ತಾಲೂಕು ಮಟ್ಟದ ಕಾಯಕ ಬಂಧುಗಳ ತರಬೇತಿಯ ಸಮಾರೋಪ ಸಮಾರಂಭ
ಉದಯರಶ್ಮಿ ದಿನಪತ್ರಿಕೆ
ತಿಕೋಟಾ: ತಾಲೂಕು ಪಂಚಾಯತ ಸಬಾಭವನದಲ್ಲಿ ಗ್ರಾಮ ಸ್ವರಾಜ್ ಅಭಿಯಾನ ಹಾಗೂ ತಾಲೂಕು ಪಂಚಾಯತಿ ತಿಕೋಟಾ ಅವರ ವತಿಯಿಂದ ಹಮ್ಮಿಕೊಂಡ ತಾಲೂಕು ಮಟ್ಟದ ಕಾಯಕ ಬಂಧುಗಳ ತರಬೇತಿಯ ಸಮಾರೋಪ ಸಮಾರಂಭದ ಅಧ್ಯಕ್ಷತೆ ವಹಿಸಿ ತಾಲೂಕು ಪಂಚಾಯತಿಯ ಮನರೇಗಾ ಸಹಾಯಕ ನಿರ್ದೇಶಕ ಬಸವರಾಜ ಸಂಕಗೊಂಡ ಅವರು ಮಾತನಾಡಿದರು.
ನರೇಗಾ ಯೋಜನೆಯ ಅನುಷ್ಠಾನದಲ್ಲಿ ಕಾಯಕ ಬಂದುಗಳ ಪಾತ್ರ ಅತೀ ಮಹತ್ವದ್ದಾಗಿದೆ ಹಾಗೂ ಪ್ರಾಥಮಿಕ ಅವಶ್ಯಕತೆಯಾಗಿದೆ. ಹೀಗಾಗಿ ತಾಲೂಕು ಪಂಚಾಯತಿ ಹಾಗೂ ಗ್ರಾಮ ಸ್ವರಾಜ್ ಅಭಿಯಾನದ ಸಹಯೋಗದಲ್ಲಿ ಈ ತರಬೇತಿಯನ್ನು ನೀಡಲಾಗಿದೆ. ಈಗಾಗಲೇ ಎಲ್ಲಾ ೦೭ ಬ್ಯಾಚ್ಗಳಲ್ಲಿ ಪೂರ್ಣಗೊಳ್ಳುವುದರ ಜೊತೆಗೆ ತರಬೇತಿ ಯಶಸ್ವಿಯಾಗಿದೆ ಎಂದರು.
ಎಲ್ಲಾ ಕಾಯಕಬಂಧುಗಳು ಈ ತರಬೇತಿಯನ್ನು ಅತ್ಯಂತ ಜಾಗೃಕತೆಯಿಂದ ತರಗತಿಗಳನ್ನು ಆಲಿಸಿದ್ದಾರೆ, ಸಂಪನ್ಮೂಲ ವ್ಯಕ್ತಿಗಳು ಸಹ ಅತ್ಯಂತ ಕ್ರೀಯಾಶೀಲರಾಗಿ ತರಹತಿಗಳನ್ನು ನಡೆಸಿಕೊಟ್ಟಿದ್ದಾರೆ ಎಂದರು. ಈ ತರಬೇತಿಯು ಸರಕಾರ ಮತ್ತು ಸ್ವಯಂ ಸೇವಾ ಸಂಸ್ಥೆಗಳ ನಡುವೆ ನಡೆದ ಪ್ರಥಮ ತರಬೇತಿಯಾಗಿದೆ. ಈ ತರಬೇತಿಯಲ್ಲಿ ನೀವು ಪಡೆದುಕೊಂಡ ಮಾಹಿತಿಯನ್ನು ಮುಂದಿನ ದಿನಮಾನದಲ್ಲಿ ನಿಮ್ಮ ಗ್ರಾಮ ಪಂಚಾಯತಿಯ ಇತರೆ ಕಾಯಕ ಬಂದುಗಳಿಗೆ ಹಾಗೂ ಮನರೇಗಾ ಕೂಲಿಕಾರರಿಗೆ ತಿಳಿಸಿ ಹೇಳಬೇಕು ಎಂದರು.
ನಂತರ ಮಾತನಾಡಿದ ಸರೋಜಾ ಕೌಲಾಪುರ, ಗ್ರಾಮ ಸ್ವರಾಜ್ ಅಭಿಯಾನ ರಾಜ್ಯ ಸಮಿತಿ ಸದಸ್ಯರು ಮಾತನಾಡಿ, ನರೇಗಾ ಯೋಜನೆಯ ಬಗ್ಗೆ ಸಂಕ್ಷಿಪ್ತ ವಿವರವನ್ನು ಕಾರ್ಯಕ್ರಮದಲ್ಲಿ ತಿಳಿಸಿದರು.
ತಾಲೂಕು ಮಾಹಿತಿ ಶಿಕ್ಷಣ ಮತ್ತು ಸಂವಹನ ಸಂಯೋಜಕ ಕಲ್ಲಪ್ಪ ನಂದರಗಿ ಮಾತನಾಡಿ, ಬರುವ ಆರ್ಥಿಕ ವರ್ಷದಲ್ಲಿ ಈ ತರಬೇತಿಯು ಮನರೇಗಾ ಯೋಜನೆಯ ಅನುಷ್ಠಾನದಲ್ಲಿ ಅತ್ಯಂತ ಮಹತ್ವದ ಪಾತ್ರ ವಹಿಸಲಿದೆ. ಮುಂದಿನ ದಿನಮಾನದಲ್ಲಿ ಈ ತರಬೇತಿಯ ಪ್ರತಿಫಲ ಎಲ್ಲ ಗ್ರಾಮಗಳಿಗೂ ವ್ಯಾಪಿಸಲಿದೆ. ಈ ಯೋಜನೆಯಡಿ ಕೆಲಸ ನಿರ್ವಹಿಸುವ ಕಾಯಕ ಬಂಧುಗಳು ಕೇವಲ ತಮ್ಮ ಅಭಿವೃದ್ಧಿಗಾಗಿ ಕೆಲಸ ನಿರ್ವಹಿಸದೇ ಗ್ರಾಮದ ಸರ್ವಾಂಗೀಣ ಅಭಿವೃದ್ಧಿಗಾಗಿ ಕೆಲಸ ಮಾಡುತ್ತಾರೆ ಎಂಬ ವಿಷಯವನ್ನು ಅವರಿಗೆ ಮನವರಿಕೆ ಮಾಡಲಾಗಿದೆ ಎಂದರು.
ಕಾರ್ಯಕ್ರಮದಲ್ಲಿ ಗ್ರಾಮ ಸ್ವರಾಜ್ ಅಭಿಯಾನದ ರಾಜ್ಯ ಮಟ್ಟದ ತರಬೇತಿದಾರ ರಮೇಶ ಭಜಂತ್ರಿ, ತಾಲೂಕು ಐಇಸಿ ಸಂಯೋಜಕ ಹಾಗೂ ಗ್ರಾಮ ಸ್ವರಾಜ್ ಅಭಿಯಾನದ ಜಿಲ್ಲಾ ಮಟ್ಟದ ತರಬೇತಿದಾರರಾದ ಕಲ್ಲಪ್ಪ ನಂದರಗಿ, ಗ್ರಾಮ ಸ್ವರಾಜ್ ಅಭಿಯಾನದ ಜಿಲ್ಲಾ ಮಟ್ಟದ ತರಬೇತಿದಾರರಾದ ಸರೋಜಾ ರಾಠೋಡ, ದಯಗೊಂಡ ಬೆಳ್ಳನ್ನವರ, ಬಿ.ಎಫ್.ಟಿ ಸಿದ್ರಾಯ ದಾಶ್ಯಾಳ, ತಾಲೂಕು ಪಂಚಾಯತಿಯ ಇಮ್ತಿಯಾಜ ಜಮಾದಾರ ಸೇರಿದಂತೆ ವಿವಿಧ ಗ್ರಾಮ ಪಂಚಾಯತಿಯ ಕಾಯಕ ಬಂಧುಗಳು ಹಾಜರಿದ್ದರು.
೩೦೦ ಜನರಿಗೆ ತರಬೇತಿ ನೀಡುವ ಗುರಿ
ದಿನಾಂಕ: ೨೭.೦೧.೨೦೨೫ ರಿಂದ ಆರಂಭವಾದ ಈ ತರಬೇತಿಯು ೦೭ ತಂಡಗಳಲ್ಲಿ ಪ್ರತಿ ತಂಡಕ್ಕೆ ೦೩ ದಿನಗಳಂತೆ ತರಬೇತಿ ನೀಡಲಾಗಿದೆ. ಎರಡು ದಿನ ತರಗತಿಯಲ್ಲಿ ತರಬೇತಿ ನೀಡಿದ್ದರೆ ಒಂದು ದಿನ ಕ್ಷೇತ್ರ ಭೇಟಿ ಅಧ್ಯಯನ ಕೈಗೊಳ್ಳುವ ಮೂಲಕ ಕಾಯಕ ಬಂಧುಗಳಿಗೆ ಪ್ರಾಯೋಗಿಕ ಅಧ್ಯಯನ ಕೈಗೊಂಡು ಅವರಿಗೆ ಯೋಜನೆಯ ಕುರಿತು ಪ್ರಾಯೋಗಿಕ ಜ್ಞಾನವನ್ನು ನೀಡಲಾಗಿದೆ ಎಂದರು. ಸರ್ಕಾರದ ಆದೇಶದಂತೆ ಒಟ್ಟು ೩೦೦ ಜನರಿಗೆ ತರಬೇತಿ ನೀಡಲು ಗುರಿ ನೀಡಲಾಗಿದ್ದು, ಅದರಂತೆ ಗುರಿಗನುಸಾರ ಕಾಯಕ ಬಂದುಗಳಿಗೆ ತರಬೇತಿಯನ್ನು ನೀಡಲಾಗಿದೆ.

