ಕನ್ನಡ ಜಗತ್ತಿನ ಪ್ರಾಚೀನ ಹಾಗೂ ಪ್ರಮುಖ ಭಾಷೆ | ಸಮ್ಮೇಳನ ಸರ್ವಾಧ್ಯಕ್ಷ ವೇ.ಚನ್ನವೀರಸ್ವಾಮಿ ಹಿರೇಮಠ ಅಭಿಮತ
ಉದಯರಶ್ಮಿ ದಿನಪತ್ರಿಕೆ
ಆಲಮೇಲ: (ಭಾಗ್ಯವಂತಿ ದೇವಿ ಪ್ರಧಾನ ವೇದಿಕೆ ವಿಭೂತಿಹಳ್ಳಿ)
ಜಗತ್ತಿನ ಪ್ರಾಚೀನ ಹಾಗೂ ಪ್ರಮುಖ ಭಾಷೆಗಳಲ್ಲಿ ಕನ್ನಡ ಒಂದು ಕನ್ನಡ ಭಾಷೆಗೆ ಸುಮಾರು 2,000 ವರ್ಷಗಳ ಇತಿಹಾಸವಿದೆ ಎಂಬುದಕ್ಕೆ ಸಾಕಷ್ಟು ಪುರಾವೆಗಳು ಇವೆ ಎಂದು ಆಲಮೇಲ ತಾಲೂಕು 2ನೇ ಕನ್ನಡ ಸಾಹಿತ್ಯ ಸಮ್ಮೇಳನ ಸರ್ವಾಧ್ಯಕ್ಷ ವೇ.ಚನ್ನವೀರ ಸ್ವಾಮಿ ಹಿರೇಮಠ ಹೇಳಿದರು
ಶನಿವಾರ ಅವರು ತಾಲೂಕಿನ ವಿಭೂತಿಹಳ್ಳಿ ಗ್ರಾಮದಲ್ಲಿ ಹಮ್ಮಿಕೊಂಡಿರುವ ಆಲಮೇಲ ತಾಲೂಕು 2ನೇ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷತೆ ವಹಿಸಿ ಮಾತನಾಡುತ್ತಿದ್ದರು.
ಏಳನೆಯ ಶತಮಾನದ ಹೊತ್ತಿಗೆ ಕನ್ನಡ ಭಾಷಾ ಸಾಹಿತ್ಯದ ಗದ್ದುಗೆಯನ್ನು ಏರಿದ್ದು ಸ್ಪಷ್ಟವಾಗುತ್ತದೆ. ಬರೀ ಮಾತು ಭಾಷೆಯಾಗಿದ್ದ ಕನ್ನಡವೂ ಮುಂದೆ ಸಾಹಿತ್ಯದ ಸಿಂಹಾಸನವನ್ನೇರಿ ಕನ್ನಡ ನಾಡಿನ “ಶ್ರೀಮಂತ”ಭಾಷೆಯಾಗಿ ಬೆಳಗುತ್ತಿದೆ.
ಪ್ರಸ್ತಾವಿಕವಾಗಿ ಆಲಮೇಲ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಶಿವಶರಣ ಗುಂದಗಿ ಮಾತನಾಡಿ, ಕಳೆದ ಹಲವು ವರ್ಷಗಳಿಂದ ಈ ಭಾಗದಲ್ಲಿ ಸಾಹಿತ್ತಿಕ, ಹಾಗೂ ದತ್ತಿನಿಧಿ ಕಾರ್ಯಕ್ರಮಗಳನ್ನು ನಡೆಸಿಕೊಂಡು ಬಂದು ಸದ್ಯ ತಾಲೂಕು ಸಾಹಿತ್ಯ ಸಮ್ಮೇಳನ ಯಶಸ್ವಿಯಾಗಿ ಮುನ್ನಡೆಸುತ್ತಿದ್ದೇವೆ ಜೊತೆಗೆ 40ಲಕ್ಷ ರೂ. ವೆಚ್ಚದಲ್ಲಿ ಪರಿಷತ್ತಿನ ಕಟ್ಟಡದ ಕಾರ್ಯ ವೇಗವಾಗಿ ನಡೆಯುತ್ತಿದೆ ಪೂರ್ಣಗೊಂಡು ಸಾಹಿತ್ಯಾಕ್ತರ ಸೇವೆಗೆ ಅಣಿಯಾಗಲಿದೆ ಎಂದರು
ಶಾಸಕ ಅಶೋಕ ಮನಗೂಳಿ ಕಾರ್ಯಕ್ರಮವನ್ನು ಉದ್ಘಾಟಿಸಿದರು, ಮಾಜಿ ಶಾಸಕ ರಮೇಶ ಭೂಸನೂರ ಸ್ಮರಣ ಸಂಚಿಕೆ ಬಿಡುಗಡೆಗೊಳಿಸಿದರು, ಆಲಮೇಲ ಪಟ್ಟಣ ಪಂಚಾಯತ್ ಅಧ್ಯಕ್ಷ ಸಾಧಿಕ್ ಸುಂಬಡ ಸಮ್ಮೇಳನ ಅಧ್ಯಕ್ಷರ ನುಡಿ ಪುಸ್ತಕ ಬಿಡುಗಡೆಗೊಳಿಸಿದರು.
ವೇದಿಕೆಯಲ್ಲಿ ಗೋಳಸಾರದ ಅಭಿನವ ಪುಂಡಲಿಂಗ ಶಿವಯೋಗಿಗಳು, ಆಸಂಗಿಹಾಳದ ಶಂಕರಾನಂದ ಮಹಾರಾಜರು, ದೇವರ ಗುಡ್ಡದ ಗುರುಪೀಠದ ಡಾ. ಸಂದೀಪ ಪಾಟೀಲ, ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾಧ್ಯಕ್ಷ ಹಾಸಿಂಪೀರ ವಾಲಿಕಾರ್, ಬಾಬು ಬಿಜ್ಜರಗಿ, ನಿಕಟಪೂರ್ವ ಸಮ್ಮೇಳನ ಅಧ್ಯಕ್ಷ ಸಿದ್ದರಾಮಯ್ಯ ಉಪ್ಪಿನ್, ಎಪಿಎಂಸಿ ಅಧ್ಯಕ್ಷ ಬಸವರಾಜ ಬಾಗೇವಾಡಿ, ಆಲಮೇಲ ಅರ್ಬನ್ ಬ್ಯಾಂಕ್ ಅಧ್ಯಕ್ಷ ಶಿವಕುಮಾರ್ ಗುಂದಗಿ, ನಾಗರಹಳ್ಳಿ ಗ್ರಾಪಂ ಉಪಾಧ್ಯಕ್ಷ ಚನ್ನಪ್ಪ ಹಚಡದ, ನಾಗರಹಳ್ಳಿ ಗ್ರಾಪಂ ಉಪಾಧ್ಯಕ್ಷ ಚನ್ನಪ್ಪ ಹಚ್ಚಡದ, ಕ.ರಾ.ಸ.ನೌ.ಸಂಘದ ಅಧ್ಯಕ್ಷ ಅಶೋಕ ತೆಲ್ಲೂರ, ಕ.ರಾ.ಪ್ರಾ.ಶಾ.ಶಿ.ಸಂಘದ ಅಧ್ಯಕ್ಷ ಆನಂದ ಭೂಸನೂರ, ಕ.ರಾ.ಸ.ಪ್ರೌ.ಶಾ.ಶಿ.ಸಂಘದ ತಾಲೂಕು ಅಧ್ಯಕ್ಷ ಆರ್.ಎಚ್.ಬಿರಾದಾರ, ವಿಭೂತಿ ಪತ್ರಿಕೆಯ ಸಂಪಾದಕ ಅಂದಾನೆಪ್ಪ ವಿಭೂತಿ, ಕರವೇ ಗದಗ ಜಿಲ್ಲಾಧ್ಯಕ್ಷ ಎಂ.ಪಿ.ಪರ್ವತಗೌಡ , ಶಿವಾನಂದ ಜಗತಿ , ಗುಂಡು ಮೇಲಿನಮನಿ, ಡಿ.ಬುಳ್ಳಪ್ಪ , ಶಿವಾನಂದ ಅಷ್ಟಗಿ, ಅಂಬರೀಶ ಸಾಲಕ್ಕಿ, ಫಕೀರೇಶ್ವರ ಶಾಸ್ತ್ರಿ ಹಿರೇಮಠ, ಗುರು ಶಾಂತಯ್ಯ ಹಿರೇಮಠ, ಶ್ರೀಶೈಲ ಪೂಜಾರಿ, ಮಹಾಂತೇಶ್ ಮಾಡಿಯಾಳ, ಸುಶಾಂತ್ ಪೂಜಾರಿ ಇದ್ದರು.
ಕನ್ನಡ ಸಾಹಿತ್ಯ ಪರಿಷತ್ತಿನ ಕೋಶಾಧ್ಯಕ್ಷ ರಮೇಶ ಬಂಟನೂರ ಸರ್ವರನ್ನು ಸ್ವಾಗತಿಸಿದರು ವಿಭೂತಿಹಳ್ಳಿ
ಕಿತ್ತೂರು ರಾಣಿ ಚೆನ್ನಮ್ಮ ಶಾಲೆಯ ವಿದ್ಯಾರ್ಥಿನಿಯರು ನಾಡಗೀತೆ, ಆಲಮೇಲದ ಆರ್ ಎಂ ಎಸ್ ಎ ಶಾಲೆಯ ವಿದ್ಯಾರ್ಥಿನಿಯರು ರೈತ ಗೀತೆ ಹಾಡಿದರು. ಕುಮಾರಿ ಅನ್ವಿತಾ ಹೊಸಮನಿ ಭರತನಾಟ್ಯ ಕಾರ್ಯಕ್ರಮದ ಮೆರಗನ್ನು ಹೆಚ್ಚಿಸಿತು.
ಶ್ರೀಶೈಲ ಮಠಪತಿ ಹಾಗೂ ಪ್ರೋ.ಗಂಗಾಧರ ಪತ್ತಾರ ಕಾರ್ಯಕ್ರಮದ ನಿರೂಪಣೆ ಮಾಡಿದರು, ಎಂ ಎಸ್ ಚೌದರಿ ನಿರ್ವಹಣೆ ಮಾಡಿದರು, ಚಂದ್ರಶೇಖರ ಕೆಳಗಿನಮನಿ, ಅಶೋಕ ಮಾದರ ವಂದಿಸಿದರು.

ಆಲಮೇಲ ಪಟ್ಟಣವು ತಾಲೂಕು ಕೇಂದ್ರ ವಾಗಿ ಮಾರ್ಪಟ್ಟಿರುವುದರಿಂದ ಇಲ್ಲಿ ತಾಲೂಕು ಆಡಳಿತ ಕಚೇರಿ ಕಟ್ಟಡವಾಗಬೇಕಾಗಿದೆ. ಆಡಳಿತ ವಿಕೇಂದ್ರೀಕರಣವಾಗಬೇಕು. ಆಲಮೇಲ ತಾಲೂಕಿನ ದೇವಣಗಾಂವ, ಕಡಣಿ, ಕೋರಹಳ್ಳಿ, ಆಲಮೇಲ, ಬಳಗಾನೂರ, ದೇವರ ನಾದಗಿ, ಕುಮಸಗಿ, ಮದರಿ ಗ್ರಾಮಗಳು ದೊಡ್ಡಾಟಕ್ಕೆ ಪ್ರಸಿದ್ಧಿಯನ್ನು ಪಡೆದಿದೆ. ಈ ಭಾಗದ ಬಯಲಾಟದ ಉಳಿವಿಗಾಗಿ ಕನ್ನಡಪರ ಮನಸ್ಸುಗಳು ಒಂದಾಗಬೇಕಾಗಿದೆ. ಅದರ ಜೊತೆಗೆ ಗೀಗೀ ಪದಗಳ ಜನಕ ಕಡಣಿ ಕಲ್ಲಪ್ಪನ ಹೆಸರಿನಲ್ಲಿ ಜಾನಪದ ಅಧ್ಯಯನ ಕೇಂದ್ರ ಆಗಬೇಕು. ಅಂದಾಗ ಮಾತ್ರ ಈ ಭಾಗದ ಸಾಂಸ್ಕೃತಿಕ, ಸಾಹಿತ್ತಿಕ ಹಿರಿಮೆ ಹೆಚ್ಚಿಸಲು ಅದನ್ನು ಉತ್ತೇಜಿಸಲು ಸಾಧ್ಯವಾಗುತ್ತದೆ ಎಂದು ಆಲಮೇಲ ತಾಲೂಕು 2ನೇ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷತೆ ವಹಿಸಿದ ವೇ.ಚನ್ನವೀರ ಸ್ವಾಮಿ ಹಿರೇಮಠ ಆಶಯ ವ್ಯಕ್ತಪಡಿಸಿದರು.

