ವಿವಿಧ ಧರ್ಮದ ಮುಖಂಡರೊಂದಿಗೆ ಸಮಾನತೆ ಮತ್ತು ಹಕ್ಕುಗಳ ಬಗ್ಗೆ ವಿಸ್ತೃತ ಚಿಂತನೆ
ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ಡಿಸೆಂಬರ್ ೧೮ ರಂದು ಅಲ್ಪಸಂಖ್ಯಾತರ ಹಕ್ಕುಗಳ ದಿನಾಚರಣೆಯನ್ನು ಅರ್ಥಪೂರ್ಣವಾಗಿ ಅಲ್ಪಸಂಖ್ಯಾತ ಮುಸ್ಲಿಮರ ಅಭಿವೃದ್ಧಿ ಸಮಿತಿಯ (ಒಒಆಅ) ವತಿಯಿಂದ ನಗರದ ಸರ್ಕಾರಿ ನೌಕರರ ಭವನದಲ್ಲಿ ವಿಜೃಂಭಣೆಯಿಂದ ಆಚರಿಸಲಾಯಿತು.
ಈ ಕಾರ್ಯಕ್ರಮದಲ್ಲಿ ಕ್ರಿಶ್ಚಿಯನ್, ಮುಸ್ಲಿಂ, ಬೌದ್ಧ, ಜೈನ, ಮತ್ತು ಸಿಖ್ ಸಮುದಾಯಗಳ ಪ್ರಮುಖ ಮುಖಂಡರು ಪಾಲ್ಗೊಂಡು ಅಲ್ಪಸಂಖ್ಯಾತರ ಹಕ್ಕುಗಳು, ಸವಾಲುಗಳು, ಮತ್ತು ಅವುಗಳನ್ನು ಜಯಿಸುವ ಮಾರ್ಗಗಳ ಕುರಿತು ಸವಿಸ್ತಾರವಾಗಿ ಮಾತನಾಡಿದರು.
ಮುಖಂಡರಾದ ಎಲ್. ಎಲ್ ಉಸ್ತಾದ್ ಮಾತನಾಡಿ, ನಗರದಲ್ಲಿ ಪ್ರಥಮ ಬಾರಿಗೆ ಈ ಅಲ್ಪಸಂಖ್ಯಾತರ ದಿನಾಚರಣೆ ಆಚರಿಸಲಾಗಿದೆ ಎಂದು ಹರ್ಷ ವ್ಯಕ್ತಪಡಿಸಿದರು. ಅಲ್ಪಸಂಖ್ಯಾತ ಸಮುದಾಯದ ಸಾಮಾನ್ಯ ಸಮಸ್ಯೆಗಳ ಮೇಲೆ ಬೆಳಕು ಚೆಲ್ಲುವ ಜೊತೆಗೆ, ಹಕ್ಕುಗಳ ಬಗ್ಗೆ ಜಾಗೃತಿ ಮೂಡಿಸುವ ಈ ಕಾರ್ಯಕ್ರಮವು ಸಮಾನತೆ ಮತ್ತು ಸಾಮರಸ್ಯದ ಸಂದೇಶವನ್ನು ಹರಡುತ್ತದೆ ಎಂದು ಅವರು ಹೇಳಿದರು.
ಸಿಎನ್ಎಫ್ಇ ಸಂಸ್ಥೆಯ ಫಾದರ್ ಟಿಯೊಲೊ ಮಚ್ಚಾಡೊ ರವರು ಮಾತನಾಡಿ, ಅಲ್ಪಸಂಖ್ಯಾತರ ಸಮುದಾಯಗಳ ಒಗ್ಗಟ್ಟಿನ ಮಹತ್ವವನ್ನು ಗುರುತಿಸಿ, ಧಾರ್ಮಿಕ ಸಹಿಷ್ಣುತೆಯ ಅವಶ್ಯಕತೆಯನ್ನು ಸಾರಿದರು. ಅಲ್ಪಸಂಖ್ಯಾತರ ಅಭಿವೃದ್ಧಿಗೆ ತಾವೆಲ್ಲರೂ ಜವಾಬ್ದಾರರಾಗಿ ಕೆಲಸ ಮಾಡಬೇಕೆಂಬ ಸಂಕಲ್ಪವನ್ನು ಈ ಸಂದರ್ಭದಲ್ಲಿ ಎಲ್ಲರೂ ಮಾಡಬೇಕೆಂದು ಅವರು ಹೇಳಿದರು.
ಅಹಿಂದ ಮುಖಂಡ ಎಸ್ ಎಂ ಪಾಟೀಲ್ (ಕಣಿಯಾರ) ಮಾತನಾಡಿ, ಶಿಕ್ಷಣ ಮತ್ತು ಸಾಮಾಜಿಕ ಜಾಗೃತಿಯ ಮೂಲಕ ಅಲ್ಪಸಂಖ್ಯಾತ ಸಮುದಾಯದ ಹಕ್ಕುಗಳನ್ನು ಬಲಪಡಿಸಬೇಕು. ಪ್ರಶ್ನೆ ಮಾಡುವಂತಹ ಮನೋಭಾವವನ್ನು ಬೆಳೆಸಿಕೊಂಡು ಯಾವುದೇ ಸರ್ಕಾರದ ವಿರುದ್ಧ ತಮ್ಮ ಹಕ್ಕುಗಳಿಗಾಗಿ ಧೈರ್ಯವಾಗಿ ಪ್ರಶ್ನೆ ಮಾಡುವ ಮನೋಭಾವ ಬೆಳೆಸಿಕೊಳ್ಳಬೇಕೆಂದು ಅವರು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು.
ಸ್ಲಂ ಸಮಿತಿಯ ಮುಖಂಡ ಅಕ್ರಮ್ ಮಾಶಾಳಕರ್ ಮಾತನಾಡಿ, ಸಮಾನತೆ, ಬುದ್ಧಿವಂತಿಕೆಯಿಂದ ಹಕ್ಕುಗಳ ಬಳಕೆ, ಶಿಕ್ಷಣ, ಹಾಗೂ ಸಮುದಾಯದ ಅಭಿವೃದ್ಧಿಯ ಅಗತ್ಯತೆಯನ್ನು ಒತ್ತಿ ಹೇಳಿದರು.
ಈ ಸಂದರ್ಭದಲ್ಲಿ ಮುಖಂಡರಾದ ಸೈಯದ್ ಜೈನುಲ್ ಅಬಿದಿನ್, ಪ್ರದೀಪ್ ಜೈನ್, ಸಂತೋಷ ಶಹಾಪುರ್, ಅಯ್ಯುಬ ನಾಟಿಕರ್, ಮುನ್ನಾ ಬಕ್ಷಿ, ಸಿದ್ದಲಿಂಗ ಬಾಗೇವಾಡಿ, ಹಫಿಜ್ ಸಿದ್ದಿಕಿ, ಇರಫಾನ ಶೇಖ ರವರು ಸಮುದಾಯದ ಆರ್ಥಿಕ ಪ್ರಗತಿ ಹಾಗೂ ಸರ್ಕಾರದ ವಿವಿಧ ಯೋಜನೆಗಳ ಸದುಪಯೋಗದ ಮಹತ್ವವನ್ನು ವಿವರಿಸಿ ಈ ದಿನದ ಪ್ರಸ್ತಾಪಗಳು ಅಲ್ಪಸಂಖ್ಯಾತ ಸಮುದಾಯದ ಸಮಸ್ಯೆಗಳ ಕುರಿತು ಕೇವಲ ಚರ್ಚೆಗೆ ಸೀಮಿತವಾಗದೆ, ಕಾರ್ಯಚಟುವಟಿಕೆಗಳು ಮತ್ತು ಪರಿಹಾರಗಳನ್ನು ರೂಪಿಸುವ ಪ್ರೇರಣೆಯನ್ನು ಪಡೆದುಕೊಳ್ಳಬೇಕು. ಮತ್ತು ಈ ಕಾರ್ಯಕ್ರಮವು ಸಮಾನತೆ, ಧಾರ್ಮಿಕ ಸಹಿಷ್ಣುತೆ, ಮತ್ತು ಸಾಮಾಜಿಕ ಹಕ್ಕುಗಳನ್ನು ಬಲಪಡಿಸುವ ಕಡೆಗೆ ಮಹತ್ವದ ಹೆಜ್ಜೆಯಾಗಬೇಕೆಂದು ಅಭಿಪ್ರಾಯ ವ್ಯಕ್ತಪಡಿಸಿದರು.
ಕಾರ್ಯಕ್ರಮದಲ್ಲಿ ಸಜ್ಜಾದೆಪಿರಾಂ ಮುಶ್ರೀಫ್, ಕುಲದೀಪ್ ಪೋತಿವಾಲ್, ಇಖಲಾಸ್ ಸುನೇವಾಲೆ, ಒ. ಂ. ಪಿರಾಂ ವಕೀಲರು, ಇಮ್ರಾನ್ ಜಹಾಗಿರದಾರ, ಅಲ್ಲಭಕ್ಷ ಬಿಜಾಪುರ್, ಹಿದಾಯತ್ ಮಾಶಾಳಕರ್, ಇಂಮ್ತಿಯಾಜ್ ಮುಲ್ಲಾ, ಹಬ್ಬು ಅಂಬಾರಖಾನೆ, ಬಾಬಾ ಜಹಾಗಿರದಾರ, ಅತಿಕ್ ನಾಲ್ಬಂದ, ಡಾ!! ಇರ್ಫಾನ್ ಮುನ್ಸಿ, ಮುಸ್ತಫಾ ಆಲಮೇಲ, ಅಬುಬಕರ್ ಮೋಮಿನ್, ಹಮೀದ್ ಇನಾಮ್ದಾರ್, ಇಲಿಯಾಸ್ ಕಲಾದಗಿ, ಮುನ್ನಾ ಮುಲ್ಲಾ, ಫಿರೋಜಖಾನ್ ರೋಹಿಲೆ, ನಿಜಾಮ್ ಹರಿಯಾಲ್, ಇಬ್ರಾಹಿಂ ಚೆನೆಗಾಂವ್, ಸೈಯದ್ ಮಧಬಾವಿ, ಮುನಾಫ್ ಪಠಾಣ್, ಹಮೀದ್ ಅವಟಿ, ಖ್ವಾಜಾ ಮಂದಾಪುರ್, ಜಿಯಾವ್ರುಹಮಾನ್ ಪಠಾನ್, ಹನ್ನಾನ ಶೇಖ, ಸಾದಿಕ್ ಇಮಾರತವಾಲೆ, ತೌಸಿಫ್ ಇನಾಮದಾರ ಇನ್ನಿತರರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

