ಲೇಖನ
– ಭರಣಿ ನಕ್ಷತ್ರ
ನಿಡಗುಂದಿ, ವಿಜಯಪುರ ಜಿಲ್ಲೆ
ಉದಯರಶ್ಮಿ ದಿನಪತ್ರಿಕೆ
ಭಕ್ತಿ, ಆರಾಧನೆ ಅಂದರೇನು?
ಈ ಒಂದು ಪ್ರಶ್ನೆ ದೇವರಿಗೆ ಕೈ ಮುಗಿದಾಗ ಅಥವಾ
ದೇವಸ್ಥಾನದಲ್ಲಿ ಸೇವೆ ಸಲ್ಲಿಸುವಾಗ ಮೂಡುತ್ತದೆ
ಭಕ್ತಿ ಅಂದರೆ ಶಿಸ್ತು, ಶ್ರದ್ಧೆ ಸ್ನಾನ ಮಾಡಿಯೇ ದೇವರಿಗೆ ಪೂಜೆ ಮಾಡಬೇಕು ಅನ್ನೋದು ಶಿಸ್ತು, ಯಾಕೆಂದರೆ ದೇವರು ಅಂದರೆ ಭಯ ಇರುತ್ತದೆ ಶಿಸ್ತಾಗಿದ್ದು ಪೂಜೆ ಮಾಡಿದರೆ ನಮ್ಮ ಇಷ್ಟಾರ್ಥಗಳು ನೆರವೇರುತ್ತವೆ ಎಂಬ
ಭಾವನೆ ನಮ್ಮಲ್ಲಿ ಜಾಗೃತವಾಗಿದ್ದಾಗ ನಾವು ಶುಚಿಯಾಗಿ ದೇವರಲ್ಲಿ ಬೇಡ್ಕೋತೀವಿ ಶುಚಿತ್ವ ಅನ್ನೋದು ಮನಸು ದೇಹ ಎರಡಕ್ಕೂ ಸಂಬಂಧಿಸಿದೆ. ಇನ್ನು ಶ್ರದ್ಧೆ ಅಂದರೆ ಬೆಳಿಗ್ಗೆ ಸೂರ್ಯ ಮೂಡುವ ಮೊದಲೇ ಎದ್ದು ಪೂಜೆ ಮಾಡಬೇಕು ಎಂಟು ಗಂಟೆಯ ಒಳಗೆ ಮಾಡುವ ಪೂಜೆ ಶ್ರೇಷ್ಠ ಅಂತಾರೆ ನಮ್ಮ ಪೂರ್ವಿಕರು.

ಉದಾಹರಣೆ ಅಂದರೆ “ಸೂರ್ಯದೇವ”ನ ಪೂಜೆ ಮಾಡುವವರು ಎದ್ದ ಕೂಡಲೇ ಬಾಯಿಗೆ ಹನಿ ನೀರು ಕೂಡ ಹಾಕದೆ ಶುಚಿರ್ಭೂತರಾಗಿ ಸೂರ್ಯ ಹುಟ್ಟುವ ಮೊದಲೇ ಪೂರ್ವ ದಿಕ್ಕಿಗೆ ಪೂಜೆ ಮಾಡಿದರೆ ಫಲ ದೊರೆಯುತ್ತದೆ.
ಇಷ್ಟೆಲ್ಲ ಮಾಡಬೇಕಾದರೆ ಶ್ರದ್ಧೆ, ಶಿಸ್ತು ಮುಖ್ಯ. ಭಕ್ತಿಯ ಅರ್ಥ ಏನೆಂದರೆ ಆರಾಧನೆಗೆ ಶಿಸ್ತು, ಶ್ರದ್ಧೆ ತುಂಬ ಮುಖ್ಯ. ಇವೆರಡೂ ಇದ್ದಲ್ಲಿ ದೇವರು ಇರುತ್ತಾನೆ. ನಮ್ಮ ಯಾವುದೇ ಕೆಲಸಕ್ಕೆ ಜಯ ಉಂಟಾಗುವುದು ಈ ಎರಡು ಅಂಶಗಳಿಂದ. ಕಷ್ಟಪಟ್ಟರೆ ಭಗವಂತ ಒಲಿಯುತ್ತಾನೆ, ಆರಾಧನೆ ಕೂಡ ಶಕ್ತಿಯೇ ಹೌದು. ನಮ್ಮಲ್ಲಿರುವುದನ್ನೆಲ್ಲ ಆ ಭಗವಂತನಿಗೆ ಒಪ್ಪಿಸಿ ಒಂದು ಚಿಕ್ಕ ಅಣುವಲ್ಲೂ ಕೂಡ ಅವನ ರೂಪವನ್ನೇ ಕಾಣುತ್ತ ನಮ್ಮ ಇಡೀ ಬದುಕನ್ನೇ ಅವನ ಸೇವೆಗೆ ಮುಡಿಪಾಗಿಡುವುದು, ಅನುಕ್ಷಣವೂ ಅವನನ್ನೇ ನೆನೆಸುತ್ತ ಅವನಲ್ಲೇ ಲೀನವಾಗುವುದು ಆರಾಧನೆ. ಈ ಪರಿಯ ಆರಾಧಿಸುವಿಕೆ ಎಲ್ಲರಿಂದಲೂ ಅಸಾಧ್ಯ. ಅದಕ್ಕೆ ಪೂರ್ವಜನ್ಮದ ಪುಣ್ಯ ಬೇಕು, ಪಾಪಕರ್ಮಗಳಿಂದ ಮುಕ್ತರಾಗಿರಬೇಕು, ಅಂದಾಗ ಮಾತ್ರ ಆ ಭಗವಂತನ ಪೂರ್ಣ ಅನುಗ್ರಹ ಸಿಗುತ್ತದೆ.
ಆರಾಧನೆ, ಸಮರ್ಪಣೆಗೆ ಭಗವಂತ ಒಲಿದೇ ಒಲಿಯುತ್ತಾನೆ.
