ಉದಯರಶ್ಮಿ ದಿನಪತ್ರಿಕೆ
ದೇವರಹಿಪ್ಪರಗಿ: ಹರ ಮುನಿದರೆ ಗುರು ಕಾಯುವನು ಎಂಬ ಮಾತಿನಂತೆ ಗುರುವಿನ ಮಹತ್ವ ಅತ್ಯಂತ ಹಿರಿದಾದುದಾಗಿದೆ ಎಂದು ಸ್ಥಳೀಯ ಗದ್ದಿಗೆಮಠದ ಮಡಿವಾಳೇಶ್ವರಶ್ರೀ ಹೇಳಿದರು.
ಪಟ್ಟಣದ ಕಲ್ಮೇಶ್ವರ ಸಭಾಭವನದಲ್ಲಿ ಭಾನುವಾರ ಜರುಗಿದ ಬಿಎಲ್ಡಿಇ ಸಂಸ್ಥೆಯ ಡಿ.ಎಚ್ ಪ.ಪೂ ಹಾಗೂ ಪ್ರೌಢಶಾಲೆಯ ೧೯೯೬-೯೭ನೇ ಸಾಲಿನ ಎಸ್.ಎಸ್.ಎಲ್.ಸಿ ವಿದ್ಯಾರ್ಥಿಗಳ ಗುರುವಂದನಾ ಹಾಗೂ ಸ್ನೇಹ ಸಮ್ಮಿಲನ ಕಾರ್ಯಕ್ರಮದ ಸಾನಿಧ್ಯ ವಹಿಸಿ ಮಾತನಾಡಿದರು.
ಕಲಿದೇವರದೇವ ಎಂಬ ಅಂಕಿತನಾಮದ ವಚನಗಳನ್ನು ರಚಿಸಿದ ಮಡಿವಾಳ ಮಾಚಿದೇವ ಅಧ್ಯಯನಿಸಿದ ಸನ್ನಿಧಾನದಲ್ಲಿ ಜರುಗಿದ ಕಾರ್ಯಕ್ರಮ ಅತ್ಯಂತ ಸಮಯೋಚಿತವಾಗಿದೆ . ಇಂದು ಗುರುಸೇವೆ ಎಂಬುದು ಅತ್ಯಂತ ಮಹತ್ವ ಪಡೆದ ಕಾರ್ಯವಾಗಿದೆ ಎಂದರು.
ಲಚ್ಯಾಣ ಶಿಕ್ಷಕರ ತರಬೇತಿ ಕೇಂದ್ರದ ಪ್ರಾಚಾರ್ಯ ಎಸ್.ಎಮ್,ಶೆಟ್ಟೆಣ್ಣವರ ಮಾತನಾಡಿ, ಉತ್ತಮ ಆರೋಗ್ಯ, ಮೌಲ್ಯಗಳನ್ನು ಅಳವಡಿಸಿಕೊಳ್ಳುವುದರ ಮೂಲಕ ಸಂಬಂಧಗಳನ್ನು ಕಾಯ್ದುಕೊಳ್ಳಿ ಎಂದು ಸಲಹೆ ನೀಡಿದರು.
ನಿವೃತ್ತ ಪ್ರಾಚಾರ್ಯ ಎಸ್.ಬಿ.ಮಿರ್ಜಿ, ನಿವೃತ್ತ ಶಿಕ್ಷಕಕರಾದ ಬಿ.ಸಿ.ಹಿರೇಮಠ, ಜೆ.ಆರ್.ಬಿರಾದಾರ, ಅತಿಥಿಶಿಕ್ಷಕ ಬಿ.ಕೆ.ಪಾಟೀಲ ಮಾತನಾಡಿದರು. ಎ.ಬಿ.ಸಾಲಕ್ಕಿ ಪ್ರೌಢಶಾಲಾ ಮುಖ್ಯಗುರು ವ್ಹಿ.ಎಮ್.ಪಾಟೀಲ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು. ನಂತರ ವಿದ್ಯಾರ್ಥಿಗಳಿಂದ ಪ್ರಾಥಮಿಕ ಹಾಗೂ ಪ್ರೌಢಶಾಲಾ ಶಿಕ್ಷಕವೃಂದಕ್ಕೆ ಗೌರವ ಸಮರ್ಪಣೆ ಜರುಗಿತು.
ವಿದ್ಯಾರ್ಥಿ, ವಿದ್ಯಾರ್ಥಿನೀಯರಾದ ಭಾರತಿ ಆವೇರಿ, ವಿನೋದಗೌಡ ಪಾಟೀಲ, ರೀನಾ ಪಾಟೀಲ, ಆರತಿ ಮೇಲಿನಮನಿ ತಮ್ಮ ಅನಿಸಿಕೆ ವ್ಯಕ್ತಪಡಿಸಿದರು. ಶಶಿಕಾಂತ ಕಠಾರೆ ಪ್ರಾಸ್ತಾವಿಕವಾಗಿ ಮಾತನಾಡಿದರು. ಆರಂಭದಲ್ಲಿ ಚೈತನ್ಯ ಶಾಲೆಯ ಮಕ್ಕಳಿಂದ ಪ್ರಾರ್ಥನೆ ಹಾಗೂ ಸ್ವಾಗತಗೀತೆ ಜರುಗಿತು. ಪದ್ಮರಾಜ ಮಹಿಳಾ ಪಿಯು ಕಾಲೇಜಿನ ಗಿರೀಶ ಕುಲಕರ್ಣಿ ಹಾಸ್ಯತುಣುಕುಗಳನ್ನು ಹಾಗೂ ಸರಿಗಮ ಪೇ ಸಂಗೀತ ಗೀತಗಾಯನ ತಂಡದವರು ರೈತಗೀತೆ ಪ್ರಸ್ತುತ ಪಡಿಸಿದರು.
ನಿವೃತ್ತ ಶಿಕ್ಷಕರುಗಳಾದ ಬಿ.ಜಿ.ಅರಳಿಮಟ್ಟಿ, ಬ್ರಹ್ಮಾನಂದಗೌಡ ಪಾಟೀಲ, ದೇಸಾಯಿ, ಸುಶೀಲಾ ಹದನೂರ, ಶಕುಂತಲಾ ಈಳಗೇರ ಸಹಿತ ವಿದ್ಯಾರ್ಥಿಗಳು ಇದ್ದರು.

