ಉದಯರಶ್ಮಿ ದಿನಪತ್ರಿಕೆ
ಇಂಡಿ: ತಂದೆ ತಾಯಿಗಳ ತ್ಯಾಗದ ಋಣ, ಸಮಾಜ ಮತ್ತು ವಿದ್ಯೆ ಕಲಿಸಿದ ಗುರುಗಳು ಮತ್ತು ಕಲಿತ ಶಾಲೆಯ ಋಣ ಎಂದೂ ತೀರಿಸಲಾಗದು ಎಂದು ಸರಕಾರಿ ಪ್ರಥಮ ದರ್ಜೆ ಕಾಲೇಜು ಪ್ರಾಚಾರ್ಯ ಡಾ.ರಮೇಶ ಆರ್.ಹೆಚ್ ಹೇಳಿದರು.
ಪಟ್ಟಣದ ಜಿ.ಆರ್. ಗಾಂಧಿ ಕಲಾ, ವಾಯ್.ಎ.ಪಾಟೀಲ ವಾಣಿಜ್ಯ ಹಾಗೂ ಎಮ್.ಪಿ.ದೋಶಿ ವಿಜ್ಞಾನ ಪದವಿ ಮಹಾವಿದ್ಯಾಲಯದಲ್ಲಿ ಹಳೆಯ ವಿದ್ಯಾರ್ಥಿಗಳ ಸಂಘದ ಉದ್ಘಾಟನೆ ಮತ್ತು ಪದಾಧಿಕಾರಿಗಳ ಆಯ್ಕೆಯ’ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಕಾರ್ಯಕ್ರಮ ಉದ್ಘಾಟಿಸಿದ ಆಡಳಿತ ಮಂಡಳಿಯ ನಿರ್ದೇಶಕ ಅಜೀತ ಧನಶೆಟ್ಟಿ ಮಾತನಾಡಿದರು.
ಹಳೆಯ ವಿದ್ಯಾರ್ಥಿಗಳ ನೂತನ ಪದಾಧಿಕಾರಿಗಳಾಗಿ ಅಧ್ಯಕ್ಷರು ಎಸ್.ಎಸ್.ದೇಸಾಯಿ, ಉಪಾಧ್ಯಕ್ಷರು ಬಿ.ಡಿ.ಪಾಟೀಲ ಕಾರ್ಯದರ್ಶಿಗಳು ಜಗದೀಶ ಕ್ಷತ್ರಿ ಸಹ ಕಾರ್ಯದರ್ಶಿಗಳು ರಶ್ಮಿ ಗಜಾಕೋಶ ಕೋಶಾಧಿಕಾರಿಗಳು ರಮೇಶ ಪೂಜಾರಿ ಸದಸ್ಯರು ಪುಟ್ಟುಗೌಡ ಪಾಟೀಲ ವಿಜಯಕುಮಾರ ರಾಠೋಡ. ಶ್ರೀಶೈಲ ನವಲಿ, ರಾವುತಪ್ಪಾ ದಳವಾಯಿ ಪ್ರಶಾಂತ ಹಿರೇಮಠ, ಆನಂದ ತಾಂಬೆ, ರಾಮ ಕಾಂಬಳೆ ಪೀರಪ್ಪಾ ದಳವಾಯಿ ಆಯ್ಕೆಯಾದರು.
ಅಧ್ಯಕ್ಷತೆ ವಹಿಸಿದ ಸಂಸ್ಥೆಯ ಎಸ್.ಆರ್.ತಾಂಬೆ, ಬಿ.ಹೆಚ್.ಬಗಲಿ, ಕುಮಾರಿ. ಧಾನಮ್ಮ ಪಾಟೀಲ, ಪ್ರಾಚಾರ್ಯ ಡಾ.ಎಸ್.ಬಿ.ಜಾಧವ, ಡಾ.ವಿಶ್ವಾಸ ಕೊರವಾರ, ರಾಘವೇಂದ್ರ ಇಂಗನಾಳ ಮಾತನಾಡಿದರು.
ವೇದಿಕೆಯಲ್ಲಿ ಆಡಳಿತ ಮಂಡಳಿಯ ನಿರ್ದೇಶಕ ಅಜೀತ ಧನಶೆಟ್ಟಿ, ಚಂದ್ರಕಾಂತ ದೇವರ, ಹಳೇ ವಿದ್ಯಾರ್ಥಿಗಳಾದ ಎಸ್.ಎಸ್.ದೇಸಾಯಿ, ಬಿ.ಡಿ.ಪಾಟೀಲ ಮತ್ತು ಜಗದೀಶ ಕ್ಷತ್ರಿ ಉಪಸ್ಥಿತರಿದ್ದರು.

