ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ೨೨೦ಕೆವಿ ನಂದಿಹಾಳ ವಿದ್ಯುತ್ ಉಪ ಕೇಂದ್ರದಲ್ಲಿ ತುರ್ತು ಕಾಮಗಾರಿ ಹಾಗೂ ತ್ರೈಮಾಸಿಕ ನಿರ್ವಹಣಾ ಕಾರ್ಯ ಕೈಗೆತ್ತಿಕೊಳ್ಳಲಾಗಿದೆ. ೨೨೦ಕೆವಿ ನಂದಿಹಾಳ ಮಾರ್ಗಗಳಲ್ಲಿ ಬರುವ ೨೨೦ಕೆವಿ ಬಸವನ ಬಾಗೇವಾಡಿ ಮಾರ್ಗ-೨,೨೨೦ಕೆವಿ ವಿಜಯಪುರ ಮಾರ್ಗ೧ ಹಾಗೂ ೨, ೨೨೦ಕೆವಿ ವಿಜಯಪುರ ಉಪ-ಕೇಂದ್ರದಡಿ ಬರುವ ೧೧೦ಕೆ.ವಿ ಉಪ ಕೇಂದ್ರಗಳಾದ ವಿಜಯಪುರ ನಗರ, ಭೂತನಾಳ, ಕೆ.ಐ.ಎ.ಡಿ.ಬಿ ವಿಜಯಪುರ, ಜುಮನಾಳ, ೩೩ಕೆವಿ ಉಪ-ಕೇಂದ್ರಗಳಾದ ತಿಡಗುಂದಿ, ನಾಗಠಾಣ, ಹೊನ್ನುಟಗಿ, ೩೩ ಕೆವಿ ಅರಕೇರಿ ಎಲ್.ಐ.ಎಸ್ ಮಾರ್ಗ, ೨೨೦ಕೆ.ವಿ ವಿದ್ಯುತ್ ಕೇಂದ್ರ ಇಂಡಿ ಮೇಲೆ ಬರುವ ೧೧೦ಕೆವಿ ಉಪ-ಕೇಂದ್ರಗಳಾದ ಇಂಡಿ, ಝಳಕಿ, ಹಿರೆಮಸಳಿ, ಇಂಚಗೇರಿ, ಜಿಗಜಿವಣಗಿ, ಕೆರೂರ, ಚಡಚಣ, ರೊಡಗಿ, ಧೂಳಖೇಡ, ೩೩ಕೆವಿ ಉಪ-ಕೇಂದ್ರಗಳಾದ ನಾದ ಬಿಕೆ, ತಾಂಬಾ, ತಡವಲಗಾ, ಹಲಸಂಗಿ, ನೀವರಗಿ, ಹೋರ್ತಿ, ಬಿಎಎಸ್ಎಸ್ಕೆ ಸಕ್ಕರೆ ಕಾರ್ಖಾನೆ ಮರಗೂರ ಹಾಗೂ ೨೨೦ಕೆ.ವಿ ವಿದ್ಯುತ್ ಕೇಂದ್ರ ಆಹೇರಿ ಮೇಲೆ ಬರುವ ೧೧೦ ಕೆ.ವಿ ಉಪ-ಕೇಂದ್ರಗಳಾದ ಸಿಂದಗಿ, ಮಲಘಾಣ (ಸಿಂದಗಿ) ಮತ್ತು ೩೩ ಕೆವಿ ಉಪ-ಕೇಂದ್ರಗಳಾದ ಗೋಲಗೇರಿ,ಕಲಕೇರಿ ವಿದ್ಯುತ್ ಉಪ ಕೇಂದ್ರಗಳಿಂದ ಸರಬರಾಜಾಗುವ ನಗರ, ಗ್ರಾಮೀಣ, ನೀರಾವರಿ ಪಂಪಸೆಟ್ ಹಾಗೂ ಕುಡಿಯುವ ನೀರಿನ ಘಟಕಗಳ ಮಾರ್ಗಗಳಲ್ಲಿ ಡಿಸೆಂಬರ್ ೨೩ರ ಬೆಳಿಗ್ಗೆ ೦೯ ರಿಂದ ಸಂಜೆ ೦೫ ರವರೆಗೆ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯವಾಗಲಿದೆ.
ಆದ್ದರಿಂದ, ಗ್ರಾಮೀಣ ಮತ್ತು ನಗರ ಪ್ರದೇಶಗಳಲ್ಲಿನ ಗ್ರಾಹಕರು ಸಹಕರಿಸುವಂತೆ ಹೆಸ್ಕಾಂನ ಅಧೀಕ್ಷಕ ಅಭಿಯಂತರರು ಪ್ರಕಟಣೆಯಲ್ಲಿ ಕೋರಿದ್ದಾರೆ.
