Close Menu
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ

Subscribe to Updates

Get the latest creative news from FooBar about art, design and business.

What's Hot

ವೈದ್ಯರು & ಅರೇ ವೈದ್ಯಕೀಯ ಹುದ್ದೆ ನೇಮಕಾತಿಗೆ ನೇರ ಸಂದರ್ಶನಕ್ಕೆ ಆಹ್ವಾನ

ನಾವೆಲ್ಲರೂ ಸೇರಿ ಕನ್ನಡ ಭಾಷೆ ಬೆಳವಣಿಗೆಗೆ ಶ್ರಮಿಸೋಣ

ಪಾಲಕರೆ ನಿಮ್ಮಮಕ್ಕಳಿಗೆ ಹೆದರಿ

Facebook X (Twitter) Instagram
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ
Facebook X (Twitter) Instagram YouTube WhatsApp
udayarashminews.comudayarashminews.com
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ
udayarashminews.comudayarashminews.com
Home»(ರಾಜ್ಯ ) ಜಿಲ್ಲೆ»ಮೀಸಲಾತಿಗಾಗಿ ಕೈಗೊಂಡ ಪಾದಯಾತ್ರೆ ಫಲ ನೀಡಿದೆ :ಸ್ವಾಮೀಜಿ
(ರಾಜ್ಯ ) ಜಿಲ್ಲೆ

ಮೀಸಲಾತಿಗಾಗಿ ಕೈಗೊಂಡ ಪಾದಯಾತ್ರೆ ಫಲ ನೀಡಿದೆ :ಸ್ವಾಮೀಜಿ

By Updated:No Comments2 Mins Read
Facebook Twitter Pinterest LinkedIn Telegram WhatsApp
Share
Facebook Twitter LinkedIn Email Telegram WhatsApp

ಇಂಡಿ: ಲಿಂಗಾಯತ ಪಂಚಮಸಾಲಿ ಸಮಾಜಕ್ಕೆ ಮೀಸಲಾತಿ ಒದಗಿಸಿಕೊಡುವದಕ್ಕಾಗಿ ಕೂಡಲಸಂಗಮದಿAದ ಬೆಂಗಳೂರಿನವರೆಗೆ ಸುಮಾರು 700 ಕಿಲೋ ಮೀಟರ್ ಮಾಡಿದ ಪಾದಯಾತ್ರೆ ಫಲ ನೀಡಿದೆ ಎಂದು ಲಿಂಗಾಯತ ಪಂಚಮಸಾಲಿ ಸಮಾಜದ ಕೂಡಲ ಸಂಗಮ ಲಿಂಗಾಯತ ಪಂಚಮಸಾಲಿ ಪೀಠದ ಪ್ರಥಮ ಪೀಠಾಧಿಪತಿ ಬಸವಜಯ ಮೃತ್ಯುಂಜಯ ಶ್ರೀಗಳು ಅಭಿಪ್ರಾಯಪಟ್ಟರು.
ಅವರು ಬುಧವಾರ ಸಾಯಂಕಾಲ ಇಂಡಿ ಪಟ್ಟಣದಲ್ಲಿ ಸಮಾಜದ ಮುಖಂಡರು ಏರ್ಪಡಿಸಿದ್ದ ಅಭಿನಂದನಾ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದರು.
1994 ರಲ್ಲಿ ನಡೆದ ಪಂಚಮಸಾಲಿ ಸಮಾರಂಭದಲ್ಲಿ ಸಮಾಜಕ್ಕೆ ಮೀಸಲಾತಿ ಒದಗಿಸಿಕೊಡಬೇಕೆಂದು ಆಗ್ರಹಿಸಲಾಗಿತ್ತು. ಅಂದಿನಿAದ ಇಂದಿನವರೆಗೆ ಹೋರಾಟ ಮಾಡುತ್ತಲೇ ಬಂದಿದ್ದೇವೆ. ಆದರೆ ಕಳೆದ 2 ವರ್ಷಗಳಿಂದ ನಡೆದ ಹೋರಾಟ ತೀವ್ರ ಸ್ವರೂಪ ತಾಳಿತ್ತು. ಇದಕ್ಕೆ ವಿಜಯಾನಂದ ಕಾಶಪ್ಪನವರ, ಬಸನಗೌಡ ಪಾಟೀಲ, ವಿನಯ ಕುಲಕರ್ಣಿ, ಡಾ, ಸಾರ್ವಬೌಮ ಬಗಲಿ, ರವಿಕಾಂತ ಪಾಟೀಲ ಮುಂತಾದವರ ಸಹಕಾರದೊಂದಿಗೆ ಜನೇವರಿ 14 ರಿಂದ ಕೈಕೊಂಡಿರುವ ಪಾದಯಾತ್ರೆ ಮೊದಲು ಕೇವಲ 10 ಸಾವಿರ ಜನರಿಂದ ಕೂಡಿದ್ದು, ಬೆಂಗಳೂರು ತಲುಪುವದರೊಳಗಾಗಿ 10 ಲಕ್ಷಕ್ಕೆ ಮುಟ್ಟಿರುವದು ಒಂದು ಇತಿಹಾಸ ಎಂದರು.
ಬೆAಗಳೂರಿನಲ್ಲಿ ನಡೆದ ಪಂಚಮಸಾಲಿ ಸಮಾವೇಶ ಕಂಡ ಸರ್ಕಾರ ಬೆಚ್ಚಿ ಬಿದ್ದು ನಮಗೆ ನ್ಯಾಯ ಒದಗಿಸಿಕೊಟ್ಟಿದೆ. ನಮ್ಮ ಹೋರಾಟವನ್ನು ಕಂಡ ಸರ್ಕಾರ ಕೊನೆಗೆ 2ಡಿ ಹೊಸ ಮೀಸಲಾತಿ ಸೃಷ್ಠಿಸಿ ನಮಗೆ ಮೀಸಲಾತಿ ನೀಡಿದೆ. ಈ ಮೀಸಲಾತಿಯ ಜಯ ಮೊದಲನೇ ಘಟ್ಟ ಎಂದ ಅವರು ಮುಂದಿನ ದಿನಗಳಲ್ಲಿ ಕೇಂದ್ರ ಸರ್ಕಾರದಿಂದ ಒಬಿಸಿ ಪಟ್ಟಿಗೆ ಸೇರಿಸುವವರೆಗೆ ನಮ್ಮ ಹೋರಾಟ ಮುಂದುವರೆಯುತ್ತದೆ ಎಂದು ಘೋಷಣೆ ಮಾಡಿದರು.
ಈ ಮೀಸಲಾತಿಯಲ್ಲಿ ನಾವು ನಮ್ಮ ಜೊತೆಗೆ ಅನಾಥ ಮಕ್ಕಳನ್ನೊಳಗೊಂಡು ಇನ್ನಿತರ ಲಿಂಗಾಯತ ಒಳ ಪಂಗಡಗಳನ್ನೂ ಕೂಡಾ ಸೇರಿಸಿಕೊಂಡಿದ್ದೇವೆ. ಇದು ನಮಗೆ ತೃಪ್ತಿ ತಂದಿದೆ ಎಂದರು.
ಪAಚಮಸಾಲಿ ಸಮಾಜದ ಮೂಲ ಕಸಬು ಕೃಷಿಯಾಗಿದ್ದು, ನಾಡಿನ ಎಲ್ಲಾ ಜನತೆಗೆ ಆಹಾರ ನೀಡುವ ಸಮಾಜವಾಗಿದೆ. 2ಡಿ ಮೀಸಲಾತಿಯಿಂದ ನಮಗೆ ಹೊಟ್ಟೆ ತುಂಬ ಊಟ ನೀಡದಿದ್ದರೂ ಕೂಡಾ ಹಸಿವು ನೀಗಿಸುವಷ್ಟು ಸರ್ಕಾರ ಸಮಾದಾನ ನೀಡಿದೆ. ಕೇಂದ್ರ ಸರ್ಕಾರದ ಚುನಾವಣೆ ಇನ್ನೂ ವರ್ಷವಿದೆ. ಅಷ್ಟರೊಳಗೆ ಪ್ರಧಾನ ಮಂತ್ರಿಗಳ ಮನ ಒಲಿಸಿ ನಮ್ಮ ಸಮಾಜವನ್ನು ಅತೀ ಹಿಂದುಳಿದ ಮೀಸಲಾತಿಯಲ್ಲಿ ಸೇರಿಸಲು ಹೋರಾಟ ಮುಂದುವರೆಯುತ್ತದೆ. ಅದಕ್ಕೆಲ್ಲಾ ಸಮಾಜ ಬಾಂಧವರು ಸನ್ನದ್ದರಾಗಬೇಕು,ಸಂಘಟಿತರಾಗಬೇಕು, ಹೋರಟಕ್ಕೆ ಕರೆ ಕೊಟ್ಟ ತಕ್ಷಣವೇ ಸಮಾಜದ ಹೋರಾಟದಲ್ಲಿ ಭಾಗವಹಿಸಬೇಕು ಎಂದರು.
ಮಾಜಿ ಶಾಸಕ ಡಾ. ಸಾರ್ವಭೌಮ ಬಗಲಿ ಮಾತನಾಡಿ, ಲಿಂಗಾಯತ ಪಂಚಮಸಾಲಿ ಸಮಾಜವನ್ನು ಬಸವಜಯ ಮೃತ್ಯುಂಜಯ ಶ್ರೀಗಳು ಗಟ್ಟಿಯಾಗಿ ಸಂಘಟಿಸಿದ್ದಾರೆ. ಅವರ ಸಂಘಟನೆಯ ಫಲದಿಂದ ನಮಗೆ 2ಡಿ ಮೀಸಲಾತಿ ಸಿಕ್ಕಿದೆ. ಮುಂದಿನ ದಿನಗಳಲ್ಲಿ ಹೆಚ್ಚಿನ ಮೀಸಲಾತಿಗೆ ಅವರು ಹೋರಾಟ ಪ್ರಾರಂಭಿಸುತ್ತಾರೆ. ಆ ಹೋರಾಟಕ್ಕೆ ಎಲ್ಲರೂ ಬೆಂಬಲಿಸಬೇಕು ಎಂದು ಮನವಿ ಮಾಡಿದ ಅವರು ನಮ್ಮ ಸಮಾಜದಲ್ಲಿಯೇ ಕೆಲವು ಕುತಂತ್ರಿಗಳಿದ್ದಾರೆ. ಅವರು ನಮ್ಮ ಸಂಘಟನೆ ಒಡೆಯಲು ಪ್ರಯತ್ನಿಸುತ್ತಿದ್ದಾರೆ. ಅವರ ಬಗ್ಗೆ ಸಮಾಜದವರು ಎಚ್ಚರಿಕೆಯಿಂದಿರಬೇಕು. ಅವರ ಮಾತುಗಳಿಗೆ ಕಿವಿ ಕೊಡದೇ ಬಸವಜಯ ಮೃತ್ಯುಂಜಯ ಶ್ರೀಗಳು ಹೇಳುವುದನ್ನು ಮಾತ್ರ ಕೇಳಬೇಕು ಎಂದರು.
ಸಮಾಜದ ಮುಖಂಡರಾದ ಸೋಮಶೇಖರ ದೇವರ, ಅಶೋಕಗೌಡ ಬಿರಾದಾರ, ವಿ.ಹೆಚ್. ಬಿರಾದಾರ ಮಾತನಾಡಿದರು.
ವೇದಿಕೆಯಲ್ಲಿ ಎಸ್.ವೈ.ಪಾಟೀಲ, ಅನೀಲಪ್ರಸಾದ ಏಳಗಿ, ಬಾಳು ಮುಳಜಿ, ಬುದ್ದುಗೌಡ ಪಾಟೀಲ, ಪ್ರಕಾಶ ಬಿರಾದಾರ, ರವಿ ಖಾನಾಪೂರ, ಸಂಕೇತ ಬಗಲಿ, ಡಿ.ಎಸ್.ಪಾಟೀಲ, ಉದ್ದಿಮೆದಾರ ಎಸ್.ಬಿ.ಬಿರಾದಾರ, ಬೌರಮ್ಮ ಮುಳಜಿ ಇದ್ದರು. ಲಿಂಗಾಯತ ಪಂಚಮಸಾಲಿ ಸಮಾಜದ ತಾಲ್ಲೂಕು ಅಧ್ಯಕ್ಷ ವಿ.ಎಚ್.ಬಿರಾದಾರ ಸ್ವಾಗತಿಸಿದರು. ಬಸವರಾಜ ಮುಜಗೊಂಡ ವಂದಿಸಿದರು

ಹೋರಾಟಕ್ಕೆ ರಾಜಕೀಯ ಶಕ್ತಿಯೂ ಬೇಕಾಗುತ್ತದೆ. ನಮ್ಮ ಸಮಾಜದವರು ಯಾವುದೇ ಪಕ್ಷದಲ್ಲಿ ಸ್ಪರ್ಧಿಸಿದ್ದರೂ ಇತರ ಸಮಾಜದ ಸಹಕಾರದೊಂದಿಗೆ ಅವರ ಗೆಲುವಿಗೆ ಎಲ್ಲರೂ ಶ್ರಮಿಸಬೇಕು. ಇಂಡಿಯಲ್ಲಿಯೂ ಸಮಾಜದವರಿಗೆ ಆಧ್ಯತೆ ನೀಡಿ ಎಂದು ಪರೋಕ್ಷವಾಗಿ ಕಾಸುಗೌಡ ಬಿರಾದಾರ ಅವರಿಗೆ ಬೆಂಬಲಿಸುವAತೆ ತಿಳಿಸಿದರು.

bjp indi public news
Share. Facebook Twitter Pinterest Email Telegram WhatsApp
  • Website

Related Posts

ವೈದ್ಯರು & ಅರೇ ವೈದ್ಯಕೀಯ ಹುದ್ದೆ ನೇಮಕಾತಿಗೆ ನೇರ ಸಂದರ್ಶನಕ್ಕೆ ಆಹ್ವಾನ

ನಾವೆಲ್ಲರೂ ಸೇರಿ ಕನ್ನಡ ಭಾಷೆ ಬೆಳವಣಿಗೆಗೆ ಶ್ರಮಿಸೋಣ

ಪಾಲಕರೆ ನಿಮ್ಮಮಕ್ಕಳಿಗೆ ಹೆದರಿ

ಈರುಳ್ಳಿ, ಹತ್ತಿ ಮೆಕ್ಕೆಜೋಳ ಬೆಳೆಗೆ ಬೆಂಬಲ ಬೆಲೆಗೆ ಆಗ್ರಹಿಸಿ ಮನವಿ

Add A Comment

Leave A Reply Cancel Reply

Categories
  • (ರಾಜ್ಯ ) ಜಿಲ್ಲೆ
  • Uncategorized
  • ಆರೋಗ್ಯ
  • ಇತರೆ
  • ಕಾವ್ಯರಶ್ಮಿ
  • ಚಿಂತನ
  • ದಿನಪತ್ರಿಕೆ
  • ಪುಸ್ತಕ ಪರಿಚಯ
  • ಪ್ರೇಮಲೋಕ
  • ಭಾವರಶ್ಮಿ
  • ರಾಷ್ಚ್ರ
  • ವಿಜಯಪುರ
  • ವಿದ್ಯಾರ್ಥಿ ನಿಧಿ
  • ವಿಶೇಷ ಲೇಖನ
  • ಸಾಹಿತ್ಯ
  • ಸಿನಿಮಾ
  • ಹೊತ್ತಿಗೆ ಹೊರಣ
Recent Posts
  • ವೈದ್ಯರು & ಅರೇ ವೈದ್ಯಕೀಯ ಹುದ್ದೆ ನೇಮಕಾತಿಗೆ ನೇರ ಸಂದರ್ಶನಕ್ಕೆ ಆಹ್ವಾನ
    In (ರಾಜ್ಯ ) ಜಿಲ್ಲೆ
  • ನಾವೆಲ್ಲರೂ ಸೇರಿ ಕನ್ನಡ ಭಾಷೆ ಬೆಳವಣಿಗೆಗೆ ಶ್ರಮಿಸೋಣ
    In (ರಾಜ್ಯ ) ಜಿಲ್ಲೆ
  • ಪಾಲಕರೆ ನಿಮ್ಮಮಕ್ಕಳಿಗೆ ಹೆದರಿ
    In ವಿಶೇಷ ಲೇಖನ
  • ಈರುಳ್ಳಿ, ಹತ್ತಿ ಮೆಕ್ಕೆಜೋಳ ಬೆಳೆಗೆ ಬೆಂಬಲ ಬೆಲೆಗೆ ಆಗ್ರಹಿಸಿ ಮನವಿ
    In (ರಾಜ್ಯ ) ಜಿಲ್ಲೆ
  • ಕ್ರೀಡೆಯಲ್ಲಿ ಮಕ್ಕಳ ಆರೋಗ್ಯ ಅಡಗಿದೆ :ಎಸ್.ಕೆ.ಬೆಳ್ಳುಬ್ಬಿ
    In (ರಾಜ್ಯ ) ಜಿಲ್ಲೆ
  • ಸರ್ಕಾರಿ ಮೆಡಿಕಲ್ ಕಾಲೇಜ್ ಹೋರಾಟ: ಡಿ.೧ ರಂದು ಬೃಹತ್ ಹೋರಾಟಕ್ಕೆ ಕರೆ
    In (ರಾಜ್ಯ ) ಜಿಲ್ಲೆ
  • ಹಿರಿಯರನ್ನು ಗೌರವಿಸುವುದು ಯುವಪೀಳಿಗೆ ಜವಾಬ್ದಾರಿ :ಪ್ರೊ.ಹಿರೇಮಠ
    In (ರಾಜ್ಯ ) ಜಿಲ್ಲೆ
  • ಡಾ.ಸರೋಜನಿ ಮಹಿಷಿ ವರದಿ ಜಾರಿಗೆ ಕದಂಬ ಸೈನ್ಯ ಆಗ್ರಹ
    In (ರಾಜ್ಯ ) ಜಿಲ್ಲೆ
  • ವಿದೇಶಕ್ಕೆ ಹೊರಟ ಗ್ರಾಮೀಣ ಪ್ರತಿಭೆ ಪ್ರೀತಿ ಆನೆಗುಂದಿ
    In (ರಾಜ್ಯ ) ಜಿಲ್ಲೆ
  • ನಬಿರೋಶನ್ ಪ್ರಕಾಶನದಿಂದ ಮಹಾಂತೇಶ ಅವರಿಗೆ ನುಡಿ ನಮನ
    In (ರಾಜ್ಯ ) ಜಿಲ್ಲೆ
Editors Picks
Top Reviews
udayarashminews.com
Facebook X (Twitter) Instagram Pinterest Vimeo YouTube
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ
© 2025 udayarashminews.com. Designed by udayarashmi news .

Type above and press Enter to search. Press Esc to cancel.