ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ನಗರದ ಆಶ್ರಮ ರಸ್ತೆ ಬಳಿಯ ರಾಮಕೃಷ್ಣ ನಗರದಲ್ಲಿ ಫೆ.೨೬ ಬುಧವಾರ ಸಂಜೆ ೭ ಗಂಟೆಗೆ ಮಹಾ ಶಿವರಾತ್ರಿ ಪ್ರಯುಕ್ತ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ
ರಾಮಕೃಷ್ಣ ಬಡಾವಣೆಯ ಶ್ರೀ ಗಜಾನನ ಮಿತ್ರ ಮಂಡಳಿ ಆಯೋಜಿಸಿದ ಮಹಾ ಶಿವರಾತ್ರಿ ಆಚರಣೆಯ ಸಾನಿಧ್ಯವನ್ನು ಕನ್ನೂರ ಕೈವಲ್ಯ ಕುಟೀರದ ಪೂಜ್ಯ ಪ್ರಕಾಶ ಮಹಾರಾಜರು ವಹಿಸಿಕೊಳ್ಳಲಿದ್ದಾರೆ.
ಸಂಜೆ ಪ್ರವಚನ ಹಾಗೂ ಬಡಾವಣೆಯ ಮಹಿಳೆಯರಿಂದ, ಮಕ್ಕಳಿಂದ ಪ್ರವಚನ ಹಾಗೂ ವಿವಿಧ ಸಾಂಸ್ಕೃತಿಕ, ಸಂಗೀತ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ.
ಶ್ರೀ ರಾಮಕೃಷ್ಣ ಗಜಾನನ್ ಮಿತ್ರ ಮಂಡಲದ ವತಿಯಿಂದ ರಾತ್ರಿ 8.30 ಘಂಟೆಯಿಂದ ಜಾಗರಣೆ ಮತ್ತು ಪೂಜೆ ಆಯೋಜಿಸಲಾಗಿದೆ. ನಂತರ ಉಪವಾಸದ ಸಲುವಾಗಿ ಸರ್ವರಿಗೂ ಉಪಹಾರ ಕೂಟ ಏರ್ಪಡಿಸಲಾಗಿದ್ದು, ಸರ್ವರೂ ಪಾಲ್ಗೊಂಡು ಪುನೀತರಾಗಬೇಕೆಂದು ಶ್ರೀ ರಾಮಕೃಷ್ಣ ಗಜಾನನ್ ಮಿತ್ರ ಮಂಡಲದ ಸಂಜೀವ ಪಾಟೀಲ (ಕನ್ನೂರ) ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಪ್ರಕಾಶ್ ಮಹಾರಾಜರ ಪರಿಚಯ
ಪೂಜ್ಯಶ್ರೀ ಪ್ರಕಾಶ್ ಮಹಾರಾಜರು ಕೈವಲ್ಯ ಕುಟೀರ ವಿಜಯಪುರ ಮೂಲತ: ಕನ್ನೂರ ಗ್ರಾಮದವರು. ಸಮರ್ಥ ಸದ್ಗುರು ಶ್ರೀ ಗಣಪತರಾವ್ ಮಹಾರಾಜರು ಶಾಂತಿ ಕುಟೀರ ಕನ್ನೂರ ಇವರ ಪರಮಶಿಷ್ಯರು. ಸುಮಾರು 25 ವರ್ಷಗಳಿಂದ ನೀತಿ ಭಕ್ತಿ ಆದರ್ಶ ಗ್ರಾಮ ಸ್ವದೇಶಿ ಪ್ರಚಾರದ ಕಾರ್ಯವನ್ನು ಒಂದು ವರ್ಷದಲ್ಲಿ ಹತ್ತು ದಿವಸಗಳ ಕಾಲ ಪಾದಯಾತ್ರೆ ಮುಖಾಂತರ ಜನರಲ್ಲಿ ಜಾಗೃತಿ ಮೂಡಿಸುವ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತ ಬಂದಿದ್ದಾರೆ. ವಿಜಯಪುರ ನಗರದ ವಿವಿಧ ಬಡಾವಣೆಗಳಲ್ಲಿ ತಿಂಗಳಿಗೆ 20 ಸತ್ಸಂಗ ನಡೆಸುವುದು, ಅನೇಕ ಶಾಲೆ, ಕಾಲೇಜುಗಳಲ್ಲಿ ನೀತಿ ಶಿಕ್ಷಣ ಮೌಲ್ಯ ಶಿಕ್ಷಣದ ಉಪನ್ಯಾಸ ನೀಡುತ್ತ ಬಂದಿದ್ದಾರೆ.
ಪುರಿ ಜಗನ್ನಾಥ ಕ್ಷೇತ್ರದಲ್ಲಿ ನಡೆದ ವಿಶ್ವ ಹಿಂದೂ ಸನಾತನ ಮಹಾ ಸಾಧು ಸಂತ ಸಮಾವೇಶದಲ್ಲಿ , ಹಾಗೂ ಇತ್ತೀಚಿಗೆ ಮುಂಬೈ ಮಹಾನಗರದಲ್ಲಿ ನಡೆದ ವಿರಾಟ್ ಹಿಂದೂ ಆಧ್ಯಾತ್ಮಿಕ ಸಮ್ಮೇಳನದಲ್ಲಿ ಭಾಗಿಯಾಗಿದ್ದರು.
ಅಧ್ಯಾತ್ಮದ ಸಾಧನೆಗಾಗಿ ಭಾರತದ ದೇವು ಭೂಮಿ ಹಿಮಾಲಯದಲ್ಲಿ ವರ್ಷಕ್ಕೆ ಒಂದು ತಿಂಗಳ ಸಾಧನೆ, ಕೌನ್ಸಿಲಿಂಗ್ ಮುಖಾಂತರ ನೂರಾರು ಯುವಕರನ್ನ ದುಶ್ಚಟಗಳನ್ನು ಬಿಡಿಸಿರುವುದು, ಭಗವದ್ಗೀತೆ, ಉಪನಿಷತ್ತು, ಕೈವಲ್ಯ ಪದ್ಧತಿ, ದಾಸ ಬೋಧ, ಸುಲಭ ಆತ್ಮ ಜ್ಞಾನ, ಶರಣರ ವಚನಗಳು, ಮಹಾರಾಷ್ಟ್ರ ಸಂತರ ಅಬಂಗುಗಳು, ದಾಸ ಸಾಹಿತ್ಯ ಎಲ್ಲ ಗ್ರಂಥಗಳ ಅಧ್ಯಯನ, ಭಾರತೀಯ ಸುರಾಜ್ಯ್ ಸಂಸ್ಥೆಯ ಖಜಾಂಚಿಗಳಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.

