Close Menu
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ

Subscribe to Updates

Get the latest creative news from FooBar about art, design and business.

What's Hot

ಅಧ್ಯಕ್ಷರಾಗಿ ಎನ್.ಬಿ.ಪಿಂಜಾರ ಆಯ್ಕೆ

ಅಸಭ್ಯ ವರ್ತನೆ ತೋರಿ ಹಬ್ಬಗಳನ್ನು ಅಗೌರವಿಸದಿರಿ :ಸುಂಬಡ

ಕಾಂಗ್ರೆಸ್ ಕಾರ್ಯಕರ್ತರಿಂದ ಬಿಜೆಪಿ ಕಚೇರಿಗೆ ಮುತ್ತಿಗೆ!

Facebook X (Twitter) Instagram
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ
Facebook X (Twitter) Instagram YouTube WhatsApp
udayarashminews.comudayarashminews.com
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ
udayarashminews.comudayarashminews.com
Home»ಆರೋಗ್ಯ»ವಯಸ್ಸಾಯಿತೇ? ಈ ಹವ್ಯಾಸಗಳಿರಲಿ
ಆರೋಗ್ಯ

ವಯಸ್ಸಾಯಿತೇ? ಈ ಹವ್ಯಾಸಗಳಿರಲಿ

By Updated:No Comments4 Mins Read
Facebook Twitter Pinterest LinkedIn Telegram WhatsApp
Share
Facebook Twitter LinkedIn Email Telegram WhatsApp

ಲೇಖನ:
– ಸಂತೋಷ್ ರಾವ್ ಪೆರ್ಮುಡ
ಪೆರ್ಮುಡ ಮನೆ, ಪಟ್ರಮೆ ಗ್ರಾಮ ಮತ್ತು ಅಂಚೆ
ಬೆಳ್ತಂಗಡಿ ತಾಲೂಕು
ದ.ಕ ಜಿಲ್ಲೆ-೫೭೪೧೯೮
ದೂ: ೯೭೪೨೮೮೪೧೬೦

ಉದಯರಶ್ಮಿ ದಿನಪತ್ರಿಕೆ

ಮನುಷ್ಯನಿಗೆ ೩೦ ವರ್ಷ ವಯಸ್ಸಿನ ನಂತರ ವೃದ್ಧಾಪ್ಯ ಆರಂಭ ಆಗುತ್ತದೆ. ಆತನ ಕಾರ್ಯಕ್ಷಮತೆಯ ಉತ್ತುಂಗದ ಹಂತಕ್ಕೇರಿ ಅಲ್ಲಿಂದ ಆತನ ದೇಹದ ಜೀವಕೋಶಗಳು ನಿಧಾನವಾಗಿ ಕುಂದಲು ಪ್ರಾರಂಭವಾಗುತ್ತದೆ. ನಂತರ ಸ್ನಾಯುಗಳ ಶಕ್ತಿ ಕುಂಠಿತ ಆಗುವುದು, ಉಸಿರಾಟ ನಿಧಾನವಾಗುವುದು, ರಕ್ತಪರಿಚಲನೆಯ ದಕ್ಷತೆ ಕಡಿಮೆ ಆಗುವುದು, ದೇಹದ ರೋಗನಿರೋಧಕ ಶಕ್ತಿಯೂ ಕಡಿಮೆ ಆಗುತ್ತಾ ಹೋಗುತ್ತದೆ. ಅಷ್ಟೇ ಅಲ್ಲ ಆತನ ಚರ್ಮದ ಸ್ಥಿತಿಸ್ಥಾಪಕತೆ ಕಡಿಮೆಯಾಗಿ ಸುಕ್ಕುಗಟ್ಟಲು ಆರಂಭಿಸುತ್ತದೆ. ಮುಪ್ಪಿಗೆ ಕಾರಣಗಳೇನು ಎಂದು ವಿಶ್ಲೇಷಿಸಿದರೆ ವಿಜ್ಞಾನಿಗಳ ಪ್ರಕಾರ ಮುಪ್ಪು ಮತ್ತು ಮರಣಕ್ಕೆ ಸಂಬಂಧಿಸಿದ ಕೋಶಗಳ ಜೀನ್‌ಗಳಲ್ಲೇ ಒಂದು ವೇಳಾಪಟ್ಟಿಯಿದ್ದು, ಇದು ಪೂರ್ವನಿರ್ಧರಿತ. ಅಂಗಗಳ ಅಭಿವರ್ಧನೆಯನ್ನು ಕೆಲವು ಜೀನ್‌ಗಳು ನಿಯಂತ್ರಿಸುವಂತೆ, ಕೆಲವು ಜೀನ್‌ಗಳು ಮುಪ್ಪು ಮತ್ತು ಮರಣವನ್ನು ನಿಯಂತ್ರಿಸುತ್ತವೆ.
ಮನುಷ್ಯನಲ್ಲಿ ಮಗುವಿನ ಚರ್ಮದ ಜೀವಕೋಶಗಳು ಸುಮಾರು ೫೦ ಬಾರಿ ವಿಭಜಿಸಿ ತಮ್ಮ ವಿಭಜನೆಯ ಕೆಲಸವನ್ನು ನಿಲ್ಲಿಸಿಬಿಡುತ್ತವೆ. ಅದೇ ೯೦ ವರ್ಷ ವಯಸ್ಸಿನ ಮನುಷ್ಯನಲ್ಲಿ ಇದೇ ರೀತಿಯ ಜೀವಕೋಶಗಳು ಐದು ಐದು ಬಾರಿಯಷ್ಟೇ ವಿಭಜಿಸಬಲ್ಲವು. ಇದು ಬಹುತೇಕ ‘ಮುಪ್ಪಿನ ಜೀನ್’ಗಳ ಕಾರಣದಿಂದ ಆಗಿರುತ್ತದೆ. ೩೦ ವರ್ಷದ ಅನಂತರ ಪ್ರತಿವರ್ಷವೂ ವ್ಯಕ್ತಿಯೊಬ್ಬನ ವಿವಿಧ ಅಂಗಗಳ ಕಾರ್ಯಕ್ಷಮತೆಯ ಗರಿಷ್ಠ ಕ್ಷಮತೆಯ ೧% ಕಡಿಮೆ ಆಗುತ್ತಾ ಹೋಗುತ್ತದೆ. ಶ್ವಾಸಕೋಶದ ಸಾಮರ್ಥ್ಯ, ಹೃದಯದಿಂದ ರಕ್ತವನ್ನು ಪೂರೈಕೆ ಮಾಡುವ ಪ್ರಮಾಣ, ಸ್ನಾಯುಗಳ ಶಕ್ತಿ ಹಾಗೂ ಪರಸ್ಪರ ಹೊಂದಾಣಿಕೆ, ಮೂತ್ರಪಿಂಡಗಳ ಶುದ್ಧೀಕರಣ ಪ್ರಕ್ರಿಯೆ, ಕಿವಿಗಳ ಗ್ರಹಣ ಶಕ್ತಿ ಇವೆಲ್ಲವೂ ಕುಂಠಿತವಾಗುತ್ತವೆ. ‘ಪ್ರೋಜೀರಿಯ’ ಎನ್ನುವುದು ಸಣ್ಣ ಮಕ್ಕಳಲ್ಲಿ ಕಂಡುಬರುವ ಒಂದು ವಿಧದ ಕಾಯಿಲೆ. ಇದರಲ್ಲಿ ಐದಾರು ವರ್ಷದ ಮಗುವಿನಲ್ಲಿ ಮುಪ್ಪಿನ ಕೆಲವು ಲಕ್ಷಣಗಳಾದ ಕೂದಲು ಉದುರುವುದು, ಚರ್ಮ ಸುಕ್ಕುಗಟ್ಟುವುದು, ಹೃದಯಾಘಾತ, ಸಂಧಿನೋವು ಮುಂತಾದ ಸಮಸ್ಯೆಗಳು ಕಾಣಿಸುತ್ತದೆ. ಆದರೆ ಇದು ವೃದ್ಧಾಪ್ಯದ ಪ್ರಮುಖ ಲಕ್ಷಣಗಳಲ್ಲ. ಇದು ಜೀನ್ ನಿಯಂತ್ರಿತ ವೇಳಾಪಟ್ಟಿಯ ಪರಿಣಾಮ ಆಗಿರುತ್ತದೆ. ಆದ್ದರಿಂದ ವ್ಯಕ್ತಿಯೊಬ್ಬನ ಉತ್ತಮ ಹವ್ಯಾಸಗಳು ಆತನಿಗೆ ದೀರ್ಘಾಯಸ್ಸನ್ನು ಕೊಡಬಲ್ಲವು ಎಂದು ಅಧ್ಯಯನಗಳು ಹೇಳಿವೆ. ಸರಿಯಾದ ಆಹಾರ ಕ್ರಮಗಳು, ನಿಯಮಿತ ವ್ಯಾಯಾಮ, ಹೇರಳ ನಿದ್ರೆ, ಸರಿಯಾದ ದೇಹ ತೂಕ ಕಾಯ್ದುಕೊಳ್ಳುವಿಕೆ, ಧೂಮಪಾನ ಹಾಗೂ ಮದ್ಯಪಾನ ವ್ಯರ್ಜನ ಇವೆಲ್ಲವೂ ಮನುಷ್ಯನ ಆಯುಸ್ಸನ್ನು ಹೆಚ್ಚಿಸಬಲ್ಲುದು.


ಸಮಯವು ಯಾರಿಗೂ, ಎಂದಿಗೂ ಕಾಯುತ್ತಾ ಇರುವುದಿಲ್ಲ, ಅದರಷ್ಟಕ್ಕೇ ಅದು ಚಲಿಸುತ್ತಿರುತ್ತದೆ. ಹಾಗೆಯೇ ಕಳೆದು ಹೋದ ಸಮಯವು ಮತ್ತೆ ಎಂದೂ ಮರಳಿ ಬರದು. ಅಂತೆಯೇ ಕಳೆದು ಹೋದ ನಮ್ಮ ವಯಸ್ಸೂ ಮರಳಿ ಬರುವುದಿಲ್ಲ. ಅಂತೆಯೇ ಕಳೆದು ಹೋದ ನಮ್ಮ ಯೌವ್ವನವೂ ಮತ್ತೆ ಮರಳಿ ದೊರೆಯದು. ಎಷ್ಟೋ ಸಲ ನಮಗೆ ನಮ್ಮ ಯೌವ್ವನ ಮತ್ತೆ ಬರಬೇಕು, ನಮ್ಮ ಬಾಲ್ಯವೂ ದೊರೆತರೆ ಎಷ್ಟು ಅಂದ ಎಂದೂ ಅನಿಸುತ್ತದೆ. ಆದ್ದರಿಂದ ಯೌವ್ವನ ಆಗಲೀ ಮುಪ್ಪಾಗಲೀ ಅದನ್ನು ದೃಢ ಮನಸ್ಸಿನಿಂದ ಒಪ್ಪಿಕೊಳ್ಳಬೇಕು, ಇದಕ್ಕಾಗಿ ಉತ್ತಮ ಹವ್ಯಾಸಗಳನ್ನು ಅಳವಡಿಸಿಕೊಳ್ಳಬೇಕು.
ಸಾವಯವ ಕೈತೋಟ-ತೋಟಗಾರಿಕೆ
ನಮ್ಮೆಲ್ಲರ ಒಳಗೂ ಒಬ್ಬ ಅಜ್ಞಾತ ರೈತನಿದ್ದಾನೆ. ಸಾವಿರಾರು ವರ್ಷಗಳ ಹಿಂದೆ ಸಮಾಜವಾಗಿ ನಮ್ಮೆಲ್ಲರನ್ನೂ ಒಂದುಗೂಡಿಸಿದ್ದೇ ಈ ತೋಟಗಾರಿಕೆಯೇ. ಉತ್ತಮ ಜೀವನಶೈಲಿಗಾಗಿ, ರೋಗಮುಕ್ತ ಜೀವನಕ್ಕಾಗಿ ಮತ್ತು ಸಸ್ಯಾಹಾರಿ ಜೀವನಕ್ಕಾಗಿ ಮುಪ್ಪಾಗುತ್ತಿದ್ದಂತೆ ಸಾವಯವ ತೋಟಗಾರಿಕೆ ಕಾರ್ಯವನ್ನು ಮಾಡಬಹುದು. ತಮಗಿಷ್ಟವಾದ ಆರೋಗ್ಯಕರ ತರಕಾರಿಗಳನ್ನು ಬೆಳೆಯುವುದರಿಂದ ಅವರಿಗೆ ಸಂತಸ ಅಲ್ಲದೇ ಕುಟುಂಬದ ಸದಸ್ಯರಿಗೆ ಸಾವಯವ ತರಕಾರಿಗಳು ಲಭ್ಯವಾಗಿ ಆರೋಗ್ಯಯುತ ಜೀವನ ನಡೆಸಬಹುದಲ್ಲದೇ ಇದರಿಂದ ಗೆಲುವಿನ ಭಾವನೆ ಮೂಡುತ್ತದೆ.
ಡಿಜಿಟಲ್ ಕಲಿಕೆ
ಡಿಜಿಟಲ್ ಕಲಿಕೆ ಅಥವಾ ಇ-ಕಲಿಕೆಯು ವೃದ್ಧಾಪ್ಯದಲ್ಲೂ ಹೊಸ ಹೊಸ ಕಲಿಕೆಗಳನ್ನು ಮನೆಯಲ್ಲೇ ಕುಳಿತು ಮೊಬೈಲ್, ಲ್ಯಾಪ್’ಟಾಪ್ ಮತ್ತು ಟ್ಯಾಬ್ಲೆಟ್’ಗಳ ಮೂಲಕ ಸಾಧ್ಯವಾಗಿಸಿದೆ. ಇದರಿಂದ ವಯಸ್ಕರನ್ನು ಕಲಿಕೆಯ ಆಕಾಶದೆತ್ತರಕ್ಕೆ ಕರೆದೊಯ್ಯುವಂತೆ ಆಗುವುದರಿಂದ ಕುಟುಂಬದ ಹಿರಿಯರು ಈ ಹವ್ಯಾಸವನ್ನು ಅಳವಡಿಸಿಕೊಂಡಾಗ ಆಗಸದೆತ್ತರಕ್ಕೆ ಹಾರಲು ಹೊಸ ರೆಕ್ಕೆ ಕಟ್ಟಿಕೊಂಡ ಅನುಭವ ಪಡೆಯುತ್ತಾರೆ. ಇದು ಒತ್ತಡ ನಿವಾರಿಸಲು ಮತ್ತು ಹೊಸತನ್ನು ಕಲಿಯಲು ಅತ್ಯುತ್ತಮ ಮಾರ್ಗವಾಗಿದೆ.
ಫುಡ್ ಬ್ಲಾಗರ್
ಕೇವಲ ಲಕ್ಷಕ್ಕೆ ಒಬ್ಬರಷ್ಟೇ ಬ್ಲಾಗರ್‌ಗಳು ಆಗಬೇಕೆಂದೇನೂ ಇಲ್ಲ. ಎಲ್ಲರೂ ಆಸಕ್ತಿ ಒಂದಿದ್ದರೆ ವಿವಿಧ ರೀತಿಯ ಬ್ಲಾಗರ್‌ಗಳು ಆಗಬಹುದು. ಹಿರಿಯರಲ್ಲಿ ಹಲವಾರು ಸಾಂಪ್ರದಾಯಿಕ ಮತ್ತು ತಲೆಮಾರುಗಳಿಂದ ಅನುಸರಿಸಿಕೊಂಡು ಬಂದಿರುವ ಹಲವು ರಹಸ್ಯ ಪಾಕವಿಧಾನಗಳನ್ನು ಸಾಮಾಜಿಕ ಮಾಧ್ಯಮಗಳ ಮೂಲಕ ಕೇಳಲು ಅವರು ಅಡಿಗೆ ತಯಾರಿಸುವುದನ್ನು ನೋಡಲು ಬಹಳ ಮಂದಿ ಬಯಸುತ್ತಾರೆ. ಆ ನಿಟ್ಟಿನಲ್ಲಿ ವಯಸ್ಸಾದವರೂ ಒಂದು ಕೈ ಪ್ರಯತ್ನಿಸಬಹುದು.


ಓದುವ ಕ್ಲಬ್‌ಗಳು
ನಮ್ಮ ಬದುಕಿನ ಭೂತಕಾಲದಲ್ಲಿ ಸಮಯದ ಕೊರತೆಯ ಕಾರಣದಿಂದ ಬದ್ಧತೆಯಿಂದ ಓದಲು ಆಗದೇ ಇದ್ದುದರಿಂದ ಇಂದು ಪಶ್ಚಾತ್ತಾಪ ಪಡುವಂತಾಗಿದೆ. ಬಿಲ್ ಗೇಟ್ಸ್ ಜೆಫ್ ಬೆಜೋಸ್ ಮತ್ತು ಎಲಾನ್ ಮಸ್ಕ್ ಮುಂತಾದ ವಿಶ್ವದ ಅತ್ಯಂತ ಶ್ರೀಮಂತ ವ್ಯಕ್ತಿಗಳು ಓದಿನ ಮಹತ್ವದ ಕುರಿತು ನಿರಂತರವಾಗಿ ಹೇಳುತ್ತಿರುತ್ತಾರೆ. ಆದ್ದರಿಂದ ಕಲಿಕೆಗೆ ವಯಸ್ಸು ಎಂದಿಗೂ ಅಡ್ಡಿ ಆಗಲಾರದಾದ್ದರಿಂದ ಗ್ರಂಥಾಲಯಗಳಲ್ಲಿ ಹಿರಿಯರು ತಮ್ಮ ಹೆಸರನ್ನು ನೋಂದಾಯಿಸಿ ಓದುಗರ ಕ್ಲಬ್‌ನ ಸದಸ್ಯರಾಗಿ ಇಷ್ಟವಾದ ಲೇಖಕರ ಪುಸ್ತಕಗಳನ್ನು ಓದಬಹುದು. ಮತ್ತು ಹಿರಿಯರಿಗೆ ಕಳೆದು ಹೋದ ತಮ್ಮ ಅಮೂಲ್ಯವಾದ ಸಮಯವನ್ನು ಸರಿಪಡಿಸಿಕೊಳ್ಳಲು ಉತ್ತಮ ಮಾರ್ಗವಾಗಿದೆ.
ಕರಕುಶಲ ತರಗತಿಗಳು
ವಿವಿಧ ರೀತಿಯ ಬಣ್ಣಗಳು ಧನಾತ್ಮಕ ಶಕ್ತಿಯನ್ನು ಹೊಂದಿದ್ದು, ಅಂತಹ ಬಣ್ಣಗಳಿಂದ ವಿವಿಧ ರೀತಿಯ ಕಲೆ ಮಾಡಿದರೆ ಈ ಶಕ್ತಿಯು ಮತ್ತಷ್ಟು ಹೆಚ್ಚಾಗುತ್ತದೆ. ಹಿರಿಯರು ತಮ್ಮದೇ ವಿಭಿನ್ನ ಕಲ್ಪನೆಯ ಕಲೆ ಮತ್ತು ಕರಕುಶಲ ವಸ್ತುಗಳನ್ನು ರಚಿಸುವುದರಿಂದ ಅದು ಅವರಿಗೆ ಹೆಚ್ಚು ಆತ್ಮಸ್ಥೈರ್ಯವನ್ನು ತುಂಬುವ ಚಿಕಿತ್ಸೆಯೇ ಆಗಿರುತ್ತದೆ. ಇದು ಮುಂದಿನ ದಿನಗಳಲ್ಲಿ ಅತ್ಯುತ್ತಮವಾದ ಸಮಯವನ್ನು ಕಳೆಯಲು ಒಂದು ಮಾರ್ಗವಾಗುತ್ತದೆ.
ಸಕ್ರಿಯ ಕಲಿಕೆ ಅಥವಾ ಬೋಧನೆ
ಮನೆಯಲ್ಲಿರುವ ಹಿರಿಯರ ಆಸಕ್ತಿಯ ವಿಚಾರ ಮತ್ತು ಅಭಿರುಚಿಗಳನ್ನು ತಿಳಿದು ಅವುಗಳನ್ನು ಪಟ್ಟಿ ಮಾಡಿಕೊಂಡು ಅಂತಹ ಕೌಶಲಗಳ ಕುರಿತ ಕಲಿಕಾ ತರಗತಿಗೆ ಅವರನ್ನು ನೋಂದಾಯಿಸಿ ಅವರನ್ನು ಹೆಚ್ಚು ಕೌಶಲವಂತರನ್ನಾಗಿ ಮಾಡಬೇಕು. ಅದೇ ರೀತಿ ಹಿರಿಯರು ಯಾವುದಾದರೂ ಒಂದು ವಿಷಯದಲ್ಲಿ ಹೆಚ್ಚು ಕೌಶಲವನ್ನು ಹೊಂದಿದ್ದರೆ ಅವರನ್ನು ಆ ವಿಚಾರದ ಸಂಪನ್ಮೂಲ ವ್ಯಕ್ತಿಯನ್ನಾಗಿ ಮಾಡಿ ಅವರಿಗೆ ಪ್ರಶಿಕ್ಷಣಾರ್ಥಿಗಳನ್ನು ಒದಗಿಸಿಕೊಟ್ಟು, ಅವರ ಜ್ಞಾನ ಮತ್ತು ಕೌಶಲವನ್ನು ಇತರರಿಗೂ ಹಂಚುವಂತೆ ಮಾಡಬೇಕು.
ಶೇರು ವ್ಯವಹಾರಗಳಲ್ಲಿ ತೊಡಗಿಸಿಕೊಳ್ಳುವಿಕೆ
ಇದು ಇಂದು ಹೆಚ್ಚು ಅವಕಾಶ ಮತ್ತು ಹೆಚ್ಚು ಲಾಭದಾಯಕ ಆಗಿದೆ. ಹಿರಿಯರು ಹಣದ ವ್ಯವಹಾರದ ಬಗ್ಗೆ ಹೆಚ್ಚು ವಿವೇಚನೆಯನ್ನು ಮತ್ತು ಅನುಭವವನ್ನು ಹೊಂದಿರುತ್ತಾರೆ. ಜಜೀವನದಲ್ಲಿ ಸಮಸ್ಯೆಯನ್ನು ಎದುರಿಸುವ ಧೈರ್ಯ ಹೊಂದಿರುವವರಿಗೆ ಮತ್ತು ಹಿನ್ನಡೆ ಆದರೂ ಅದಕ್ಕೆ ಧೈರ್ಯಗೆಡದವರಿಗೆ ಶೇರು ವ್ಯವಹಾರದಲ್ಲಿ ತೊಡಗಿಸಿಕೊಳ್ಳುವಿಕೆ ಎಲ್ಲಕ್ಕಿಂತ ಹೆಚ್ಚು ಲಾಭದಾಯಕ ಪಿಂಚಣಿ ಯೋಜನೆಯ ಆಲೋಚನೆ ಆಗಬಹುದು.
ಆನ್‌ಲೈನ್ ಗೇಮಿಂಗ್ ವಯಸ್ಸಾದ ನಂತರ ಬದುಕಿನಲ್ಲಿ ಹೆಚ್ಚು ಲವಲವಿಕೆ ಮತ್ತು ಸಂತಸದಿಂದ ಇರಲು ಇಚ್ಚಿಸುವುದರಿಂದ ಹಿರಿಯರು ಆನ್‌ಲೈನ್ ಗೇಮ್‌ಗಳನ್ನು ಚಟುವಟಿಕೆಯಿಂದ ಆಡಲು ಬಯಸುತ್ತಾರೆ. ಅವರಿಗೆ ವಯಸ್ಸಾಗಿದೆ ಎಂದ ಮಾತ್ರಕ್ಕೆ ಅವರು ಆಟವಾಡಬಾರದು ಮತ್ತು ಹಲವರ ವಿರುದ್ಧ ಗೆಲ್ಲಬಾರದು ಎಂದೇನಿಲ್ಲ. ಅವರಿಗೆ ಒಂದು ಅವಕಾಶ ಮತ್ತು ಅವರಿಗಿಷ್ಟವಾದ ಆಟ ನೀಡಿ, ಅವರು ಶೀಘ್ರದಲ್ಲೇ ಅದರಲ್ಲಿ ನಿಪುಣರಾಗುತ್ತಾರೆ ಮತ್ತು ಹೆಚ್ಚು ಉತ್ಸಾಹದಿಂದ ಇರುತ್ತಾರೆ.
ಸಾಕುಪ್ರಾಣಿಗಳನ್ನು ಸಾಕುವುದು
ಮೊಮ್ಮಕ್ಕಳು ಮತ್ತು ಹಿರಿಯರಿಗೆ ಅತ್ಯಂತ ಹೆಚ್ಚು ಪ್ರಿಯವಾದ ಮತ್ತು ಹೆಚ್ಚು ಸಂತಸ ನೀಡುವ ಮತ್ತೊಂದು ವಿಚಾರವೆಂದರೆ ಸಾಕುಪ್ರಾಣಿಗಳನ್ನು ಸಾಕುವುದು ಮತ್ತು ಅವುಗಳೊಂದಿಗೆ ಸಮಯವನ್ನು ಕಳೆಯುವುದು. ಅವರಿಗೆ ಸಾಕುಪ್ರಾಣಿಗಳ ಜೊತೆಗೆ ಆಟವಾಡುವುದು ಮತ್ತು ಅವುಗಳನ್ನು ಮುದ್ದಾಡವುದು ಬಹಳ ಇಷ್ಟವಾಗುತ್ತದೆ. ಹಿರಿಯರು ಇರುವ ಮನೆಯಲ್ಲಿ ಸಾಕುಪ್ರಾಣಿಗಳು ಇಲ್ಲದಿದ್ದರೆ, ಕೂಡಲೇ ಹಿರಿಯರಿಗಾಗಿ ನಾಯಿ, ಬೆಕ್ಕು, ದನಕರುಗಳು ಮುಂತಾದ ಸಾಕುಪ್ರಾಣಿಗಳನ್ನು ತನ್ನಿರಿ, ಮತ್ತು ಹಿರಿಯರ ಮನೋಭಾವದಲ್ಲಿ ಆಗುವ ವ್ಯತ್ಯಾಸವನ್ನು ಗಮನಿಸಿರಿ.
ಭವಿಷ್ಯಕ್ಕಾಗಿ ಹೂಡಿಕೆಗಳು
ಭವಿಷ್ಯಕ್ಕಾಗಿ ತಮ್ಮ ಬಳಿ ಇರುವ ನಿರ್ಧಿಷ್ಟ ಹಣವನ್ನು ಹೂಡಿಕೆ ಮಾಡಿ ಹೆಚ್ಚಿನ ನಿಯಮಿತ ಆದಾಯವನ್ನು ಪಡೆಯಲು ಬಯಸುತ್ತಿದ್ದರೆ, ಊಆಈಅ ಐiಜಿe Peಟಿsioಟಿ ಉuಚಿಡಿಚಿಟಿಣeeಜ Pಟಚಿಟಿ ಮೇಲೆ ಹೂಡಿಕೆಯನ್ನು ಮಾಡಬಹುದು. ಈ ಪಿಂಚಣಿ ಯೋಜನೆ ವಿಶೇಷವಾಗಿ ಹಿರಿಯರ ಭವಿಷ್ಯಕ್ಕಾಗಿ ವಿನ್ಯಾಸ ಮಾಡಲಾಗಿದೆ. ಇದು ವಾರ್ಷಿಕ ಯೋಜನೆಯಲ್ಲಿ ಹೂಡಿಕೆ ಮಾಡುವ ಮೂಲಕ ನಿಯಮಿತ ಆದಾಯದ ಹರಿವಿನ ಭರವಸೆ ಕೊಡುವ ಮೂಲಕ ನಿವೃತ್ತಿಯ ನಂತರ ಸಕ್ರಿಯವಾದ ಜೀವನಶೈಲಿಯನ್ನು ಆನಂದಿಸಲು ಸಹಾಯ ಮಾಡುತ್ತದೆ.
ದೈಹಿಕ ವ್ಯಾಯಾಮಗಳು
ವಯಸ್ಕರು ತಮ್ಮ ಆರೋಗ್ಯವನ್ನು ಸದೃಢವಾಗಿ ಇಟ್ಟುಕೊಳ್ಳಲು ಕ್ರೀಡೆಗಳು, ಕಾಲ್ನಡಿಗೆ, ದೂರದ ಪಾದಯಾತ್ರೆ, ಸೈಕ್ಲಿಂಗ್, ಜಿಮ್‌ಗೆ ಹೋಗುವುದು, ಯೋಗ ಮತ್ತು ಧ್ಯಾನ, ಫಿಟ್ನೆಸ್ ತರಗತಿಗಳು ಇತ್ಯಾದಿ ಚಟುವಟಿಕೆಗಳಲ್ಲಿ ತಮ್ಮನ್ನು ತಾವು ತೊಡಗಿಸಿಕೊಳ್ಳಬೇಕು. ಅಥ್ಲೆಟಿಕ್ ಅಥವಾ ಫಿಟ್ನೆಸ್ ಚಟುವಟಿಕೆಯಲ್ಲಿ ಭಾಗವಹಿಸಿದರೆ ಹಿರಿಯರು ತಮ್ಮ ದೇಹದ ಮಿತಿಗಳನ್ನು ಅಥೈಸಿಕೊಳ್ಳಬಹುದು. ಯಾವುದೇ ಹೊಸ ವ್ಯಾಯಾಮವನ್ನು ಮಾಡುವುದಿದ್ದರೆ ಮೊದಲು ಕುಟುಂಬದ ವೈದ್ಯರ ಸಲಹೆಯನ್ನು ಪಡೆಯಬೇಕು.
ಹವ್ಯಾಸಗಳನ್ನು ಆಯ್ಕೆಮಾಡುವಾಗ ವಯಸ್ಕರು ತಮ್ಮ ಸಾಮರ್ಥ್ಯವನ್ನು ಅರ್ಥ ಮಾಡಿಕೊಂಡು ನಂತರ ಅಳವಡಿಸಿಕೊಳ್ಳಬೇಕು. ಹೊಸದನ್ನು ಕಲಿಯಲು ಬಯಸಿದರೂ ಸಹ ಅದು ಎಂದಿಗೂ ಆಯಾಸ ಉಂಟುಮಾಡುವುದಿಲ್ಲ ಹವ್ಯಾಸಗಳು ಮೋಜಿನ ಚಟುವಟಿಕೆಗಳಾಗಿದ್ದು, ಅವು ಸದಾ ನಮ್ಮನ್ನು ಸಂತಸದಿಂದ ಇಡುತ್ತದೆ. ಇದರಿಂದ ಉತ್ತಮ ಹವ್ಯಾಸಗಳನ್ನು ಅಳವಡಿಸಿಕೊಳ್ಳುವ ವಯಸ್ಕರು ತಮ್ಮ ಬದುಕಿನ ಮುಸ್ಸಂಜೆಯನ್ನು ಲವಲವಿಕೆಯಿಂದ ಕಳೆಯಬಹುದು.

BIJAPUR NEWS public public news udaya rashmi Udayarashmi today newspaper udayarashminews.com
Share. Facebook Twitter Pinterest Email Telegram WhatsApp
  • Website

Related Posts

ಅಧ್ಯಕ್ಷರಾಗಿ ಎನ್.ಬಿ.ಪಿಂಜಾರ ಆಯ್ಕೆ

ಅಸಭ್ಯ ವರ್ತನೆ ತೋರಿ ಹಬ್ಬಗಳನ್ನು ಅಗೌರವಿಸದಿರಿ :ಸುಂಬಡ

ಕಾಂಗ್ರೆಸ್ ಕಾರ್ಯಕರ್ತರಿಂದ ಬಿಜೆಪಿ ಕಚೇರಿಗೆ ಮುತ್ತಿಗೆ!

ಕ್ರಿಕೆಟ್ ಕ್ರೀಡಾಪಟುಗಳಿಗೆ ಪ್ರತ್ಯೇಕ ಕ್ರೀಡಾಂಗಣ ಕಲ್ಪಿಸಿ

Add A Comment

Leave A Reply Cancel Reply

Categories
  • (ರಾಜ್ಯ ) ಜಿಲ್ಲೆ
  • Uncategorized
  • ಆರೋಗ್ಯ
  • ಇತರೆ
  • ಕಾವ್ಯರಶ್ಮಿ
  • ಚಿಂತನ
  • ದಿನಪತ್ರಿಕೆ
  • ಪುಸ್ತಕ ಪರಿಚಯ
  • ಪ್ರೇಮಲೋಕ
  • ಭಾವರಶ್ಮಿ
  • ರಾಷ್ಚ್ರ
  • ವಿಜಯಪುರ
  • ವಿದ್ಯಾರ್ಥಿ ನಿಧಿ
  • ವಿಶೇಷ ಲೇಖನ
  • ಸಾಹಿತ್ಯ
  • ಸಿನಿಮಾ
  • ಹೊತ್ತಿಗೆ ಹೊರಣ
Recent Posts
  • ಅಧ್ಯಕ್ಷರಾಗಿ ಎನ್.ಬಿ.ಪಿಂಜಾರ ಆಯ್ಕೆ
    In (ರಾಜ್ಯ ) ಜಿಲ್ಲೆ
  • ಅಸಭ್ಯ ವರ್ತನೆ ತೋರಿ ಹಬ್ಬಗಳನ್ನು ಅಗೌರವಿಸದಿರಿ :ಸುಂಬಡ
    In (ರಾಜ್ಯ ) ಜಿಲ್ಲೆ
  • ಕಾಂಗ್ರೆಸ್ ಕಾರ್ಯಕರ್ತರಿಂದ ಬಿಜೆಪಿ ಕಚೇರಿಗೆ ಮುತ್ತಿಗೆ!
    In (ರಾಜ್ಯ ) ಜಿಲ್ಲೆ
  • ಕ್ರಿಕೆಟ್ ಕ್ರೀಡಾಪಟುಗಳಿಗೆ ಪ್ರತ್ಯೇಕ ಕ್ರೀಡಾಂಗಣ ಕಲ್ಪಿಸಿ
    In (ರಾಜ್ಯ ) ಜಿಲ್ಲೆ
  • ಆಶ್ರಯ ಕಾಲೊನಿ ನಿವಾಸಿಗಳಿಗೆ ಶೀಘ್ರ ಹಕ್ಕುಪತ್ರ ವಿತರಣೆ
    In (ರಾಜ್ಯ ) ಜಿಲ್ಲೆ
  • ಧರ್ಮಸ್ಥಳ ಸಂಘ ಕಾರ್ಯ ಶ್ಲಾಘನೀಯ :ಎಸಿ ಅನುರಾಧ
    In (ರಾಜ್ಯ ) ಜಿಲ್ಲೆ
  • ಮಹಿಳೆಯರ ಸ್ವಾವಲಂಬನೆಗೆ ಗ್ಯಾರಂಟಿ ಯೋಜನೆಗಳು ಸಹಕಾರಿ
    In (ರಾಜ್ಯ ) ಜಿಲ್ಲೆ
  • ವೈಜ್ಞಾನಿಕ ಮನೋಭಾವದ ಕೊರತೆಯಿಂದ ಮೌಢ್ಯಗಳ ಹೆಚ್ಚಳ
    In (ರಾಜ್ಯ ) ಜಿಲ್ಲೆ
  • ಕೊಂಡಗೂಳಿಗೆ ಸರ್ಕಾರಿ ಪ್ರೌಢಶಾಲೆ ಮಂಜೂರಿಗೆ ಆಗ್ರಹಿಸಿ ಸಚಿವರಿಗೆ ಮನವಿ
    In (ರಾಜ್ಯ ) ಜಿಲ್ಲೆ
  • ಬಸವ ಚೇತನ ಪ್ರಶಸ್ತಿಗೆ ಕೆ.ಎಸ್.ಕೋರಿ ಆಯ್ಕೆ
    In (ರಾಜ್ಯ ) ಜಿಲ್ಲೆ
Editors Picks
Top Reviews
udayarashminews.com
Facebook X (Twitter) Instagram Pinterest Vimeo YouTube
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ
© 2025 udayarashminews.com. Designed by udayarashmi news .

Type above and press Enter to search. Press Esc to cancel.