ಉದಯರಶ್ಮಿ ದಿನಪತ್ರಿಕೆ
ಇಂಡಿ: ತಾಲ್ಲೂಕಿನ ಇಂಗಳಗಿ ಗ್ರಾಮದ ವಿವಿಧೋದ್ದೇಶ ಪ್ರಾಥಮಿಕ ಗ್ರಾಮೀಣ ಕೃಷಿ ಸಹಕಾರ ಸಂಘದ ಅಧ್ಯಕ್ಷರಾಗಿ ಪ್ರಭು ಹೊಸಮನಿ, ಉಪಾಧ್ಯಕ್ಷರಾಗಿ ಶ್ರೀಮಂತ ಗುಂದವಾನ ಅವರು ಅವಿರೋಧ ಆಯ್ಕೆಯಾದರೆಂದು ಚುನಾವಣಾಧಿಕಾರಿ ಜಯರಾಮ ಚೌಹಾಣ ಘೋಷಿಸಿದರು.
ಸೋಮವಾರ ಅಧ್ಯಕ್ಷ ಉಪಾಧ್ಯಕ್ಷ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ಎರಡೂ ಸ್ಥಾನಕ್ಕೆ ಒಂದೊಂದು ನಾಮಪತ್ರ ಮಾತ್ರ ಸಲ್ಲಿಕೆಯಾಗಿದ್ದರಿಂದ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಎರಡೂ ಸ್ಥಾನಕ್ಕೆ ಅವಿರೋಧ ಆಯ್ಕೆ ನಡೆಯಿತು.
ನಿರ್ದೇಶಕರಾದ ಮಹಿಬೂಬ ಜಮಾದಾರ, ಉಮೇಶ ಚೌಹಾಣ, ಪ್ರಭು ವಾಲಿಕಾರ, ಪಾಂಡುರಂಗ ಜಾಧವ್, ವಿಠ್ಠಲ ಬನಸೋಡೆ, ಸಿದ್ದಪ್ಪ ಹಂದರಾಳ, ಶೀಲವಂತಿ ಪೂಜಾರಿ, ಭಾಗವಹಿಸಿದ್ದರು.
ಈ ಸಂದರ್ಭದಲ್ಲಿ ಗ್ರಾಮಸ್ಥರಾದ ಅಣ್ಣಪ್ಪ ಅಹಿರಸಂಗ, ಸುಭಾಸ ಥೋರಾತ, ಉಮೇಶ ಬಳಬಟ್ಟಿ, ಜಕ್ಕಪ್ಪಾ ಪೂಜಾರಿ, ಹುಸೇನಸಾಬ ಅಹಿರಸಂಗ, ಭೀಮ ಹೊಸಮನಿ, ಚಿಮ್ಮಾಜಿ ಥೋರಾತ, ಮಹಿಬೂಬ ಪಟೇಲ, ಹಸನ ಮುಜಾವರ, ವಿಠ್ಠಲ ಹೊಸಮನಿ, ಬಾಬು ಅತ್ತಾರ, ಹುಸೇನ ನರವೇ, ತುಕಾರಾಮ ಹೊಸಮನಿ, ಪುಂಡಲೀಕ ಹೊಸಮನಿ, ಸೇರಿದಂತೆ ಅನೇಕರು ಇದ್ದರು.

