ಉದಯರಶ್ಮಿ ದಿನಪತ್ರಿಕೆ
ಆಲಮೇಲ: ಇಲ್ಲಿನ ಆರೂಡ ಸಂಗನ ಬಸವೇಶ್ವರ ಮಠ ಆಲಮಮೇಲ ದಲ್ಲಿ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಅಂಗವಾಗಿ ಆಲಮೇಲ ಪಟ್ಟಣ ಪಂಚಾಯಿತಿ ವ್ಯಾಪ್ತಿಯ ಮಹಿಳಾ ಪೌರ ಕಾರ್ಮಿಕರಿಗೆ ಶ್ರೀಮಠದ ವತಿಯಿಂದ ಸತ್ಕಾರ ಕಾರ್ಯಕ್ರಮ ಹೂ ಹಣ್ಣು ಶಾಲು ಮುತ್ತನಹಾರ ನೀಡಿ ಸತ್ಕರಿಸಿಲಾಯಿತು.
ಕಾರ್ಯಕ್ರಮದ ಅಧ್ಯಕ್ಷತೆ ಕಸ್ತೂರಬಾಯಿ ಕೊಳಾರಿ ವಹಿಸಿದ್ದರು.
ಡಾ|| ಮಂಜುಷಾ, ಪಾಟೀಲ ಉದ್ಘಾಟಿಸಿದರು.
ಡಾII ಶಾರದಾ ರಾ.ಪಾಟೀಲ ಇಂದು ಪ್ರತಿಷ್ಠಿತ ಪುರುಷರ ಹಿಂದೆ ಓರ್ವ ತ್ಯಾಗಮಯಿ ತಾಯಿಯ ಪ್ರೀತಿ ಕರುಣೆ ಮಾರ್ಗದರ್ಶನವಿದೆ ಅವರೆಂದರೆ ಗಾಂಧೀಜಿ ಹಿಂದೆ ತಾಯಿ ಪ್ರತಳಿ ಬಾಯಿ ಶಿವಾಜಿಯ ಹಿಂದೆ ತಾಯಿ ಜೀಜಾಬಾಯಿ ಸ್ವಾಮಿ ವಿವೇಕಾನಂದರ ಹಿಂದೆ ಅವರ ತಾಯಿಯ ತ್ಯಾಗ ರಾಮಕೃಷ್ಣ ಪರಮಹಂಸರ ಹಿಂದೆ ಮಡದಿ ಶಾರದಾ ಮಾತೆಯ ಪ್ರಭಾವ ಅಷ್ಟೇ ಏಕೆ ಇಂದಿನ ದೇಶದ ಪ್ರಧಾನಿ ಹಿಂದೆ ಅವರ ತಾಯಿ ಹಿರಾ ಬೇನ್ ಅವರ ಪರಿಶ್ರಮವಿದೆ ಎಂದು ಹೇಳಿದರು. 11 ವರ್ಷದ ಮಗು ಕುಮಾರಿ ನಮ್ರತಾ ರಮೇಶ ಕತ್ತಿ ಅವರನ್ನು “ಕಾಶ್ಮೀರಕ್ಕೆ ಹೋಗಿದ್ದೆ” ಮಕ್ಕಳ ಪ್ರವಾಸ ಕಥನ ಪುಸ್ತಕ ರಚಿಸಿ ಕರ್ನಾಟಕದ ಅತಿ ಚಿಕ್ಕ ಮಕ್ಕಳ ಸಾಹಿತಿ ಹೆಸರು ಪಡೆದದ್ದಕ್ಕೆ ಅಭಿನಂದಿಸಿ ಸತ್ಕರಿಸಲಾಯಿತು. ಜೊತೆಗೆ ಸಾವಯವ ಕೃಷಿ ಪದ್ಧತಿ ಅಳವಡಿಸಿಕೊಂಡು ರಾಜ್ಯ ಅಂತರಾಜ್ಯದಲ್ಲಿ ಹೆಸರು ಮಾಡಿದ ನೀಲೇಷಾ ಸುನೀಲ ನಾರಾಯಣಕರ್ ಅವರನ್ನು ಗೌರವಿಸಲಾಯಿತು
ಇನ್ನೋರ್ವ ಉಪನ್ಯಾಸಕಿ ಡಾ|| ಸಂಗಮೇಶ್ವರಿ, ಮಹಾಜನ್ ಇಂದು ಜನರಲ್ಲಿ ಹೆಣ್ಣಿನ ಬಗ್ಗೆ ತಾತ್ಸಾರ ಕಂಡುಬರುತ್ತದೆ ಹೆಣ್ಣು ಹುಣ್ಣಲ್ಲ ಜಗದ ಕಣ್ಣು ತಾಯಿಯಾಗಿ ಹೆಣ್ಣು ಬೇಕು ಹೆಂಡತಿಯಾಗಿ ಹೆಣ್ಣು ಬೇಕು ಅತ್ತಿಯಾಗಿ ಹೆಣ್ಣು ಬೇಕು ಅಕ್ಕನಾಗಿ ತಂಗಿಯಾಗಿ ಹೆಣ್ಣು ಬೇಕು ಮಗಳಾಗಿ ಹೆಣ್ಣು ಏಕೆ? ಬೇಡಾ ಹೆಣ್ಣೊಂದು ಕಲಿತರೆ ಶಾಲೆಯೊಂದು ತೆರೆದಂತೆ ಓರ್ವ ಕಲಿತ ಮಹಿಳೆ ನೂರು ಜನ ಶಿಕ್ಷಕರಿಗೆ ಸಮ ಆದ್ದರಿಂದ ಹೆಣ್ಣನ್ನು ಗೌರವಿಸಿರಿ, ಧರ್ಮದ ಹೆಸರಿನಲ್ಲಿ ಅತ್ಯುತ್ತಮ ಕಾರ್ಯ ಮಾಡುತ್ತಿರು ಆರೂಢ ಮಠದ ಬಸವಲಿಂಗ ಶರಣರ ಕಾರ್ಯ ಶ್ಲಾಘನೀಯ ಎಂದರು.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ವಿಜಯಲಕ್ಷ್ಮೀ ಕತ್ತಿ, ಜ್ಯೋತಿ ಕೊಳಾರಿ, ಶೈಲಾ ಅವರಗೊಂಡ, ಕಾವೇರಿ ಔರಾದಿ, ಶೈಲಾ ಹೊಸಮನಿ ಇದ್ದರು.
ಸದಾಶಿವ ಬಿರಾದಾರ, ಶಿವರಾಜ ಪತ್ತಾರ, ವಿಶ್ವರ್ಯಾ ಕೊಳಾರಿ, ಇವರಿಂದ ಸುಗಮ ಸಂಗೀತ ನಡೆಯಿತು.
ಪಂಡಿತ ಅವಜಿ ಸ್ವಾಗತಿಸಿ ನಿರೂಪಿಸಿದರು. ಸಂಗು ಬಳೂಂಡಗಿ ವಂದಿಸಿದರು.

