ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ವಿಜಯಪುರ ನಗರದ ಟಕ್ಕೆಯಲ್ಲಿರುವ ಪಿ.ಎಂ.ಕೇಂದ್ರೀಯ ವಿದ್ಯಾಲಯದಲ್ಲಿ ಶನಿವಾರ ೬೨ನೇ ಸಂಸ್ಥಾಪನಾ ದಿನಾಚರಣೆಯನ್ನು ಅತ್ಯಂತ ವಿಜೃಂಭಣೆಯಿಂದ ಆಚರಿಸಲಾಯಿತು.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ರೇಲ್ವೆ ಇಲಾಖೆಯ ಚಂದನ ಝಾ ಅವರು ಮಾತನಾಡಿ, ಕೇಂದ್ರೀಯ ವಿದ್ಯಾಲಯದ ಮಕ್ಕಳ ಕಲಿಕೆಗೆ ಮೆಚ್ಚುಗೆ ವ್ಯಕ್ತಪಡಿಸಿದ ಅವರು, ಇಲ್ಲಿ ಶಿಕ್ಷಣ ಪಡೆದ ಅನೇಕರು ಇಂದು ದೇಶದ ವಿವಿಧ ಭಾಗಗಳಲ್ಲಿ ವಿವಿಧ ಉನ್ನತ ಸ್ಥಾನಗಳನ್ನು ಅಲಂಕರಿಸಿದ್ದಾರೆ. ನೀವು ಸಹ ಗುರಿಯನ್ನಿಟ್ಟುಕೊಂಡು ಅತ್ಯುತ್ತಮ ಸಾಧನೆಗೈಯ್ಯುವ ಮೂಲಕ ಉನ್ನತ ಸ್ಥಾನ ಪಡೆಯುವ ಮೂಲಕ ತಾವು ತಮ್ಮ ಕುಟುಂಬ, ಸಮಾಜ, ವಾಸವಿರುವ ಸ್ಥಳ, ರಾಜ್ಯ, ದೇಶದ ಗೌರವ ಹೆಚ್ಚಿಸುವಂತೆ ಅವರು ಕರೆ ನೀಡಿದರು.
ಕೇಂದ್ರೀಯ ವಿದ್ಯಾಲಯದ ಪ್ರಾಚಾರ್ಯ ಜುನಾರಾಮ ಅವರು ಮಾತನಾಡಿದರು.
ಕಾರ್ಯಕ್ರಮದಲ್ಲಿ ಶಿಕ್ಷಕರಾದ ಸಂತೋಷ ಹಲವಾಯಿ, ವಿದ್ಯಾಲಯದ ಹಳೆಯ ವಿದ್ಯಾರ್ಥಿಗಳಾದ ಶೃತಿ ಸಿಲಿನ, ಅನಂತ ಪದ್ಮನಾಭನ್, ಸುಂದ್ರೇಶ ಉಮದಿ, ವಿರೇಶ ಡಂಬಳ, ಕಲ್ಯಾಣಿ ಅಶೋಕ ಕಾಳೆ, ಪಿಯುಷ ದೀಕ್ಷಿತ, ಚಿನ್ನು ಗುಪ್ಪಾ, ವೈಷ್ಣವಿ ಚೂರಿ ಉಪಸ್ಥಿತರಿದ್ದರು. ಅನಾಮಿಕ ಕುಮಾರಿ ಅವರು ಕಾರ್ಯಕ್ರಮ ನಿರೂಪಣೆ ಮಾಡಿದರು.

