ಉದಯರಶ್ಮಿ ದಿನಪತ್ರಿಕೆ
ಸಿಂದಗಿ: ಎಲ್ಲಕ್ಕಿಂತ ದೊಡ್ಡ ಸಂಪತ್ತು ಭಕ್ತಿಯಲ್ಲಿದೆ. ಭಕ್ತಿ ಎಂಬುವುದು ಪರಮ ಪವಿತ್ರವಾದ ಪ್ರೇಮವಾಗಿದೆ. ಕಾರಣ ಎಲ್ಲರೂ ಗುರುವಿನಲ್ಲಿ ಶ್ರದ್ಧಾ ಭಕ್ತಿ ಇಟ್ಟರೆ ಜೀವನ ಪ್ರಾಪ್ತಿಯಾಗುತ್ತದೆ ಎಂದು ದಾರವಾಡ ಬಸವಾನಂದ ಸ್ವಾಮಿಗಳು ಹೇಳಿದರು.
ತಾಲೂಕಿನ ಆಸಂಗಿಹಾಳ ಗ್ರಾಮದ ಆರೂಢಮಠದಲ್ಲಿ ಸದ್ಗುರು ಆರೂಢ ಸಂಗನಬಸವೇಶ್ವರ ಶಿವಯೋಗಿಗಳ ಜಾತ್ರಾ ಮಹೋತ್ಸವದ ನಿಮಿತ್ಯ ಹಮ್ಮಿಕೊಂಡ ಮಹಾಶಿವಶರಣೆ ಹೆಮರೆಡ್ಡಿ ಮಲ್ಲಮ್ಮ ಮಹಾ ಪುರಾಣದಲ್ಲಿ ಮಾತನಾಡಿದ ಅವರು, ಶ್ರೀಮಠವು ಬಡವರ ಮಠವಾಗಿದ್ದು, ಗ್ರಾಮೀಣ ಭಾಗದ ಜನರಿಗೆ ಆದ್ಯಾತ್ಮಿಕ ಜ್ಞಾನವನ್ನು ಉಣಬಡುಸುವ ನಿಟ್ಟಿನಲ್ಲಿ ಇಂತಹ ಸಂತ ಮಹಾಂತರ ಶರಣೆಯರ ಪುರಾಣ ಪ್ರವಚನ ಸಂತ್ಸಂಗಗಳನ್ನು ಹಮ್ಮಿಕೊಂಡಿದ್ದು ಶ್ಲಾಘನೀಯ. ಶರಣರ, ಸಂತರ, ಮಹಾಂತರ ಜೀವನ ಚರಿತ್ರೆಗಳನ್ನು ಅರಿತುಕೊಂಡು ಅವರ ತತ್ವಾದರ್ಶಗಳನ್ನು ಜೀವನದಲ್ಲಿ ಅಳವಡಿಕೊಳ್ಳಬೇಕು ಎಂದರು.
ಈ ವೇಳೆ ಆರೂಢಾಶ್ರಮ ಶ್ರೀ ಸಮರ್ಥ ಸದ್ಗುರು ಶಂಕರಾನಂದ ಮಹಾರಾಜರು ಮಾತನಾಡಿ, ಶುಕ್ರವಾರ ದಿನಾಂಕ ೭-೦೨-೨೦೨೫ ರಂದು ಬೆಳಗ್ಗೆ ಕತೃ ಗದ್ದುಗೆಗೆ ಮಹಾರುದ್ರಾಭಿಷೇಕ ಹಾಗೂ ಸಹಸ್ರ ಬಿಲ್ವಾರ್ಚನೆ ಶ್ರೀ ವೇ ಸಂಗಯ್ಯ ಹಿರೇಮಠ, ಆಸಂಗಿಹಾಳ ಇವರಿಂದ ಜರುಗುವುದು. ನಂತರ ಶ್ರೀಭೋಗ ಅಂಗೇಶ್ವರ ಮತ್ತು ಉಭಯ ಜಟಂಗೇಶ್ವರರ ಪಲ್ಲಕ್ಕಿಗಳನ್ನು ಆಸಂಗಿಹಾಳ ಗ್ರಾಮದಿಂದ ಸಕಲ ವಾದ್ಯ ವೈಭವಗಳದೊಂದಿಗೆ ಶ್ರೀ ಮಠಕ್ಕೆ ಬರಮಾಡಿಕೊಳ್ಳುವದು. ಮಧ್ಯಾಹ್ನ ೧:೩೫ಗಂಟೆಯಿಂದ ಆಗಮಿಸಿದ ಪೂಜ್ಯರ ಸಾನಿಧ್ಯದಲ್ಲಿ ಹಾಗೂ ಜನನಾಯಕರ ನೇತೃತ್ವದಲ್ಲಿ ಧರ್ಮಸಭೆ ಹಾಗೂ ಸಾಮೂಹಿಕ ವಿವಾಹ ಜರುಗುವದು. ಸಾಯಂಕಾಲ ೫:೦೦ ಗಂಟೆಗೆ ಗ್ರಾಮ ದೇವರ ಪಲ್ಲಕ್ಕಿಗಳು ಪುರ ಪ್ರವೇಶಿಸುವುದರೊಂದಿಗೆ ಮಹಾಮಂಗಲವಾಗುವುದು. . ಕಾರಣ ಭಕ್ತಾಧಿಗಳು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳುವಂತೆ ಕರೆ ನೀಡಿದರು.
ನೇತೃತ್ವವನ್ನು ಆರೂಢ ಆಶ್ರಮ ಪೀಠಾಧಿಪತಿ ಶ್ರೀ ಸಮರ್ಥ ಸದ್ಗುರು ವೈಜನಾಥ ಮಹಾರಾಜರು ವಹಿಸಿದ್ದರು. ತಾಲೂಕಾ ಪಂಚಮಸಾಲಿ ಸಮಾಜದ ಅಧ್ಯಕ್ಷ ಎಂ.ಎಂ.ಹಂಗರಗಿ, ಟಿಎಸ್ಪಿಎಸ್ ಮಂಡಳಿ ನಿರ್ದೇಶಕ ವ್ಹಿ.ಬಿ.ಕುರುಡೆ, ಸಂಗನಗೌಡ ಪಾಟೀಲ ಅಗಸಬಾಳ, ಕಸಾಪ ಅಧ್ಯಕ್ಷ ಶಿವಾನಂದ ಬಡಾನೂರ, ಪಂಡಿತ ಯಂಪೂರೆ, ಅಮೀರಹ್ಮಜಾ ಮುಜಾವರ, ಪುರಾಣ ಪ್ರವಚನಕಾರ ಮುಧೋಳ ರನ್ನ ಬೆಳಗಲ ಶ್ರೀ ಸಿದ್ಧಾರೂಢ ಮಠದ ಶಿವಯೋಗಾಶ್ರಮ ಪೂಜ್ಯ ಶ್ರೀ ಸಿದ್ಧರಾಮ ಶಿವಯೋಗಿಗಳು, ಸಂಗೀತಗಾರ ಕಲ್ಯಾಣಕುಮಾರ ಗವಾಯಿಗಳು, ಕಾರಭೋಸಗಾ ಪ್ರಭುಕುಮಾರ ಮದರಿ, ತಬಲಾವಾದಕ ಸುಭಾಸ ಚವಡಾಪೂರ, ಸಂಚಾಲಕ ಬಸಲಿಂಗಯ್ಯ ಹಿರೇಮಠ, ಈರಣ್ಣಗೌಡ ಪಾಟೀಲ ಸೇರಿದಂತೆ ಅನೇಕರಿದ್ದರು. ವಿಶ್ವನಾಥ ಹೊಡ್ಡ ಕಾರ್ಯಕ್ರಮ ನಿರ್ವಹಿಸಿದರು ನಿರೂಪಿಸಿದರು.