ಉದಯರಶ್ಮಿ ದಿನಪತ್ರಿಕೆ
ಕೊಲ್ಹಾರ: ಪಟ್ಟಣದಲ್ಲಿ ತಾಲೂಕು ಶರಣ ಸಾಹಿತ್ಯ ಪರಿಷತ್ತು ಸಹಯೋಗದಲ್ಲಿ ದತ್ತಿ ಉಪನ್ಯಾಸ ಹಾಗೂ ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭವನ್ನು ಹಮ್ಮಿಕೊಳ್ಳಲಾಗಿತ್ತು.
ಕಾರ್ಯಕ್ರಮದ ವಿಶೇಷ ಉಪನ್ಯಾಸಕರಾಗಿ ಪ್ರಗತಿಪರ ಚಿಂತಕರಾದ ಚಿನ್ನಪ್ಪ ಗಿಡ್ಡಪ್ಪಗೋಳ ಮಾತನಾಡಿ ಇಂದಿನ ದಿನಗಳಲ್ಲಿ ನಾವು ಹೇಗೆ ಬದುಕಬೇಕು ಎಂಬುದನ್ನು ಈ ವಚನಗಳ ಸಾರ ಅರಿತು ಕೊಂಡರೆ ಬದುಕು ಬಂಗಾರ ಆಗುತ್ತದೆ ಮತ್ತು ವಚನಗಳು ವೈಜ್ಞಾನಿಕ ಮನೋಭಾವ ಬೆಳೆಸುವ ಕಾರ್ಯ ಮಾಡುತ್ತವೆ ಎಂದು ಹೇಳಿದರು.
ಸಾನಿಧ್ಯ ವಹಿಸಿ ದಿಗಂಬರೇಶ್ವರ ಮಠದ ಶ್ರೀ ಕಲ್ಲಿನಾಥ ದೇವರು ಮಾತನಾಡಿ ಸಮಾಜದಲ್ಲಿ ಶಾಂತಿ ಸಹಬಾಳ್ವೆ ಹಾಗೂ ಕಾಯಕದ ಮಹತ್ವವನ್ನು ಈ ವಚನಗಳು ತಿಳಿಸುತ್ತವೆ ಹಾಗೂ ಶರಣರ ತತ್ವ ಆದರ್ಶಗಳನ್ನು ನಾವು ಮೈಗೂಡಿಸಿಕೊಂಡು ಬದುಕಬೇಕು ಎಂದು ತಿಳಿಸಿದರು
ದತ್ತಿ ಉಪನ್ಯಾಸ ಕಾರ್ಯಕ್ರಮದಲ್ಲಿ ಸಾಹಿತಿಗಳಾದ ನಿರ್ಮಲಾ ಶೀಲವಂತ ಶರಣರ ಬದುಕು ಮತ್ತು ವಚನ ಸಾಹಿತ್ಯ ಎರಡು ಅರಿತರೇ ಅರಿವು(ಜ್ಞಾನ) ಸಿಗುತ್ತದೆ ಎಂದು ಹೇಳಿದರು.
ಪ್ರಗತಿಪರ ರೈತ ಸಿದ್ದು ಬಾಲಗೊಂಡ ಮಾತನಾಡಿ ನಾವು ನಮ್ಮ ಪೂರ್ವಜರು ಹಾಕಿ ಕೊಟ್ಟ ಸಂಸ್ಕಾರ ಮತ್ತು ಕಾಯಕದ ನಿಷ್ಠೆ ತಿಳಿದು ಬದುಕಬೇಕು ಎಂದು ತಿಳಿಸಿದರು.
ಈ ಕಾರ್ಯಕ್ರಮದಲ್ಲಿ ಜಿಲ್ಲಾ ಶರಣ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಜಂಬುನಾಥ ಕಂಚ್ಯಾಣಿ, ನಿಕಟಪೂರ್ವ ಅಧ್ಯಕ್ಷ ನಾಗರಾಜ ಬನಸೋಡೆ, ಮಾಜಿ ಜಿಲ್ಲಾ ಪಂಚಾಯತ್ ಸದಸ್ಯೆ ಸುನಂದಾಬಾಯಿ ಗು ಗಿಡ್ಡಪ್ಪಗೋಳ, ಎಸ್ಡಿಎಂಸಿ ಅಧ್ಯಕ್ಷೆ ರೂಪಾ ಸುರೇಶ ಗಿಡ್ಡಪ್ಪಗೋಳ, ಎಸ್ಡಿಎಂಸಿ ಉಪಾಧ್ಯಕ್ಷ ಪುಂಡಲೀಕ ಬೆಳ್ಳುಬ್ಬಿ,
ನೂತನ ಪದಾಧಿಕಾರಿಗಳ ಪದಗ್ರಹಣ
ಈಲ್ಲಾ ಶರಣ ಸಾಹಿತ್ಯ ಪರಿಷತ್ತಿನ ಜಿಲ್ಲಾ ಅಧ್ಯಕ್ಷರಾದ ಜಂಬುನಾಥ ಕಂಚ್ಯಾಣಿ ಹಾಗೂ ನಿಕಟಪೂರ್ವ ಅಧ್ಯಕ್ಷ ನಾಗರಾಜ ಬನಸೋಡೆ ಅವರು ಶರಣ ಸಾಹಿತ್ಯ ಪರಿಷತ್ತಿನ ಧ್ವಜ ನೀಡುವುದರೊಂದಿಗೆ ನೂತನ ಪದಾಧಿಕಾರಿಗಳ ಪದಗ್ರಹಣ ಮಾಡಲಾಯಿತು.
ನೂತನ ಪದಾಧಿಕಾರಿಗಳು
ಕೊಲ್ಹಾರ ತಾಲ್ಲೂಕು ಶರಣ ಸಾಹಿತ್ಯ ಪರಿಷತ್ತಿನ ನೂತನ ಪದಾಧಿಕಾರಿಗಳು ಗೌರವ ಅಧ್ಯಕ್ಷರಾಗಿ ಶ್ರೀ ಶ್ರೀ ಕಲ್ಲಿನಾಥ ದೇವರು, ಅಧ್ಯಕ್ಷರಾಗಿ ಕೆ.ಎಸ್. ಬಾಲಗೊಂಡ, ಉಪಾಧ್ಯಕ್ಷರಾಗಿ ಗಂಗಾಧರ ಹು ಏಳಗಂಟಿ, ಆರ್.ಎಚ್. ನಾವಿ, ಖಜಾಂಚಿ ಐ.ಬಿ. ಹಾದಿಮನಿ, ಸದಸ್ಯರಾಗಿ ಬಸವರಾಜ ಬಿರಾದಾರ, ಲಕ್ಷ್ಮಣ ಮ ಹಂಚಿನಾಳ, ಬಿ.ಜೆ. ಹಿಕ್ಕನಗುತ್ತಿ, ಬಸವರಾಜ ಅಪ್ಪನವರ, ಎಂ.ಎಸ್. ಕಮತಗಿ, ಸಿ.ಎಚ್. ಗೌಡರ, ಜ್ಯೋತಿ ವಿ ಕೊಟ್ಟಗಿ ಪದಗ್ರಹಣ ಮಾಡಿದರು.
“ಮನೆ ಮನೆಗಳಲ್ಲಿ ಶರಣರ ತತ್ವ ಆದರ್ಶಗಳನ್ನು ಬಿತ್ತುವ ಕೆಲಸವನ್ನು ಶ್ರೀಗಳ ಮಾರ್ಗದಲ್ಲಿ ನಡೆದು ಯುವಕರು ಹಿರಿಯರು ಎಲ್ಲರನ್ನೂ ಒಟ್ಟಾಗಿ ತೆಗೆದು ಕೊಂಡು ಉತ್ತಮ ಸಮಾಜದ ನಿರ್ಮಾಣಕ್ಕೆ ಪ್ರಯತ್ನಿಸುತ್ತೇನೆ “
– ಕೆ.ಎಸ್. ಬಾಲಗೊಂಡ
ನೂತನ ಅಧ್ಯಕ್ಷರು, ತಾಲ್ಲೂಕು ಶರಣ ಸಾಹಿತ್ಯ ಪರಿಷತ್ತು ಕೊಲ್ಹಾರ.

