ಉದಯರಶ್ಮಿ ದಿನಪತ್ರಿಕೆ
ಕರ್ನಾಟಕ ಲಲಿತಕಲಾ ಅಕಾಡೆಮಿಯ ವತಿಯಿಂದ ವಿಜಯಪುರದಲ್ಲಿ ಹಲವಾರು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಿದೆ. ಅಂತಹದರಲ್ಲಿ “ನಿಮ್ಮೊಂದಿಗೆ ನಾವು” ಕಾರ್ಯಕ್ರಮವು ಒಂದು ವಿಶೇಷ.
2024/25 ನೇ ಸಾಲಿನಲ್ಲಿ ಇದೇ ಪ್ರಥಮ ಬಾರಿಗೆ ಪ್ರೌಢಶಾಲಾ ವಿಭಾಗದ ಮಕ್ಕಳಿಗಾಗಿ ಚಿತ್ರಕಲಾ ಶಿಬಿರವನ್ನು ದಿನಾಂಕ 10 ಫೆಬ್ರವರಿ 2025 ಸೋಮವಾರ ಬೆಳಿಗ್ಗೆ 11-00 ರಿಂದ ಸಂಜೆ 5-00 ರ ವರೆಗೆ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ.
ಈ ಕಾರ್ಯಕ್ರಮದ ಮುಖ್ಯ ಉದ್ದೇಶವೇನೆಂದರೆ, ಕಲೆಯನ್ನು ಜನಪರವಾಗಿಸಬೇಕು, ಜನರಲ್ಲಿ ಕಲೆಯ ಬಗ್ಗೆ ತಿಳುವಳಿಕೆ ಮೂಡಿಸಬೇಕು, ಕಲಾಭಿಮಾನಿಗಳ ದೊಡ್ಡ ಸಮೂಹ ಸೃಷ್ಟಿಯಾಗಬೇಕೆನ್ನುವುದೇ ನಮ್ಮ ಆಶಯ.
ಈ ಕಾರ್ಯಕ್ರಮದಲ್ಲಿ ಕಲಾವಿದರ ಚಿತ್ರ ಪ್ರದರ್ಶನವೂ ಇರುತ್ತದೆ. ಕಲಾವಿದರು ರಚಿಸಿದ ಕಲಾಕೃತಿಗಳನ್ನು ನೋಡಿದ ಮಕ್ಕಳ ಮನಸ್ಸಿನ ಆಲೋಚನಾ ಲಹರಿ ವಿಸ್ತಾರವಾಗುವುದಂತೂ ಖಂಡಿತ. ಈ ಕಾರ್ಯಕ್ರಮದಲ್ಲಿ ಮತ್ತೊಂದು ವಿಶೇಷವೆಂದರೆ “ಪ್ರಾತ್ಯಕ್ಷಿಕೆ” ಮತ್ತು “ಉಪನ್ಯಾಸ” ನೀಡಲು ನಮ್ಮ ಕಲಾವಿದರು ಜೊತೆಗಿರುತ್ತಾರೆ. ಚಿತ್ರರಚನೆಯ ಕ್ರಮವನ್ನು ಬಣ್ಣ ಬಳಸುವ ವಿಧಾನವನ್ನು ಮಕ್ಕಳಿಗೆ ತಿಳಿಸಿ ಕೊಡುತ್ತಾರೆ. ಮಕ್ಕಳು ಅವರೊಂದಿಗೆ ಮುಕ್ತವಾಗಿ ಚರ್ಚಿಸಬಹುದು. “ನಿಮ್ಮೊಂದಿಗೆ ನಾವು” ಒಂದು ವಿಶಿಷ್ಟ ಪ್ರಯೋಗವೆಂದರೆ, ಈ ಕಾರ್ಯಕ್ರಮದಲ್ಲಿ, ಕಲಾವಿದರು, ಕಲಾಭಿಮಾನಿಗಳು, ಕಲಾ ವಿದ್ಯಾರ್ಥಿಗಳು,ಕಲಾಪೋಷಕರು ಮಕ್ಕಳನೆಲ್ಲ ಒಟ್ಟಾಗಿ ಸೇರಿಸಿ “ಕಲಾ ಸಂಭ್ರಮ” ವನ್ನು ಆಚರಿಸಬೇಕೆನ್ನುವುದೇ ನಮ್ಮ ಆಸೆ. ಚಿತ್ರಕಲೆಯಲ್ಲಿ ಆಸಕ್ತಿ ಉಳ್ಳ ಪ್ರತಿ ಶಾಲೆಗೆ ಐದು ಮಕ್ಕಳಂತೆ ಒಟ್ಟು 50 ಜನ ಮಕ್ಕಳಿಗಾಗಿ ಶಿಬಿರವನ್ನು ಆಯೋಜಿಸಿದ್ದೇವೆ. ಶ್ರೀಮತಿ.ಬಿ.ಕೆ.ಶ್ರೀದೇವಿ ಅಕ್ಕನವರು, ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರಿ ವಿಶ್ವವಿದ್ಯಾಲಯ ವಿಜಯಪುರ ಇವರು ಕಾರ್ಯಕ್ರಮದ ಉದ್ಘಾಟನೆ ನೆರವೇರಿಸಲಿದ್ದಾರೆ.
ಪ ಸ ಕುಮಾರ್ (ಅಧ್ಯಕ್ಷರು) ಕರ್ನಾಟಕ ಲಲಿತಕಲಾ ಅಕಾಡೆಮಿ ಬೆಂಗಳೂರು ಇವರು ಅಧ್ಯಕ್ಷತೆಯನ್ನು ವಹಿಸಲಿದ್ದಾರೆ. ಮಲ್ಲಿಕಾರ್ಜುನ್ ಭಜಂತ್ರಿ (ಉಪ ನಿರ್ದೇಶಕರು) ಪ್ರವಾಸೋದ್ಯಮ ಇಲಾಖೆ ವಿಜಯಪುರ, ಸಂತೋಷ್ ಭೋವಿ (ಸಹಾಯಕ ನಿರ್ದೇಶಕರು) ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವಿಜಯಪುರ. ಹಾಸಿಂಪೀರ ವಾಲಿಕಾರ (ಜಿಲ್ಲಾಧ್ಯಕ್ಷರು) ಕನ್ನಡ ಸಾಹಿತ್ಯ ಪರಿಷತ್ ವಿಜಯಪುರ. ಶ್ರೀಮತಿ ದಾಕ್ಷಾಯಿಣಿ ಹುಡೆದ (ಸದಸ್ಯರು) ಕನ್ನಡ ಪ್ರಾಧಿಕಾರ ಬೆಂಗಳೂರು. ಶ್ರೀಮತಿ ಲಲಿತಾ ಬಳಗಾನೂರ (ಸದಸ್ಯರು) ಶ್ರೀ ರಾಜರಾಜೇಶ್ವರಿ ಮಹಿಳಾ ಕಲಾಸಂಘ ವಿಜಯಪುರ ಇವರು ಮುಖ್ಯ ಅತಿಥಿಗಳಾಗಿ ಆಗಮಿಸಲಿದ್ದಾರೆ. ಆನಂದ್ ಝಂಡೆ ಚಿತ್ರಕಲಾವಿದರು ಪ್ರತ್ಯಕ್ಷಿಕೆ ನೀಡಲಿದ್ದಾರೆ. ಬಸವರಾಜ್ ಪಾಟೀಲ ಚಿತ್ರ ಕಲಾವಿದರು ಕಲಾ ವಿಮರ್ಶೆ ಮಾಡಲಿದ್ದಾರೆ. ನಗರದ ಕಲಾವಿದರು, ಕಲಾಸಕ್ತರು, ಕಲಾವಿಧ್ಯಾರ್ಥಿಗಳು, ಕಲಾಪೋಷಕರು ಈ ಕಾರ್ಯಕ್ರಮಕ್ಕೆ ಆಗಮಿಸಿ ಇದರ ಸದುಪಯೋಗ ಪಡೆದುಕೊಳ್ಳಬೇಕೆಂದು ಶ್ರೀಮತಿ ರಾಜೇಶ್ವರಿ ಮೋಪಗಾರ (ಸದಸ್ಯರು) ಕರ್ನಾಟಕ ಲಲಿತಕಲಾ ಅಕಾಡೆಮಿ ಇವರು ಪ್ರಕಟಣೆಯ ಮೂಲಕ ತಿಳಿಸಿದ್ದಾರೆ.

