ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ತಾಲೂಕಿನ ಕತಕನಹಳ್ಳಿ ಗ್ರಾಮದ ಮಾತೋಶ್ರೀ ಶಂಕ್ರೆಮ್ಮಾ ತಾಯಿ ಪ್ರಾಥಮಿಕ ಶಾಲೆಯಲ್ಲಿ ೭ ನೇ ವರ್ಗದ ವಿದ್ಯಾರ್ಥಿಗಳ ಬೀಳ್ಕೊಡುವ ಸಮಾರಂಭ ಇತ್ತೀಚೆಗೆ ಜರುಗಿತು.
ಕಾರ್ಯಕ್ರಮದ ಅದ್ಯಕ್ಷ ಸ್ಥಾನ ಸಂಸ್ಥೆಯ ನಿರ್ದೇಶಕ ಬಸವರಾಜ ಅರಕೇರಿ ವಹಿಸಿದ್ದರು.
ಮುಖ್ಯ ಅತಿಥಿ ಎಕ್ಸಲಂಟ್ ಪಿ ಯು ಕಾಲೇಜಿನ ಉಪಪ್ರಾಚಾರ್ಯ ಮಂಜುನಾಥ ಜುನಗೊಂಡ ಮಾತನಾಡಿ, ಇಂದಿನ ಸ್ಪರ್ದಾಜಗತ್ತಿನಲ್ಲಿ ವಿದ್ಯಾರ್ಥಿಗಳು ಉತ್ತಮವಾಗಿ ಓದಿ ಸರಕಾರಿ ಹುದ್ದೆಯಲ್ಲಿ ನೇಮಕಾತಿ ಆಗಬೇಕು ಗ್ರಾಮೀಣ ವಿದ್ಯಾರ್ಥಿಗಳ ಸಾಧನೆ ಅದ್ಬುತವಾಗಿರಬೇಕು ಈ ಸ್ಪರ್ದಾಜಗತ್ತಿನ ಸ್ಪರ್ದಾ ಪರೀಕ್ಷೆಗಳಲ್ಲಿ ಎಲ್ಲ ವಿದ್ಯಾರ್ಥಿಗಳು ಭಾಗವಹಿಸಿ ಜೀವನದಲ್ಲಿ ಏನಾದರು ಒಳ್ಳೆಯ ಸಾಧನೆ ಮಾಡಲು ಈ ಚಿಕ್ಕ ವಯಸ್ಸಿನಿಂದಲೆ ಗುರಿಯನ್ನು ಇಟ್ಟುಕೊಳ್ಳಬೇಕು. ನಿಮ್ಮ ಬಗ್ಗೆ ತಂದೆ ತಾಯಿ ಕಾಣುವ ಒಳ್ಳೆಯ ಆಸೆ ಆಕಾಂಕ್ಷೆಗಳನ್ನು ಈಡೇರಿಸಬೇಕು. ತಾಯಿ ಯಾವಾಗಲು ತಮ್ಮ ಬಗ್ಗೆ ಒಳ್ಳೆಯ ಕನಸು ಕಾಣುತ್ತಿರುತ್ತಾಳೆ. ಆ ಕನಸು ತಾವು ಈಡೇರಿಸಲು ಪ್ರಯತ್ನಿಸಬೇಕು ಎಂದು ಹೇಳಿದರು.
ಶಾಲೆಯ ಮುಖ್ಯಗುರು ಅರವಿಂದ ಪವಾರ ಪ್ರಾಸ್ತಾವಿಕ ನುಡಿಗಳನ್ನಾಡಿದರು.
ವೇದಿಕೆಯಲ್ಲಿ ಪ್ರಮುಖರಾದ ಅಪ್ಪಾಸಾಹೇಬ ಕೊಟ್ಯಾಳ, ಶರಣಪ್ಪ ಬಬಲೇಶ್ವರ, ಸಾಹೇಬಗೌಡ ಬಿರಾದಾರ, ಗುರುಪಾದ ಶಿರಮಗೊಂಡ, ಸಂಸ್ಥೆಯ ಕಾರ್ಯದರ್ಶಿ ಬಸವರಾಜ ಬಿರಾದಾರ ಭಾಗವಹಿಸಿದರು.
ಶಿಕ್ಷಕರಾದ ಶ್ರೀ ಹೇಮಂತ ನಾಯಕ, ಮತ್ತು ಶಾಲೆಯ ಎಲ್ಲ ಶಿಕ್ಷಕರು ಭಾಗವಹಿಸುವುದರೊಂದಿಗೆ ಕಾರ್ಯಕ್ರಮದ ನಿರೂಪಣೆ ಶ್ರೀ ಸಾಯಬಣ್ಣ ಬಮನಳ್ಳಿ ಮಾಡಿ ಕೊನೆಗೆ ಸಚೀನ ಯಳಮೇಲಿ ಶಿಕ್ಷಕರು ಎಲ್ಲರನ್ನು ವಂದಿಸಿದರು.

