ಮಕ್ಕಳ ಬಳಗದ ’ಚಿಣ್ಣರ ನುಡಿಸಿರಿ’ ಸಮಾರಂಭದಲ್ಲಿ ಕು.ಸೃಷ್ಠಿ ಬಂಡಗಾರ ಕಳವಳ
ಉದಯರಶ್ಮಿ ದಿನಪತ್ರಿಕೆ
ಆಲಮೇಲ: ಸಿಂದಗಿಯ ಪ್ರೇರಣಾ ಪಬ್ಲಿಕ್ ಸ್ಕೂಲ್ ನಲ್ಲಿ ಮಕ್ಕಳ ಬಳಗ ಸಿಂದಗಿ ಹಮ್ಮಿಕೊಂಡಿರುವ ೪೮ನೇ ಚಿಣ್ಣರ ನುಡಿಸಿರಿ ಸಮಾರಂಭದಲ್ಲಿ ಶ್ರೀ ವಿಶ್ವೇಶ್ವರ ಬಾಲ ಭಾರತಿ ಅನುದಾನಿತ ಕನ್ನಡ ಹಿರಿಯ ಪ್ರಾಥಮಿಕ ಶಾಲೆ ಆಲಮೇಲ ಶಾಲೆಯ ಈರ್ವರು ವಿದ್ಯಾರ್ಥಿನಿಯರು ಉಪನ್ಯಾಸಕರಾಗಿ ಭಾಗಿಯಾಗಿ ತಮ್ಮ ಪ್ರಬುದ್ಧ ಮಾತುಗಳಿಂದ ಎಲ್ಲರ ಗಮನ ಸೆಳೆದರು.
ಗೋಷ್ಠಿ-೧ ರಲ್ಲಿ ಭಾಗವಹಿಸಿದ ಶಾಲೆಯ ವಿದ್ಯಾರ್ಥಿನಿ ಕು.ಸೃಷ್ಠಿ ಬಂಡಗಾರ ಇವಳು ’ನನ್ನ ಶಾಲೆ’ ವಿಷಯ ಕುರಿತು ಮಾತನಾಡಿ, ಹಿಂದಿನಿಂದಲೂ ಗುರುಕುಲ ಪದ್ಧತಿಯಲ್ಲಿ ಶಿಕ್ಷಣ ನೀಡಲಾಗುತ್ತಿತ್ತು, ಅದರಿಂದ ಮಕ್ಕಳಲ್ಲಿ ಸಂಸ್ಕಾರ ಸಿಗುತ್ತಿತ್ತು. ಆದರೆ ಇಂದಿನ ದಿನಗಳಲ್ಲಿ ಆಧುನಿಕ ಶಿಕ್ಷಣ ಪದ್ಧತಿಯಲ್ಲಿ ಕೇವಲ ಅಂಕಗಳ ಬೆನ್ನು ಹತ್ತಿ ಗೌರವ, ಸಂಸ್ಕಾರ ಕಡಿಮೆ ಆಗುತ್ತಿದೆ ಎಂದು ಕಳವಳ ವ್ಯಕ್ತಪಡಿಸಿದರು.
ಹಾಗೆಯೇ ಗೋಷ್ಠಿ-೩ ರಲ್ಲಿ ಭಾಗವಹಿಸಿದ ಶಾಲೆಯ ವಿದ್ಯಾರ್ಥಿನಿ ಕು.ಭಾಗ್ಯಶ್ರೀ ಮಳ್ಳಿ ’ಪರಿಸರ ಉಳಿಸೋಣ’ ವಿಷಯ ಕುರಿತು ಮಾತನಾಡಿ, ಇವತ್ತು ಇಡೀ ವಿಶ್ವವೇ ವಿನಾಶದ ಅಂಚಿಗೆ ಬಂದು ನಿಂತಿದೆ. ಕಾರಣ ಅತಿಯಾಗಿ ಪ್ಲಾಸ್ಟಿಕ್ ಬಳಕೆ, ಕಾರ್ಖಾನೆಗಳು ಹೂರಹಾಕುತ್ತಿರುವ ತ್ಯಾಜ್ಯ ವಸ್ತುಗಳು ಇದರಿಂದಾಗಿ ನಮ್ಮ ಉತ್ತಮವಾದ ಆರೋಗ್ಯ ನಾವೇ ಹಾಳುಮಾಡುಕೊಳ್ಳುತ್ತಿದ್ದೇವೆ ಎಂದು ಕಳವಳ ವ್ಯಕ್ತಪಡಿಸಿದರಲ್ಲದೇ, ಪರಿಸರ ಸಂರಕ್ಷಣಕ್ಕೆ ಎಲ್ಲರೂ ಕೈಜೋಡಿಸಬೇಕು ಎಂದು ಕರೆ ಕೊಟ್ಟರು.
ಈ ಸಂದರ್ಭದಲ್ಲಿ ಸಂಘಟಕರಿಂದ ಗ್ರಂಥ ಸಮರ್ಪಣೆ ಮುಖಾಂತರ ಈರ್ವರೂ ವಿದ್ಯಾರ್ಥಿನಿಯರನ್ನು ಗೌರವಿಸಲಾಯಿತು.
ಈ ವೇಳೆ ಹಿರಿಯ ಮಕ್ಕಳ ಸಾಹಿತಿಗಳಾದ ಪ.ಗು.ಸಿದ್ದಾಪೂರ, ಹ.ಮ.ಪೂಜಾರ, ಆರ್.ಡಿ.ಕುಲಕರ್ಣಿ, ಎಸ್.ಐ.ಅಸ್ಕಿ , ಎಲ್.ಎಸ್.ಕಿರನಳ್ಳಿ, ಎಸ್.ಎಸ್.ಸಾರಂಗಮಠ, ಆರಕ್ಷಕಿ ಕವಿಯತ್ರಿ ಶೈಲಶ್ರೀ ನ್ಯಾಮಣ್ಣವರ, ಎಸ್ .ಎಮ್.ಮಠಪತಿ, ಶಿಕ್ಷಕರು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು

