ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ಜಿಲ್ಲೆಯಲ್ಲಿ ಕಾರ್ಯ ನಿರ್ವಹಿಸುತ್ತಿರುವ ಚೀಟಿ ನಿಧಿ ಕಂಪನಿಗಳು ತಮ್ಮ ಮಾಹಿತಿಯನ್ನು ಈ ಪ್ರಕಟಣೆಯ ಮೂರು ದಿನಗಳೊಳಗೆ ಜಿಲ್ಲೆಯ ಸಹಕಾರ ಸಂಘಗಳ ಉಪ ನಿಬಂಧಕರ ಕಚೇರಿಗೆ ಒದಗಿಸುವಂತೆ ಸಹಕಾರ ಸಂಘಗಳ ಇಲಾಖೆ ಉಪ ನಿಬಂಧಕರಾದ ಶ್ರೀಮತಿ ಎಸ್.ಕೆ.ಭಾಗ್ಯಶ್ರೀ ಅವರು ತಿಳಿಸಿದ್ದಾರೆ.
ಜಿಲ್ಲೆಯಲ್ಲಿ ೩೮ ಚೀಟಿ ನಿಧಿ ಕಂಪನಿಗಳಿದ್ದು, ಇವುಗಳಲ್ಲಿ ೧೨ ರಿಂದ ೧೫ ಚೀಟಿ ಕಂಪನಿಗಳು ಕಾರ್ಯನಿರ್ವಹಿಸುತ್ತಿವೆ. ಇವುಗಳ ಪೈಕಿ,ಚೀಟಿ ಅಧಿನಿಯಮ ೧೯೮೨ರ ಪ್ರಕರಣ ೨೦(೧)ರ ಪ್ರಕರಣ ಚೀಟಿ ೪ರಡಿಯಲ್ಲಿ ಸಹಕಾರ ಸಂಘಗಳ ಉಪ ನಿಬಂಧಕರ ಕಾರ್ಯಾಲಯದಿಂದ ಪೂರ್ವಾನುಮತಿ ಪಡೆದು, ಸಧ್ಯ ಇರುವ ಗುಂಪುಗಳ ಮತ್ತು ಅವಧಿ ಪೂರ್ಣಗೊಂಡ ಗುಂಪುಗಳ ಎರಡು ವರ್ಷದ ಮಾಹಿತಿ ಸಲ್ಲಿಸಲು ತಿಳಿಸಲಾಗಿದ್ದು, ಚಾಲ್ತಿಯಲ್ಲಿದ್ದು ಗುಂಪುಗಳನ್ನು ರಚಿಸದೇ ಇರುವ ಚೀಟಿ ಕಂಪನಿಗಳನ್ನು ಕಪ್ಪು ಪಟ್ಟಿಗೆ ಸೇರಿಸಲಾಗುವುದು.
ಆದ್ದರಿಂದ, ಸಂಬಂಧಿಸಿದ ಚೀಟಿ ಕಂಪನಿಯ ಪೋರಮನ್ ಗಳು ಆಕ್ಷೇಪಣೆಗಳಿದ್ದರೆ ನೇರವಾಗಿ ಸಹಕಾರ ಸಂಘಗಳ ಉಪ ನಿಬಂಧಕರ ಕಚೇರಿ ಸಂಪರ್ಕಿಸಿ ಸಲ್ಲಿಸುವಂತೆಯೂ, ಯಾವುದೇ ಆಕ್ಷೇಪಣೆ ಬಾರದೇ ಇದ್ದಲ್ಲಿ ಹಾಗೂ ಗುಂಪುಗಳ ರಚಿಸದೇ ಇರುವ ಕಂಪನಿ ಹೆಸರನ್ನು ಕಪ್ಪು ಪಟ್ಟಿಗೆ ಸೇರಿಸಲಾಗುವುದೆಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
