ಉದಯರಶ್ಮಿ ದಿನಪತ್ರಿಕೆ
ಕೆಂಭಾವಿ: ಕರ್ನಾಟಕ ಬ್ಯಾಂಕಿನ ಜೀವಾಳವೇ ಶೇರುದಾರರು, ಠೇವಣಿದಾರರು, ಗ್ರಾಹಕರು ಅವರುಗಳು ಕೊಡುಗೆ ಅಪಾರವಾದದ್ದು ಎಂದು ಕರ್ನಾಟಕ ಬ್ಯಾಂಕ್ ಕ್ಲಸ್ಟರ್ ಹೆಡ್ ರಂಜಿತ್ ಶೆಟ್ಟಿ ಹೇಳಿದರು.
ಪಟ್ಟಣದ ಹೇಮರೆಡ್ಡಿ ಮಲ್ಲಮ್ಮ ಕಾಂಪ್ಲೆಕ್ಸ್ ನಲ್ಲಿರುವ ಕರ್ನಾಟಕ ಬ್ಯಾಂಕ್ ಕಾರ್ಯಾಲಯದಲ್ಲಿ ಗುರುವಾರ ಸಂಜೆ ಆಯೋಜಿಸಿದ್ದ ಬ್ಯಾಂಕಿನ ದಶಮಾನೋತ್ಸವ ಹಾಗೂ ಬಡ್ತಿ ಹೊಂದಿ ವರ್ಗಾವಣೆಯಾಗುತ್ತಿರುವ ರಾಜೇಶ್ ಇವರಿಗೆ ಬೀಳ್ಕೊಡುಗೆ ಮತ್ತು ಅಪಘಾತ ವಿಮೆ ಚೆಕ್ ವಿತರಣಾ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಸ್ಥಳೀಯರ ಸಹಕಾರದಿಂದ ಹತ್ತು ವರ್ಷ ಪೂರೈಸಿದ ಬ್ಯಾಂಕ್ ಮುಂದಿನ ದಿನಗಳಲ್ಲಿ 150 ಕೋಟಿ ರೂಪಾಯಿಗಳ ವ್ಯವಹಾರ ವಹಿವಾಟು ಹೊಂದುವ ನಿಟ್ಟಿನಲ್ಲಿ ನಮ್ಮ ಸಿಬ್ಬಂದಿ ಕಾರ್ಯಪ್ರವೃತ್ತವಾಗಲಿ ಎನ್ನುತ್ತಾ, ಗ್ರಾಹಕರ ಹಿತರಕ್ಷಣೆಗಾಗಿ ಕೆಬಿಎಲ್ ಸುರಕ್ಷ 300/-ರೂ ಹಾಗೂ ಪಿಎಂಎಸ್ಬಿವೈ 12/-ರೂ ಜೀವವಿಮೆ ಮೊತ್ತ ಸಂದಾಯ ಮಾಡಿದರೆ ಆಪತ್ಕಾಲದಲ್ಲಿ ಅವಲಂಬಿತರು ಆರ್ಥಿಕ ಸಂಕಷ್ಟದಿಂದ ಪಾರಾಗಲು ಸಾಧ್ಯವಾಗುತ್ತದೆ ಎಂದರು.
ಬ್ಯಾಂಕ್ ಮ್ಯಾನೇಜರ್ ಬಸವರಾಜ ಪ್ರಾಸ್ತಾವಿಕ ಮಾತನಾಡಿದರು. ಮುಖ್ಯಅತಿಥಿಗಳಾದ ಪಿ ಎಲ್ ಡಿ ಬ್ಯಾಂಕ್ ನಿರ್ದೇಶಕ ವಾಮನರಾವ್ ದೇಶಪಾಂಡೆ, ಹಿರಿಯ ಸಹಕಾರಿ ವೈ ಟಿ ಪಾಟೀಲ, ಹೇಮರೆಡ್ಡಿ ಮಲ್ಲಮ್ಮ ಸೌಹಾರ್ದ ಸಹಕಾರಿಯ ಉಪಾಧ್ಯಕ್ಷ ಶರಣಬಸವ ಕಾಕ್ ಡಿಗ್ಗಾವಿ, ಸಂಜೀವರಾವ್ ಕುಲ್ಕರ್ಣಿ, ಡಿ ಸಿ ಪಾಟೀಲ್ ಮಾತನಾಡಿ ಬ್ಯಾಂಕಿನ ಕಾರ್ಯ ವೈಖರಿಯನ್ನು ಕೊಂಡಾಡಿದರು.
ಇದೇ ವೇಳೆ ಕರ್ನಾಟಕ ಬ್ಯಾಂಕಲ್ಲಿ ಸುಮಾರು 10 ವರ್ಷ ಸೇವೆ ಸಲ್ಲಿಸಿ ಬಡ್ತಿ ಹೊಂದಿ ವರ್ಗಾವಣೆಯಾಗುತ್ತಿರುವ ರಾಜೇಶ್ ಇವರಿಗೆ ಬ್ಯಾಂಕ್ ವತಿಯಿಂದ ಹಾಗೂ ಗ್ರಾಹಕರಿಂದ ಆತ್ಮೀಯವಾಗಿ ಸನ್ಮಾನಿಸಿ ಶುಭಹಾರೈಸಿ ಬೀಳ್ಕೊಡಲಾಯಿತು. ಇತ್ತೀಚೆಗೆ ಅಪಘಾತದಲ್ಲಿ ಮೃತಪಟ್ಟ ಬ್ಯಾಂಕಿನ ಗ್ರಾಹಕ ಬಸವರಾಜ ಇವರ ಕುಟುಂಬಕ್ಕೆ ಕೆಬಿಎಲ್ ಸುರಕ್ಷ ಹಾಗೂ ಪಿಎಂಎಸ್ಬಿವೈ ವಿಮೆಯ ಒಟ್ಟು ಮೊತ್ತ 12/- ಲಕ್ಷ ರೂಪಾಯಿ ಚೆಕ್ ನೀಡಲಾಯಿತು, ಬ್ಯಾಂಕ್ ಸಿಬ್ಬಂದಿಗಳಾದ ಮಲ್ಲೇಶಪ್ಪ ಲೋಕಾಪುರ, ಶ್ರೀನಿವಾಸ ಕುಲಕರ್ಣಿ, ಸಾಗರ ಮಾಳಿ, ಲಕ್ಷ್ಮೀ ಮೇಡಂ, ಹಾಗೂ ಗೌರವಾನ್ವಿತ ಗ್ರಾಹಕರಾದ ವಿರೇಶ ಎಸ್, ಶಿವರಾಜ ಬುದೂರ, ಡಾ ಪ್ರವೀಣ ಪಾಟೀಲ, ಶಾಂತಗೌಡ ದ್ಯಾಮನಾಳ, ಗುಂಡಭಟ್ ಜೋಶಿ, ಸೇರಿದಂತೆ ಅನೇಕರು ಉಪಸ್ಥಿತರಿದ್ದರು. ಸುರೇಶ ಯಾಳಗಿ ಸ್ವಾಗತಿಸಿದರು, ಡಾ ಯಂಕನಗೌಡ ಎಸ್ ಎಸ್ ನಿರೂಪಿಸಿದರು, ಮೌನೇಶ ವಂದಿಸಿದರು.

