ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ಶ್ರೀ ಮಹಾಲಕ್ಷಿ ಸಹಕಾರಿ ಬ್ಯಾಂಕ್ ನಿ., ವಿಜಯಪುರ ಇದರ ಅಧ್ಯಕ್ಷ ಹಾಗೂ ಉಪಾಧ್ಯಕ್ಷರನ್ನು ಅವಿರೋಧವಾಗಿ ಆಯ್ಕೆ ಮಾಡಲಾಯಿತು.
ಮುಕುಂದ ಎಸ್. ಕುಲಕರ್ಣಿ ಇವರು ಅಧ್ಯಕ್ಷರಾಗಿ ಹಾಗೂ ಉಪಾಧ್ಯಕ್ಷರಾಗಿ ವಿಕಾಸ ಅ. ಪದಕಿ ರವರು ಅವಿರೋಧವಾಗಿ ಆಯ್ಕೆಯಾದರು.
ಈ ಸಂದರ್ಭದಲ್ಲಿ ನೂತನ ನಿರ್ದೇಶಕರುಗಳಾದ ವಿಜಯಕುಮಾರ ಜೋಶಿ, ಕೃಷ್ಣಾ ಗುನ್ಹಾಳಕರ, ಗೋವಿಂದ ಜೋಶಿ, ಶ್ಯಾಮಸುಂದರ ಕುಲಕರ್ಣಿ, ಪವನ ಕುಲಕರ್ಣಿ, ಶ್ರೀಮತಿ ರಾಧಾ ತಾವರಗೇರಿ, ಶ್ರೀಮತಿ ವೀಣಾ ಟಂಕಸಾಲಿ, ಬಸವರಾಜ ಪತ್ತಾರ, ಸಚಿನ ಮದ್ದಿನಮಠ, ಪವನಕುಮಾರ ಮುರಾಳ, ವಿಶ್ವನಾಥ ತಳವಾರ ಚುನಾವಣಾಧಿಕಾರಿಯಾದ ರಿಟರ್ನಿಂಗ್ ಆಫೀಸರ್ ಮಹಾಲಕ್ಷಿ ಸಹಕಾರಿ ಬ್ಯಾಂಕ್, ವಿಜಯಪುರ ಹಾಗೂ ಸಹಕಾರ ಸಂಘಗಳ ಸಹಾಯಕ ನಿರ್ಭಂಧಕರಾದ ಚೇತನ ಆರ್. ಭಾವಿಕಟ್ಟಿ ರವರು ಘೋಷಿಸಿದರು.
ಈ ಸಂದರ್ಭದಲ್ಲಿ ವ್ಯವಸ್ಥಾಪಕರಾದ ಪದ್ಮಾವತಿ ಕುಲಕರ್ಣಿ, ನಿದೇಶಕರಾದ ರಾಕೇಶ ಕುಲಕರ್ಣಿ, ಸದಸ್ಯರುಗಳಾದ ಗಿರೀಶ ಅಕ್ಕಲಕೋಟ, ಪ್ರಕಾಶ ಅಕ್ಕಲಕೋಟ, ಗೋವಿಂದ ಜೋಶಿ, ಪವನ ಜೋಶಿ, ಆದಿತ್ಯ ತಾವರಗೇರಿ, ದತ್ತಾತ್ರೆಯ ಜೋಶಿ, ಸಂಜು ದಿವಾಣಜಿ ಮುಂತಾದವರು ಉಪಸ್ಥಿತರಿದ್ದರು.

