ಉದಯರಶ್ಮಿ ದಿನಪತ್ರಿಕೆ
ಕೊಲ್ಹಾರ: ದೇಶದ ರಾಜದಾನಿ ದೆಹಲಿ ವಿಧಾನಸಭಾ ಚುನಾವಣೆಯಲ್ಲಿ ಭಾರತೀಯ ಜನತಾ ಪಕ್ಷ ಅಧಿಕಾರದ ಚುಕ್ಕಾಣೆ ಹಿಡಿದಿರುವದು ಅತ್ಯಂತ ಹರ್ಷದಾಯಕ ದಿನವಾಗಿದೆ ಎಂದು ಮಾಜಿ ಸಚಿವ ಎಸ್ ಕೆ ಬೆಳ್ಳುಬ್ಬಿ ಹೇಳಿದರು.
ಬಿಜೆಪಿ ಪಕ್ಷ ಜಯಭೇರಿ ಗಳಿಸಿದ ಪ್ರಯುಕ್ತ ಪಟ್ಟಣದಲ್ಲಿ ಕಾರ್ಯಕರ್ತರು ಏರ್ಪಡಿಸಿದ ವಿಜಯೋತ್ಸವ ಸಮಾರಂಭದಲ್ಲಿ ಮಾತನಾಡಿದರು.
ಆಮ್ ಆದ್ಮಿ ಪಕ್ಷದ ಆಡಳಿತ ಶೈಲಿಯನ್ನು ನೋಡಿ ಬೇಸತ್ತ ದೇಹಲಿ ಜನತೆ ಈ ಭಾರಿ ಬಿಜೆಪಿ ಪಕ್ಷವನ್ನು ಬೆಂಬಲ ಕೊಡಲು ಪ್ರಧಾನಿ ನರೇಂದ್ರ ಮೋದಿಯವರ ದಕ್ಷ ಪ್ರಾಮಾಣಿಕ ಆಡಳಿತವೇ ಕಾರಣ ಜನಪರವಾದ ಬಡವರ ದೀನದಲಿತರ ಸರ್ವಜನರ ಏಳ್ಗೆಗಾಗಿ ಬಿಜೆಪಿ ಪಕ್ಷ ಶ್ರಮಿಸುತ್ತದೆ ಎಂದರು.
ಪಟಾಕಿ ಸಿಡಿಸಿ ಪರಸ್ಪರ ಸಿಹಿ ಹಂಚಿಕೆ ಮಾಡಿಕೊಂಡು ಸಂಭ್ರಮ ಆಚರಣೆ ಮಾಡಿದರು.
ಈ ಸಂದರ್ಭದಲ್ಲಿ ಚಂದ್ರಶೇಖರಯ್ಯ ಗಣಕುಮಾರ, ಪಟ್ಟಣ ಪಂಚಾಯತ ಸದ್ಯಸ್ಯರಾದ ಅಪ್ಪಶಿ ಮಟ್ಟಿಹಾಳ ಬಾಬು ಭಜಂತ್ರಿ ಕಲ್ಲಪ್ಪ ಸೂನ್ನದ ಈರಯ್ಯ ಮಠಪತಿ ಸಗರೆಪ್ಪ ಮುರನಾಳ ಸಭಾಷ ಭಜಂತ್ರಿ ಸೋಮಯ್ಯ ಮಠ ಪುಂಡಲೀಕ ಬಾಟಿ ಅನೇಕ ಕಾರ್ಯಕರ್ತರು ಉಪಸ್ಥಿತರಿದ್ದರು.

