ಕೆ.ಆರ್.ಎಸ್.ಪಾರ್ಟಿ ರಾಜ್ಯ ಸಂಘಟನಾ ಕಾರ್ಯದರ್ಶಿ ಶಿವಾನಂದ ಯಡಹಳ್ಳಿ ಬೇಸರ
ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ಜಿಲ್ಲೆಯಲ್ಲಿ ಸಮಾಜ ಕಲ್ಯಾಣ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ, ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ, ಕ್ರೈಸ್ ವಸತಿ ನಿಲಯಗಳಲ್ಲಿ ಹಾಸ್ಟೇಲ್ & ವಸತಿ ಶಾಲಾ ಹೊರಗುತ್ತಿಗೆ ನೌಕರರ ಬೇಡಿಕೆಗಳ ಈಡೇರಿಕೆಗೆ ಅಹೋರಾತ್ರಿ ಧರಣಿಯನ್ನು ಕರ್ನಾಟಕ ರಾಜ್ಯ ಹಾಸ್ಟೇಲ್ ಮತ್ತು ವಸತಿ ಶಾಲಾ ಹೊರಗುತ್ತಿಗೆ ನೌಕರರ ಸಂಘದ ವತಿಯಿಂದ ಜಿಲ್ಲಾಧಿಕಾರಿಗಳ ಕಚೇರಿ ಎದುರುಗಡೆ ಅಹೋರಾತ್ರಿ ಧರಣಿ ಹಮ್ಮಿಕೊಂಡಿದ್ದು, ಈ ಅಹೋರಾತ್ರಿ ಹೋರಾಟವು ೧೨ ನೇ ದಿನಕ್ಕೆ ಮುಂದುವರೆದಿದೆ.
ಈ ಅಹೋರಾತ್ರಿ ಹೋರಾಟಕ್ಕೆ ಕೆ.ಆರ್.ಎಸ್.ಪಾರ್ಟಿ ರಾಜ್ಯ ಸಂಘಟನಾ ಕಾರ್ಯದರ್ಶಿ ಶಿವಾನಂದ ಯಡಹಳ್ಳಿ, ಮಾತನಾಡಿ, ಹಲವಾರು ದಿನಗಳಿಂದ ಇವರ ಬೇಡಿಕೆಗಳನ್ನು ಈಡೇರಿಸದೇ ಇರುವದು ದುರದೃಷ್ಟಕರವಾಗಿದೆ. ಪ್ರತಿಸಲವೂ ವೇತನ ಬಟವಡೆ ಮಾಡುವಂತೆ ಧರಣಿ ಕುಳಿತುಕೊಂಡು ವೇತನ ಪಡೆಯುವದು ಸದರಿ ಹಾಸ್ಟೇಲ್ ನೌಕರರಿಗೆ ಬಿಡದೇ ಬಿಡದೇ ಇರುವ ಗಂಡನನ್ನು ಕಟ್ಟಿಕೊಂಡಂತೆ ಆಗಿದೆ. ಪ್ರತಿಸಲವೂ ವೇತನ ಪಡೆಯಲು ಧರಣಿ ಕುಳಿತುಕೊಳ್ಳುವದು, ಹಲಗೆ ಹಚ್ಚಿ ಹೋರಾಟ ಮಾಡುವದು, ಅಹೋರಾತ್ರಿ ಹೊರಾಟ ಕೈಗೊಳ್ಳುವದು ಬೇಸರ ಸಂಗತಿಯಗಿದೆ. ನಿಷ್ಟೆಯಿಂದ ದುಡಿಯುವ ಕೈಗಳಿಗೆ ಸರಿಯಾಗಿ ವೇತನವನ್ನು ಬಟವಡೆ ಆಗುವಂತೆ ಸರಕಾರವು ಕ್ರಮ ವಹಿಸಬೇಕು ಎಂದು ತಮ್ಮ ಆಕ್ರೋಶವನ್ನು ವ್ಯಕ್ತಪಡಿಸಿದರು.
ಸಂಘದ ಹುಲಗಪ್ಪ ಎಚ್. ಚಲವಾದಿ, ಜಿಲ್ಲಾಧ್ಯಕ್ಷರು, ಲಕ್ಷ್ಮಣ ಮಸಳಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ, ಯಮನಪ್ಪ ಬಜಂತ್ರಿ ಜಿಲ್ಲಾ ಸಹ ಕಾರ್ಯದರ್ಶಿ, ರಾಮಚಂದ್ರ ಕೋಳಿ, ಗೋಪಾಲ ಅವದಿ, ಮೀನಾಕ್ಷಿ ತಳವಾರ, ಶಾಂತಾ ಕ್ವಾಟಿ ನೂರಜಾನ ಯಲಗಾರ, ಮಲ್ಲಿಕಾರ್ಜುನ ಚಲವಾದಿ, ಗೌರಕ್ಕ ಬೀಳೂರ, ವೈಶಾಲಿ ಸಮಗೊಂಡ, ಅರವಿಂದ ಲಮಾಣಿ, ಮರೆಪ್ಪ ಚಲವಾದಿ, ಕಮಲಾಕ್ಷಿ ದೊಡಮನಿ, ಶೈಲಾ ಉಣ್ಣಿಬಾಯಿ, ರಾಧಾಬಾಯಿ ಬಜಂತ್ರಿ, ಶಿವಯೋಗೆಪ್ಪ ದೊಡಮನಿ, ಲಕ್ಷ್ಮೀಪುತ್ರ ಕುರಮಲ್, ಸುಖನ್ಯಾ ದರ್ಗಾ, ನಿಂಗಪ್ಪ ವಾಲಿಕಾರ, ಸಂಗಮ್ಮ ಹಂಜಗಿ ಹಾಜರಿದ್ದರು.