ಉದಯರಶ್ಮಿ ದಿನಪತ್ರಿಕೆ
ಸಿಂದಗಿ: ಡಾ. ಬಿ.ಆರ್.ಅಂಬೇಡ್ಕರ್ ಅವರ ಜಯಂತಿಯನ್ನು ಕೇವಲ ದಲಿತರಿಂದ ಮಾತ್ರವಲ್ಲದೇ ಸರ್ವ ಸಮಾಜದ ಸರ್ವ ಜನರಿಂದ ಆಚರಿಸುವಂತಾಗಬೇಕು ಎಂಬುದು ಸಿಂದಗಿ ಜನತೆಯ ಆಶಯವಾಗಿದೆ ಎಂದು ಮಾಜಿ ಪುರಸಭೆ ಸದಸ್ಯ ರಾಜಶೇಖರ ಕೂಚಬಾಳ ಹೇಳಿದರು.
ಪಟ್ಟಣದ ಅಂಬೇಡ್ಕರ್ ಭವನದ ಆವರಣದಲ್ಲಿ ಜರುಗಿದ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಅವರು, ಜಯಂತಿಯನ್ನು ಅತ್ಯಂತ ವಿಜೃಂಭಣೆಯಿಂದ ವೈಭವೋಪೇರಿತವಾಗಿ ಅರ್ಥಪೂರ್ಣವಾಗಿ ಯಾರೋಬ್ಬರ ನೇತೃತ್ವದಲ್ಲಿ ಮಾಡದೇ ಸಾಮೂಹಿಕ ನಾಯಕತ್ವದಲ್ಲಿ ಆಚರಿಸಲಾಗುವುದು. ಇಲ್ಲಿ ಯಾರೊಬ್ಬರ ವೈಯಕ್ತಿಕ ಹಿತಾಸಕ್ತಿಗೆ ಮಣಿಯದೇ ಅಂಬೇಡ್ಕರ್ ಅವರ ತತ್ವ ಸಿದ್ದಾಂತಕ್ಕೆ ಮಾತ್ರ ಅವಕಾಶವಿದೆ. ಅಂಬೇಡ್ಕರ್ ಅವರ ಜಯಂತಿ ಆಚರಣೆಗಷ್ಟೇ ಸೀಮಿತವಾಗಿರದೆ ಪ್ರತಿ ಹಳ್ಳಿಗಳ ದಲಿತರ ಮತ್ತು ಸವರ್ಣಿಯರ ನಡುವಿನ ಭಿನ್ನಾಭಿಪ್ರಾಯಗಳನ್ನು ಹೋಗಲಾಡಿಸುವುದು ಈ ಜಯಂತಿಯ ಮೂಲ ಆಶಯವಾಗಿದೆ. ಎಲ್ಲ ಸಂಘಟನೆಗಳನ್ನು ವಿಶ್ವಾಸಕ್ಕೆ ತೆಗೆದುಕೊಂಡು ಜ್ಯಾತ್ಯಾತೀತವಾಗಿ, ಧರ್ಮಾತೀತವಾಗಿ ಜನರಿಗೆ ಸಂವಿಧಾನದ ಆಶಯ ತಿಳಿಸುವುದಾಗಿದೆ ಎಂದರು.
ಇದೇ ಸಂದರ್ಭದಲ್ಲಿ ಮುಖಂಡರಾದ ಶ್ರೀಕಾಂತ ಸೋಮಜ್ಯಾಳ, ಶರಣು ಶಿಂಧೆ, ಚಂದ್ರಕಾಂತ ಸಿಂಗೆ ಮಾತನಾಡಿ, ಯಾವುದೇ ಕಾರ್ಯಕ್ರಮಗಳನ್ನು ಮಾಡಿದರೆ ಮುನಿಕೊಂಡಿರುವ ಮನಸ್ಸುಗಳನ್ನು ಒಂದುಗೂಡಿಸುವ ಕಾರ್ಯ ಮಾಡಬೇಕು. ಸತತ ಮೂರು ವರ್ಷ ಕರೋನಾ ಮತ್ತು ಚುನಾವಣೆ ನೀತಿ ಸಂಹಿತೆಗಳ ಕಾರಣದಿಂದಾಗಿ ಅದ್ದೂರಿ ಜಯಂತಿ ಆಗಿರಲಿಲ್ಲ. ಪ್ರಸ್ತುತ ಅನುಕೂಲಕರ ವಾತಾವರಣ ಇರುವುದುರಿಂದ ಸಿಂದಗಿಯಲ್ಲಿ ಆಚರಿಸುವ ಜಯಂತಿ ರಾಜ್ಯದಲ್ಲಿಯೇ ವಿಶಿಷ್ಠ ಎನ್ನುವ ನಿಲುವು ರಾಜ್ಯಾದಲ್ಲೆಲೆಡೆ ಇದೆ. ಸದ್ಯ ಜನರ ಮನಸ್ಸಿನಲ್ಲಿ ದ್ವಂದ ನಿಲುವು ಇರುವುದರಿಂದ ಅದನ್ನು ಕೊನೆಗಾಣಿಸಿ ಎಲ್ಲರೂ ಸೇರಿ ಒಂದೆ ಜಯಂತಿಯನ್ನು ಆಚರಣೆ ಮಾಡುವಂತಾಗಬೇಕು. ಸಮಾಜದ ವಿಷಯ ಬಂದಾಗ ಸ್ವಪ್ರತಿಷ್ಠೆ, ಸ್ವಾರ್ಥ ಬದಿಗಿಟ್ಟು ಒಂದಾಗಬೇಕು. ಅಂಬೇಡ್ಕರ್ ಅವರ ಚಿಂತನೆಗಳಿಗೆ ಆದ್ಯತೆ ಕೋಡಬೇಕೇ ವಿನಹಃ ವೈಯಕ್ತಿಕ ಹಿತಾಸಕ್ತಿಗಲ್ಲ ಎನ್ನುವ ಅಭಿಮತ ವ್ಯಕ್ತಡಿಸಿದರು.
ಈ ವೇಳೆ ಆನಂದ ಮಾಣಸುಣಗಿ, ಪ್ರಕಾಶ ಹಿರೇಕುರುಬರ, ಮಹೇಶ ಜಾಬಾನವರ, ರವಿ ಹೊಳಿ, ದತ್ತು ನಾಲ್ಕಮಾನ, ಸಂತೋಷ ಭಜಂತ್ರಿ, ಶಿವಶರಣ ಬಿಸನಾಳ, ರಾಕೇಶ ಕಾಂಬಳೆ, ಸಂತೋಷ ಪೂಜಾರಿ, ನಿಂಗಪ್ಪ ಸುಲ್ಪಿ, ಅಶೋಕ ಚೌರ, ಶಿವಾನಂದ ಡೋಣೂರ, ಅಂಬಿಕಾ ಪಾಟೀಲ, ಕುಮಾರ ಕುಂಬಾರ, ಮಡಿವಾಳ ಜವಳಗಿ, ಶರಣು ಖಾನಾಪೂರ, ಶರಣು ಬ್ಯಾಕೋಡ, ನಿಂಗಪ್ಪ ಸರವಂದಿ, ಶ್ರೀನಾಥ ಹೊಸಮನಿ, ರವಿ ಸುಲ್ಪಿ, ಪ್ರಕಾಶ ಸುಣಗಾರ, ಸುವರ್ಣಾ ಮಾಣಸುಣಗಿ, ಸಿದ್ದು ಮ್ಯಾಕೇರಿ, ಶರಣಮ್ಮ ನಾಯಕ, ಸಾಯಬಣ್ಣ ದೇವರಮನಿ ಸೇರಿದಂತೆ ಹಲವರಿದ್ದರು.

