ಉದಯರಶ್ಮಿ ದಿನಪತ್ರಿಕೆ
ದೇವರಹಿಪ್ಪರಗಿ: ತಾಲ್ಲೂಕು ಪ್ರಥಮ ಕನ್ನಡ ಸಾಹಿತ್ಯ ಸಮ್ಮೇಳನದ ಆಮಂತ್ರಣ ಪತ್ರಿಕೆಯನ್ನು ಇಂದು ಅಧಿಕೃತವಾಗಿ ಬಿಡುಗಡೆಗೊಳಿಸಲಾಯಿತು.
ಪಟ್ಟಣದ ಶಾಸಕರ ಸರ್ಕಾರಿ ಮಾದರಿಯ ಪ್ರಾಥಮಿಕ ಶಾಲಾ ಆವರಣದಲ್ಲಿನ ಪರಿಷತ್ ಭವನದಲ್ಲಿ ಶನಿವಾರ ಸಾಯಂಕಾಲ ಪರಿಷತ್ತಿನ ಪದಾಧಿಕಾರಿಗಳು, ಸಾಹಿತಿಗಳು, ಗಣ್ಯರ ಸಮ್ಮುಖದಲ್ಲಿ ಜನೇವರಿ ಮೂರರಂದು ಜರುಗಲಿರುವ ತಾಲ್ಲೂಕು ಪ್ರಥಮ ಕನ್ನಡ ಸಾಹಿತ್ಯ ಸಮ್ಮೇಳನದ ಆಮಂತ್ರಣ ಪತ್ರಿಕೆಯನ್ನು ಅಧಿಕೃತವಾಗಿ ಬಿಡುಗಡೆ ಮಾಡಲಾಯಿತು.
ತಾಲ್ಲೂಕು ಕಸಾಪ ಅಧ್ಯಕ್ಷ ಜಿ.ಪಿ.ಬಿರಾದಾರ, ಪಟ್ಟಣ ಪಂಚಾಯತಿ ಸದಸ್ಯ ಬಶೀರ್ಅಹ್ಮದ ಬೇಪಾರಿ, ಶಿಕ್ಷಕರ ಸಂಘದ ತಾಲ್ಲೂಕು ಅಧ್ಯಕ್ಷ ಎ.ಎಚ್.ವಾಲೀಕಾರ, ನಿವೃತ್ತ ನೌಕರರ ಸಂಘದ ತಾಲ್ಲೂಕು ಅಧ್ಯಕ್ಷ ಸಿ.ಕೆ.ಕುದರಿ, ಪಿ.ಎಸ್.ಮಿಂಚನಾಳ, ಸೋಮಶೇಖರ ಹಿರೇಮಠ, ಕಾಶೀನಾಥ ಕೋರಿ, ರಮೇಶ ಮಶಾನವರ, ಭೀಮನಗೌಡ ನಾಗರಾಳ, ನಾಗಯ್ಯ ಹಿರೇಮಠ, ಮುನ್ನಾ ಮಳಖೇಡ, ಕಾಶೀನಾಥ ತಳಕೇರಿ, ಪಿ.ಸಿ.ತಳಕೇರಿ, ಪ್ರಕಾಶ ಮಲ್ಹಾರಿ, ಸಿದ್ದು ಮೇಲಿನಮನಿ, ಅರುಣ ಕೋರವಾರ, ರಾಘವೇಂದ್ರ ಗುಡಿಮನಿ, ಇಕ್ಬಾಲ್ ಬಿಜಾಪುರ, ಮುರ್ತುಜಾ ತಾಂಬೋಳಿ, ಸಿದ್ದಪ್ಪ ನಾಗರಳ್ಳಿ, ಅಪ್ಪುಗೌಡ ಪಾಟೀಲ, ಎಸ್.ಜಿ. ತಾವರಖೇಡ, ಸದಾಶಿವ ಗುಡಿಮನಿ, ದಸ್ತಗೀರ ಬಗಲಿ, ಎಸ್.ಆರ್. ನಂದ್ಯಾಳ, ಅಣ್ಣು ಭಜಂತ್ರಿ, ಶ್ರೀಕಾಂತ ಭಜಂತ್ರಿ, ಬಾಬು ನಾಟೀಕಾರ, ರವೀಂದ್ರ ಕೊಟೀನ, ಸದಾಶಿವ ನಾಟೀಕಾರ, ವಿದ್ಯಾನಂದ ಬಸರಗಿ, ಮಹಾಂತೇಶ ಮಮದಾಪೂರ, ಸುನೀಲ ತಳವಾರ, ಮಲಕು ಸುರಗಿಹಳ್ಳಿ, ಚನ್ನು ಹದರಿ ಇದ್ದರು.

