ಗುತ್ತಿಗೆದಾರ ಮಲ್ಲಿಕಾರ್ಜುನಮಠ ನೇತೃತ್ವದಲ್ಲಿ ಗುತ್ತಿಗೆದಾರರು ಆಗ್ರಹಿಸಿ ಜಿಲ್ಲಾ ಆಡಳಿತಕ್ಕೆ ಮನವಿ ಸಲ್ಲಿಸಿ
ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ಕಳೆದ ಹಲವು ವರ್ಷಗಳಿಂದ ಬಾಕಿ ಇರಿಸಿಕೊಂಡಿರುವ ಬಿಲ್ ತಕ್ಷಣ ಪಾವತಿಸಬೇಕು ಇಲ್ಲವಾದಲ್ಲಿ ನಮಗೆ ದಯಾಮರಣ ಅನುಮತಿ ನೀಡಬೇಕೆಂದು ಒತ್ತಾಯಿಸಿ ಗುತ್ತಿಗೆದಾರ ಎ. ಜಿ. ಮಲ್ಲಿಕಾರ್ಜುನಮಠ ನೇತೃತ್ವದಲ್ಲಿ ಗುತ್ತಿಗೆದಾರರು ಜಿಲ್ಲಾ ಆಡಳಿತಕ್ಕೆ ಮನವಿ ಸಲ್ಲಿಸಿದರು.
ಕಳೆದ ಹಲವು ವರ್ಷಗಳ ಹಿಂದೆ ಕಾಮಗಾರಿ ಕೈಗೆತ್ತಿಕೊಂಡು ಕೆಲಸ ಪೂರ್ಣಗೊಳಿಸಿದರು ಬಿಲ್ ಪಾವತಿಸದೆ ಸತಾಯಿಸುತ್ತಿದ್ದಾರೆ. ಸರಕಾರದಿಂದ ಹಣ ಬಿಡುಗಡೆಗೊಳಿಸಿದರೂ ಇಲಾಖೆ ಅಧಿಕಾರಿಗಳು ಬಿಲ್ ಪಾವತಿಸಲು ಮೀನ್ ಮೇಷ ಎಣಿಸುತ್ತಿದ್ದಾರೆ. ಅಧಿಕಾರಿಗಳ ಈ ನಡೆಯಿಂದ ಗುತ್ತಿಗೆದಾರರ ಜೀವನ ನಿರ್ವಹಣೆ ಸಂಕಷ್ಟಕ್ಕೆ ಸಿಲುಕಿದೆ. ಮಕ್ಕಳ ವಿದ್ಯಾಭ್ಯಾಸ ಕೌಟುಂಬಿಕ ನಿರ್ವಹಣೆ ಅತ್ಯಂತ ಕಷ್ಟಕರವಾಗಿದೆ. ಸದರಿ ಅಧಿಕಾರಿಗಳ ಕಛೇರಿ ಗೆ ಹೋಗಿ ಬಿಲ್ ಕೊಡಲು ನಾಲ್ಕು ತಿಂಗಳಿಂದ ಪ್ರಯತ್ನಿಸಿದರು ಯಾವುದೇ ಪ್ರತಿಕ್ರಿಯೆ ಅವರಿಂದ ಬಂದಿಲ್ಲ. ಹಲವಾರ ಜನರಿಗೆ ಅವೈಜ್ಞಾನಿಕವಾಗಿ ಕಮಿಷನ್ ಹಣ ಪಡೆದು ಬಿಲ್ ಬಿಡುಗಡೆ ಮಾಡಿದ್ದಾರೆ. ಹೀಗಾಗಿ ಅಧಿಕಾರಿಗಳಾದ ಸಿ ಬಿ ಚಿಕ್ಕಲಿಕಿ , ಆನಂದ ಬಿರಾದಾರ ಇವರ ವಿರುದ್ಧ ಕಠಿಣ ಕ್ರಮ ಕೈಗೊಂಡು, ನಿವೃತ್ತಿ ಸೌಲಭ್ಯಗಳನ್ನು ತಡೆಹಿಡಿದು ತಕ್ಷಣವೇ ಗುತ್ತಿಗೆದಾರರ ಬಿಲ್ ಪಾವತಿಸಲು ಕ್ರಮವಹಿಸಲು ಆಗ್ರಹಿಸಿದ್ದಾರೆ.
ಜಿಲ್ಲಾಧಿಕಾರಿಗಳ ಪರವಾಗಿ ಜಿಲ್ಲಾಪಂಚಾಯತ ಸಿಇಓ ರಿಷೀಆನಂದ ಸ್ಥಾನಿಕ ಹೆಚ್ಚುವರಿ ಜಿಲ್ಲಾದಿಕಾರಿಗಳಾದ ಸೋಮನಿಂಗ ಗೆಣ್ಣೂರ ದಯಾಮರಣದ ಅರ್ಜಿ ಸ್ವೀಕರಿಸಿದರು.
ಈ ಸಂದರ್ಭದಲ್ಲಿ ಹಾಜರಿದ್ದ ಗುತ್ತಿಗೆದಾರರುಗಳಾದ ಅರುಣ ಮಠˌ ಸತೀಶ ಡೋಣೂರˌ ಸಂಘದ ಅದ್ಯಕ್ಷರಾದ ಸಿ ಆರ್ ರೂಡಗಿˌ ರಮೇಶ ಅಸ್ಕೀˌ ಸುನೀಲ ಉಳ್ಳಾಗಡ್ಡಿ ˌ ರಮೇಶ ಮಾವಿನಗಿಡದ ˌ ಈರಣ್ಣಾ ಪಟ್ಟಣಶೆಟ್ಟಿ ˌ ಕೆ ಜಿ ಪಾಟೀಲ ˌ ದೇವಣ್ಣಾ ಅಂಬಿಗೇರ ˌ ರಮೇಶಗೌಡ್ರು ಪಾಟೀಲ ಮಾರ್ಕಬ್ಬನಹಳ್ಳಿ ˌ ಶೋಷೀತ ವರ್ಗಗಳ ರಾಜ್ಯ ಅದ್ಯಕ್ಷರಾದ ಪ್ರದೀಪ ಹಿರೇಮಠˌ ಮೋಹನ ರಾಠೋಡ ˌ ಅಪ್ಪುಗೌಡ ಬಿರಾದಾರ ಸುಜೀತ ಬಿಂಜಲಬಾವಿˌ ಇನ್ನೂ ನೂರಾರು ಗುತ್ತಿಗೆದಾರರು ಪಾಲ್ಗೊಂಡಿದ್ದರು

