ಉದಯರಶ್ಮಿ ದಿನಪತ್ರಿಕೆ
ಆಲಮೇಲ: ಇಲ್ಲಿನ ಆರೂಢ ಸಂಗನಬಸವೇಶ್ವರಮಠದಲ್ಲಿ ಪಂಡಿತ ಪುಟ್ಟರಾಜ ಗವಾಯಿಗಳ 111ನೇ ಜಯಂತೋತ್ಸವ ಆಚರಿಸಲಾಯಿತು .
ಸುತ್ತಲಿನ ಗ್ರಾಮಗಳ ಭಜನಾ ಮಂಡಳಿಮತ್ತು ಸಂಗೀತ ಶಿಕ್ಷಕರಿಗೆ ವಿಶೇಷ ಸತ್ಕಾರಮಾಡಲಾಯಿತು ಪಾವನ ಸಾನಿಧ್ಯ ಷಭ್ರ ಸಂಗನಬಸವಶಿವಾಚಾರ್ಯರು ವಹಿಸಿದ್ದರು.
ಶ್ರೀಮಠದ ಒಡೆಯರಾದ ಬಸವಲಿಂಗ ಶರಣರು ಪ್ರೀತಿಯ ಸತ್ಕಾರ ನೀಡಿ ಇಂದು ನಮ್ಮ ಮಠದಿಂದ ಪ್ರೀತಿಯ ಸತ್ಕಾರ ಪಡೆದ 12 ಜನ ಭಜನಾ ಮಂಡಳಿಯವರು ಸಮಾಜದ ಪ್ರತಿಯೊಬ್ಬರ ಅಂಧಕಾರ ಹೊರದೂಡಿ ಆಧ್ಯಾತ್ಮ ವಿಚಾರದಲ್ಲಿ ಹಾಡಿನ ಮೂಲಕ ಸಮಾಜದ ಕಣ್ಣುತೆರೆಸಿದ ಕಡಕೋಳ ಮಡಿವಾಳಪ್ಪ ಮತ್ತು ಸಂತ ಶಿಶುನಾಳ ಶರೀಫ ಇವರ ಸ್ವರೂಪ ಪಂಡಿತ ಪುಟ್ಟರಾಜ ಗವಾಯಿಗಳು ಇವರ ಸ್ವರೂಪದಲ್ಲಿ ಈ ಪುಣ್ಯಜೀವಿಗಳನ್ನು ಸತ್ಕರಿಸುವುದು ಶ್ರೀಮಠಕ್ಕೆ ಹೆಮ್ಮೆ ತರುವ ವಿಷಯವಾಗಿದೆ ಎಂದರು ಕಲ್ಲಾಲಿಂಗ ಶರಣರು ಮತ್ತು ಸಂಗೀತ ಕಲಾವಿದರಾದ ಸದಾಶಿವ ಬಿರಾದಾರ ಮಲ್ಲಿಕಾರ್ಜುನ ಉಪ್ಪಿನ ಶಿವರಾಜ ಪತ್ತಾರ ವಿಶ್ವರ್ಯಾ ಕೊಳಾರಿ ಇವರಿಂದ ಸಂಗೀತ ಕಾರ್ಯಕ್ರಮ ನೆರವೇರಿತು.
ಸಾನಿಧ್ಯ ವಹಿಸಿದ್ದ ಸಂಗನಬಸವ ಶಿವಾಚಾರ್ಯರು ಮಾತನಾಡಿದರು. ಮಲ್ಲಿಕಾರ್ಜುನ ಕೊಳಾರಿ ನಿಂಗನಗೌಡ ಪಾಟೀಲ ಸಂತು ಬಿರಾದಾರ ಬಸು ಪಾಟೀಲ ಇದ್ದರೂ ಮಾತೋಶ್ರೀ ಲಿಂಗಮ್ಮ ತಾಯಿ ಮಹಿಳಾ ತಂಡದಿಂದ ಸಂಗೀತ ಕಾರ್ಯಕ್ರಮ ನೆರವೇರಿತು,
ಪಂಡಿತ ಅವಜಿ ನಿರೂಪಿಸಿ ಸ್ವಾಗತಿಸಿದರು, ಮಹಾಂತ ಹಿರೇಗೌಡರ ವಂದಿಸಿದರು.

