆ ಇರಬೇಕು. ಅಚ್ಚುಕಟ್ಟಾಗಿ ಸಮಯ ಪಾಲನೆ ಆಗಬೇಕು ಎಂದು ಸಭೆಯಲ್ಲಿ ಸೇರಿದ ಸಾಹಿತ್ಯಾಸಕ್ತರು ಹೇಳಿದರು.
ತಾಪಂ ಇಓ ಬಸವಂತರಾಯಗೌಡ ಬಿರಾದಾರ, ಉಪನೊಂದನಾಧಿಕಾರಿ ಎಸ್.ಆರ್.ಬಡಗೇರ, ಪಪಂ ಮುಖ್ಯಾಧಿಕಾರಿ ರಘು ನಡುವಿನಮನಿ ಯಾಕುಬ ಜತ್ತಿ, ಬಾಬುರಾವ ಮಹಾರಾಜ, ಬಸಯ್ಯ ವಿಭೂತಿ, ಉಮೇಶ ಮೂರತೇಲಿಮಠ, ರಾಮಗೊಂಡ ಚಾವರ, ರಾಜು ಸುಣಗಾರ, ಸೋಮಶೇಖರ ಬಿರಾದಾರ, ಚನ್ನಯ್ಯ ಮಠಪತಿ ಎಲ್ಲ ಇಲಾಖೆಯ ಅಧಿಕಾರಿಗಳು ಇದ್ದರು.

