ಉದಯರಶ್ಮಿ ದಿನಪತ್ರಿಕೆ
ಕೆಂಭಾವಿ: ಬರ್ತಡೇ ಎಂದರೆ ಕೇಕ್, ಕ್ಯಾಂಡಲ್, ಶಾಲು, ಹಾರ, ತುರಾಯಿ, ಸನ್ಮಾನ, ಬೀರ್, ಬಾರ್, ಮೋಜು, ಮಸ್ತಿಗೆ ಮಾರು ಹೋಗುವ ಇಂದಿನ ದಿನಮಾನಗಳಲ್ಲಿ, ಬ್ಲಾಕ್ ಕಾಂಗ್ರೆಸ್ ವತಿಯಿಂದ ಜನನಾಯಕನ ಜನ್ಮದಿನಾಚರಣೆಯನ್ನು ವಿಭಿನ್ನ ಹಾಗೂ ವಿಶಿಷ್ಟ ರೀತಿಯಲ್ಲಿ ಆಚರಿಸಲಾಯಿತು.
ಪಟ್ಟಣದ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಸೋಮವಾರ ಬೆಳಗ್ಗೆ ಆಸ್ಪತ್ರೆಗೆ ಭೇಟಿ ನೀಡಿ ತಮ್ಮ ನೆಚ್ಚಿನ ನಾಯಕ, ಅಭಿವೃದ್ಧಿ ಹರಿಕಾರ, ಕರ್ನಾಟಕ ಸರ್ಕಾರದ ಸಣ್ಣ ಕೈಗಾರಿಕೆ ಹಾಗೂ ಸಾರ್ವಜನಿಕ ಉದ್ದಿಮೆಗಳು ಮತ್ತು ಯಾದಗಿರಿ ಜಿಲ್ಲಾ ಉಸ್ತುವಾರಿ ಸಚಿವರು, ಮತಕ್ಷೇತ್ರದ ಜನಪ್ರಿಯ ಶಾಸಕರು ಶರಣಬಸಪ್ಪಗೌಡ ದರ್ಶನಪುರವರ ಮಾರ್ಚ್, 03 ಕ್ಕೆ, 64 ವಸಂತಗಳನ್ನು ಪೂರೈಸಿ 65 ನೇ ವರ್ಷಕ್ಕೆ ಪಾದಾರ್ಪಣೆ ಮಾಡಿದ ಸುಸಂದರ್ಭದಲ್ಲಿ ಅತ್ಯಂತ ಅರ್ಥಪೂರ್ಣವಾಗಿ ಅಶಕ್ತರಿಗೆ, ಆರ್ಥಿಕ ದುರ್ಬಲರಿಗೆ, ರೋಗಿಗಳಿಗೆ ಹಣ್ಣು, ಹಂಪಲು, ಬ್ರೆಡ್ ಹಾಲು, ವಿತರಣೆ ಮಾಡಿ ಆಚರಿಸಿದ ಹುಟ್ಟು ಹಬ್ಬ ಜನಮನ್ನಣೆಗೆ ಪಾತ್ರವಾಯಿತು.
ಇದೇ ವೇಳೆ ಪ್ರಮುಖರಾದ ಪಿಎಲ್ ಡಿ ಬ್ಯಾಂಕ್ ನಿರ್ದೇಶಕ ವಾಮನರಾವ್ ದೇಶಪಾಂಡೆ, ಮುಖಂಡ ಮಹಿಪಾಲರೆಡ್ಡಿ ಡಿಗ್ಗಾವಿ, ಯುವನಾಯಕ ಆದಿತ್ಯ ಪೋಲೀಸ್ ಪಾಟೀಲ್, ಪತ್ರಕರ್ತ ಸಂಜೀವರಾವ್ ಕುಲ್ಕರ್ಣಿ, ಸಮುದಾಯ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ ಗಿರೀಶ್ ಕುಲ್ಕರ್ಣಿ, ಪುರಸಭೆ ಅಧ್ಯಕ್ಷ ರಹಿಮಾನ್ ಪಟೇಲ್ ಯಲ್ಗೋಡ್, ಉಪಾಧ್ಯಕ್ಷ ಶಿವಪ್ಪ ಕಂಬಾರ, ಪುರಸಭೆ ಸದಸ್ಯ ಆರೀಫ್ ಹುಸೇನ್ ಖಾಜಿ, ನಾಮನಿರ್ದೇಶಿತ ಸದಸ್ಯ ದೇವಿಂದ್ರಪ್ಪ ಟಣಕೇದಾರ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಬಸವರಾಜ ಪಾಟೀಲ ಚಿಂಚೋಳಿ, ಉಪಾಧ್ಯಕ್ಷ ಸಾಹೇಬಲಾಲ್ ಆಂದೇಲಿ, ಸೇರಿದಂತೆ ಅನೇಕರು ಉಪಸ್ಥಿತರಿದ್ದರು.

