ರಸ್ತೆ ಅಭಿವೃದ್ಧಿ, ಬೀದಿ ದೀಪಗಳ ಅಳವಡಿಕೆಗೆ ರೂ.6.40 ಕೋಟಿ ಅನುದಾನ ಮಂಜೂರು
ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ಲೋಕೋಪಯೋಗಿ ಇಲಾಖೆಯ ಅಪೇಂಡಿಕ್ಸ್-ಇ ಯೋಜನೆಯಡಿ ನಗರದಲ್ಲಿ ರಸ್ತೆ ಅಭಿವೃದ್ಧಿ, ರಸ್ತೆ ಅಗಲಿಕರಣ ಹಾಗೂ ಬೀದಿ ದೀಪಗಳ ಅಳವಡಿಕೆ ಕಾಮಗಾರಿಗಾಗಿ ಸಲ್ಲಿಸಲಾಗಿದ್ದ ರೂ.7.70 ಕೋಟಿ ಅನುದಾನದ ಪೈಕಿ, ರೂ.6.40 ಕೋಟಿ ಅನುದಾನ ಮಂಜೂರಿಸಿ, ಟೆಂಡರ್ ಕರೆಯಲಾಗಿದ್ದು, ಶೀಘ್ರದಲ್ಲೇ ಭೂಮಿಪೂಜೆ ನೆರವೇರಿಸಿ ಕಾಮಗಾರಿ ಅನುಷ್ಠಾನಗೊಳಿಸಲಾಗುವುದು ಎಂದು ನಗರ ಶಾಸಕ ಬಸನಗೌಡ ಪಾಟೀಲ ಯತ್ನಾಳ ರವರು ತಿಳಿಸಿದ್ದಾರೆ.
ಈ ಕುರಿತು ಪತ್ರಿಕಾ ಪ್ರಕಟಣೆ ನೀಡಿರುವ ಅವರು, 1) ರೂ.1 ಕೋಟಿ ಅನುದಾನದಲ್ಲಿ ನಗರದ ಸಹಸ್ರಫಣಿ 1008 ಪಾರ್ಶ್ವನಾಥ ವೃತ್ತದ ಹತ್ತಿರದ ರಸ್ತೆ ಅಗಲಿಕರಣ ಹಾಗೂ ಚರಂಡಿ ಅಭಿವೃದ್ಧಿ ಪಡಿಸುವುದು, 2) ರೂ.1 ಕೋಟಿ ಅನುದಾನದಲ್ಲಿ ಗೋದಾವರಿ ಹೋಟೆಲ್ ದಿಂದ ಜಿಲ್ಲಾ ಆಸ್ಪತ್ರೆಯ ವರೆಗೆ ಮುಖ್ಯ ರಸ್ತೆಯ ಸಮಾಂತರ ರಸ್ತೆ ಅಭಿವೃದ್ಧಿ, 3) ರೂ.60 ಲಕ್ಷ ಅನುದಾನದಲ್ಲಿ ನಗರಾಭಿವೃದ್ಧಿ ಪ್ರಾಧಿಕಾರ ಕಚೇರಿಯಿಂದ ದೇವರಾಜ ಅರಸು ವೃತ್ತದ ಮೂಲಕ ಸರ್ದಾರ ವಲ್ಲಭಬಾಯಿ ಪಟೇಲ್ ಮಾರ್ಗದ ವರೆಗೆ ಬೀದಿ ದೀಪಗಳ ಅಳವಡಿಕೆ, 4) ರೂ.1 ಕೋಟಿ ಅನುದಾನದಲ್ಲಿ ವಾ.ನಂ.29ರ ವಿಶ್ವೇಶ್ವರಯ್ಯ ವೃತ್ತದಿಂದ ಉತ್ತರಾಧಿ ಮಠದ ಮೂಲಕ ಅಭಿವೃದ್ಧಿ ನಗರದ ರಸ್ತೆ ಅಭಿವೃದ್ಧಿ, 5) ರೂ.1 ಕೋಟಿ ಅನುದಾನದಲ್ಲಿ ಆದರ್ಶ ನಗರದಿಂದ ಶಾಂತಿನಿಕೇತನ ಶಾಲೆಯ ಮೂಲಕ ಮುಗಳಖೋಡ ಮಠಕ್ಕೆ ಕೂಡುವ ರಸ್ತೆ ಅಭಿವೃದ್ಧಿ, 6) ರೂ.1 ಕೋಟಿ ಅನುದಾನದಲ್ಲಿ ವಾ.ನಂ.35ರ ಕೆ.ಎಸ್.ಆರ್.ಟಿ.ಸಿ ಕಾಲೊನಿಯ ಮುಖ್ಯ ರಸ್ತೆ ಹಾಗೂ ಆಂತರಿಕ ರಸ್ತೆಗಳ ಮರು ದಾಂಬರೀಕರಣ, 7) ರೂ.80 ಲಕ್ಷ ಅನುದಾನದಲ್ಲಿ ಸಹಸ್ರಫಣಿ 1008 ಪಾರ್ಶ್ವನಾಥ ಮಾರ್ಗದಿಂದ ಸಂದೀಪಿನಿ ಶಾಲೆ ಮೂಲಕ ವಿ.ಟಿ ಬಡಿಗೇರ ಮನೆಯ ವರೆಗೆ ಮರು ಡಾಂಬರೀಕರಣ ಕಾಮಗಾರಿಗೆ ಶೀಘ್ರದಲ್ಲೇ ಭೂಮಿಪೂಜೆ ನೆರವೇರಿಸಿ ಅನುಷ್ಠಾನಗೊಳಿಸಲಾಗುವುದು. 8) ಇನ್ನೂಳಿದ ರೂ.1.30 ಕೋಟಿ ಅನುದಾನದಲ್ಲಿ ವಾ.ನಂ.35ರ ಮಹಾತ್ಮ ಗಾಂಧಿ ಕಾಲೊನಿಯ ಮುಖ್ಯ ರಸ್ತೆ ಹಾಗೂ ಆಂತರಿಕ ರಸ್ತೆಗಳ ಮರುಡಾಂಬರೀಕರಣ ಕಾಮಗಾರಿ ಕೂಡ ಕೈಗೊಳ್ಳಲಾಗುವುದು ಎಂದು ತಿಳಿಸಿದ್ದಾರೆ.

