ಕರ್ನಾಟಕ ಲಲಿತಕಲಾ ಅಕಾಡೆಮಿಯ ೫೨ ನೇ ವಾರ್ಷಿಕ ಕಲಾ ಪ್ರದರ್ಶನದಲ್ಲಿ ವಿಜಯಪುರದ ಕಲಾವಿದ ರಮೇಶ ಚವ್ಹಾಣ ಅವರ ಕಲಾಕೃತಿಗೆ ಬಹುಮಾನ
ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ಕರ್ನಾಟಕ ಲಲಿತಕಲಾ ಅಕಾಡೆಮಿಯ ೫೨ ನೇ ವಾರ್ಷಿಕ ಕಲಾ ಪ್ರದರ್ಶನದಲ್ಲಿ ವಿಜಯಪುರದ ಕಲಾವಿದ ರಮೇಶ ಚವ್ಹಾಣ ಅವರ ಕಲಾಕೃತಿಯು ಪ್ರಶಸ್ತಿಗೆ ಆಯ್ಕೆಯಾಗಿದೆ.
ನವ್ಯ ಕಲೆಯ ಕಲಾವಿದರಾಗಿ ಕಳೆದ ೨೬ ವರ್ಷಗಳಿಂದ ಕಲಾರಚನೆಯಲ್ಲಿ ತೊಡಗಿರುವ ರಮೇಶ ಚವ್ಹಾಣ ಅವರು ದೇಶದ ಪ್ರತಿಷ್ಠಿತ ಕಲಾ ಗ್ಯಾಲರಿಗಳಲ್ಲಿ ತಮ್ಮ ಕಲಾಕೃತಿಗಳ ಪ್ರದರ್ಶನ ಮಾಡಿದ್ದಾರೆ, ಕಲಾಕೃತಿ ರಚನೆಯ ಜೊತೆಯಲ್ಲಿ ಛಾಯಗ್ರಹಣ ಕ್ಷೇತ್ರದಲ್ಲಿಯೂ ಸಹ ತಮ್ಮ ಪ್ರತಿಭೆಯ ಮೂಲಕ ಹಲವಾರು ರಾಜ್ಯ ರಾಷ್ಟ್ರ, ಅಂತರ ರಾಷ್ಟ್ರೀಯ ಪ್ರದರ್ಶನದಲ್ಲಿ ಭಾಗವಹಿಸಿದ್ದಾರೆ.

ಈಗ ಕರ್ನಾಟಕ ಲಲಿತಕಲಾ ಅಕಾಡೆಮಿಯ ೫೨ ನೇ ವಾರ್ಷಿಕ ಕಲಾ ಪ್ರದರ್ಶನದಲ್ಲಿ ಛಾಯಾಚಿತ್ರ ವಿಭಾಗದಲ್ಲಿ ಅವರ ಶಿರ್ಷಿಕೆ ರಹಿತ ಛಾಯಾಚಿತ್ರ ಕಲಾಕೃತಿಯು ಪ್ರಶಸ್ತಿಗೆ ಆಯ್ಕೆಯಾಗಿದೆ, ವಿಭಾಗದಲ್ಲಿ ಪ್ರಶಸ್ತಿಗೆ ಆಯ್ಕೆಯಾಗಿದೆ. ಮುಂದಿನ ತಿಂಗಳು ಚಾಮರಾಜ ನಗರ ಜಿಲ್ಲೆಯಲ್ಲಿ ಪ್ರಶಸ್ತಿ ಪ್ರದಾನ ಸಮಾರಂಭ ನಡೆಯಲಿದೆ.
ಅಕಾಡೆಮಿಯ ಪ್ರಶಸ್ತಿಗೆ ಆಯ್ಕೆಯಾದ ರಮೇಶ ಚವ್ಹಾಣ ಅವರಿಗೆ ಹಿರಿಯ ಕಲಾವಿದರಾದ ಪಿ.ಎಸ್, ಕಡೆಮನಿ. ಬಿ.ಎಸ್. ಪಾಟೀಲ್, ಡಾ. ಎಸ್.ಟಿ. ಮೇರವಾಡೆ, ಲಿಂಗರಾಜ ಕಾಚಾಪುರ ಸಹಿತ ಹಲವಾರು ಕಲಾವಿದರು ಅಭಿನಂದಿಸಿದ್ದಾರೆ.

’ಉದಯರಶ್ಮಿ’ ಶುಭ ಹಾರೈಕೆ
ವಿಜಯಪುರದ ಹೆಮ್ಮೆಯ ಚಿತ್ರಕಲಾವಿದ ಹಾಗೂ ಛಾಯಾಗ್ರಾಹಕ ರಮೇಶ ಚವ್ಹಾಣ ಅವರ ಸಾಧನೆಗೆ ’ಉದಯರಶ್ಮಿ’ ಪತ್ರಿಕೆ ಸಂಪಾದಕ ಇಂದುಶೇಖರ ಮಣೂರ ಹಾಗೂ ಪತ್ರಿಕಾ ಬಳಗ ಅಭಿನಂದಿಸಿದ್ದಾರೆ.
ಚಿತ್ರಕಲಾ ಹಾಗೂ ಛಾಯಾಗ್ರಹಣ ಕ್ಷೇತ್ರದಲ್ಲಿ ರಮೇಶ ಅವರ ಸಾಧನೆಯ ಹೆಜ್ಜೆಗಳು ಮುಗಿಲೆತ್ತರಕ್ಕೆ ಬೆಳೆದು ಕಲಾ ಪ್ರಪಂಚದಲ್ಲಿ ವಿಜಯಪುರ ಜಿಲ್ಲೆಯ ಹೆಸರು ಚಿರಸ್ಥಾಯಿಯಾಗಿಸಲಿ ಎಂದು ಶುಭ ಹಾರೈಸಿದ್ದಾರೆ.

