ಉದಯರಶ್ಮಿ ದಿನಪತ್ರಿಕೆ
ಮುದ್ದೇಬಿಹಾಳ: ಸಾಧಕರನ್ನು ಸನ್ಮಾನಿಸುವದು ಸನ್ಮಾನಿಸುವವರಿಗೆ ಖುಷಿ ಕೊಟ್ಟರೆ, ಸಾಧಕರ ಜವಾಬ್ದಾರಿ ಹೆಚ್ಚಿಸುತ್ತದೆ ಎಂದು ಅಸ್ಕಿ ಫೌಂಡೇಶನ್ ಅಧ್ಯಕ್ಷ ಸಿ.ಬಿ.ಅಸ್ಕಿ ಹೇಳಿದರು.
ಪಟ್ಟಣದಲ್ಲಿ ಅಸ್ಕಿ ಫೌಂಡೇಶನ ವತಿಯಿಂದ ವಿವಿಧ ಕ್ಷೇತ್ರದಲ್ಲಿ ಸಾಧನೆಗೈದ ಸಾಧಕರನ್ನು ಸನ್ಮಾನಿಸಿ ಗೌರವಿಸುವ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಹಿರಿಯರ ಆಶೀರ್ವಾದದಿಂದ ಅಸ್ಕಿ ಫೌಂಡೇಶನ್ ಈ ಹಂತಕ್ಕೆ ಬಂದು ತಲುಪಿದೆ. ನಮಗೆ ಪಕ್ಷ ಜಾತಿ ಯಾವುದೂ ಸಂಬಂಧವಿಲ್ಲ. ತೊಂದರೆಯಲ್ಲಿದ್ದವರಿಗೆ ಸಹಾಯ ಮಾಡುವದು, ಸಾಧಕರನ್ನು ಪ್ರೋತ್ಸಾಹಿಸುವ ಕಾರ್ಯವನ್ನು ಕಳೆದ ಕೆಲವು ವರ್ಷದಿಂದ ಜಾತ್ಯಾತೀತ ಮತ್ತು ಪಕ್ಷಾತೀತವಾಗಿ ಮಾಡುತ್ತ ಬಂದಿದ್ದೇವೆ. ಮುಂದಿನ ದಿನಮಾನಗಳಲ್ಲೂ ಮಾಡುತ್ತೇವೆ ಎಂದರು.
ಸನ್ಮಾನಿತರ ಪರವಾಗಿ ತಾಲೂಕು ನೌಕರರ ಸಂಘದ ಅಧ್ಯಕ್ಷ ಅರವಿಂದ ಹೂಗಾರ ಮಾತನಾಡಿ, ಅಸ್ಕಿ ಫೌಂಡೇಶನ ಬಗ್ಗೆ ಎಷ್ಟು ವರ್ಣಿಸಿದರೂ ಕಡಿಮೆ. ನಮ್ಮ ಅಖಂಡ ತಾಲೂಕಿನಲ್ಲಿ ಸಾಕಷ್ಟು ಸಮಾಜಮುಖಿ ಕಾರ್ಯಗಳನ್ನು ಮಾಡುತ್ತ ಸಾಗುತ್ತಿದೆ. ಬರುವ ದಿನಗಳಲ್ಲಿ ಇನ್ನಷ್ಟು ಹೆಚ್ಚಿನ ಸಮಾಜ ಸೇವೆ ನೀಡುವ ಶಕ್ತಿ ಭಗವಂತ ಇವರಿಗೆ ಕರುಣಿಸಲಿ ಎಂದರು.
ಪುರಸಭೆ ಸದಸ್ಯೆ ಸಂಗಮ್ಮ ದೇವರಳ್ಳಿ, ಮುಖಂಡ ಸತೀಶ ಓಸ್ವಾಲ, ಕಸಾಪ ಅಧ್ಯಕ್ಷ ಕಾಮರಾಜ ಬಿರಾದಾರ ಮಾತನಾಡಿದರು.
ಜೆಓಸಿಸಿ ಬ್ಯಾಂಕ್ ಅಧ್ಯಕ್ಷ ಆನಂದ ಬಿರಾದಾರ, ದಿ ಕರ್ನಾಟಕ ಕೋ ಅಪ್ ಬ್ಯಾಂಕ್ ನಾಮ ನಿರ್ದೇಶಿತ ಸದಸ್ಯ ನಾಗಭೂಷಣ ನಾವದಗಿ, ರಾಜ್ಯ ಪರಿಷತ್ ಸದಸ್ಯ ವೆಂಕಟೇಶ ಅಂಬಿಗೇರ, ತಾಲೂಕು ನೌಕರರ ಸಂಘದ ಖಜಾಂಚಿ ಭರತೇಶ ಹೊಳಿ, ತಾಲೂಕು ಪರಧಾನ ಕಾರ್ಯದರ್ಶಿ ಬಿ.ಎಂ.ಸಾಗರ, ಢವಳಗಿ ಪಿಕೆಪಿಎಸ್ ಅಧ್ಯಕ್ಷ ರಾಜುಗೌಡ ಗೌಡರ, ತಂಗಡಗಿ ಪಿಕೆಪಿಎಸ್ ಅಧ್ಯಕ್ಷ ಶ್ರೀಶೈಲ ಮರೋಳ ಇವರುಗಳನ್ನು ಸನ್ಮಾನಿಸಿ ಗೌರವಿಸಲಾಯಿತು. ಪುರಸಭೆ ಅಧ್ಯಕ್ಷ ಮಹೆಬೂಬ ಗೊಳಸಂಗಿ, ಉಪಾಧ್ಯಕ್ಷೆ ಪ್ರೀತಿ ದೇಗಿನಾಳ, ಸದಸ್ಯೆ ಭಾರತಿ ಪಾಟೀಲ ಪ್ರಮುಖರಾದ ಸಂಗಣ್ಣ ಮೇಲಿನಮನಿ, ಪಿಂಟು ಸಾಲಿಮನಿ, ರಫೀಕ ಶಿರೋಳ, ಶ್ರೀಶೈಲ ಪೂಜಾರಿ, ಬಬಲು ಹುಣಚಗಿ, ಜಬ್ಬಾರ ಗೋಲಂದಾಜ, ಚಂದ್ರು ಕಲಾಲ, ರವಿ ಅಮರಣ್ಣವರ, ಹುಸೇನ ಮುಲ್ಲಾ, ಸದು ಮಠ ಸೇರಿದಂತೆ ಹಲವರು ಇದ್ದರು.
ಎಪಿಎಂಸಿ ನಿರ್ದೇಶಕ ವಾಯ್.ಎಚ್.ವಿಜಯಕರ ಪ್ರಾಸ್ತಾವಿಕವಾಗಿ ಮಾತನಾಡಿದರು. ಶ್ರೀಶೈಲ್ ಹೂಗಾರ ನಿರೂಪಿಸಿದರು.

