ಉದಯರಶ್ಮಿ ದಿನಪತ್ರಿಕೆ
ಇಂಡಿ: ಬೆಳಗಾವಿಯಲ್ಲಿ ಲಿಂಗಾಯತ ಪಂಚಮಸಾಲಿ ಸಮಾಜದ ಪ್ರವರ್ಗ “೨ಅ ಮೀಸಲಾತಿಗೆ” ಆಗ್ರಹಿಸಿ ನಡೆಯುತ್ತಿರುವ ಹೋರಾಟದಲ್ಲಿ ಭಾಗವಹಿಸಿದ್ದ ಪಂಚಮಸಾಲಿ ಸಮಾಜ ಬಾಂಧವರ ಮೇಲೆ ಲಾಠಿ ಪ್ರಹಾರ ನಡೆಸಿದ್ದನ್ನು ಖಂಡಿಸಿ ಲಿಂಗಾಯತ ಪಂಚಮಸಾಲಿ ಸಮಾಜ ಬಾಂಧವರು ಗುರುವಾರ ವಿವಿಧೆಡೆ ಟೈರ್ಗೆ ಬೆಂಕಿಹಚ್ಚಿ ಪ್ರತಿಭಟನೆ ನಡೆಸಿ ಆಕ್ರೋಶ ಹೊರಹಾಕಿದರು.
ಇಂಡಿ ಪಟ್ಟಣದ ಬಸವೇಶ್ವರ ವೃತ್ತದಲ್ಲಿ ಮಾನವ ಸರಪಳಿ ನಿರ್ಮಿಸಿ ಟೈರ್ಗೆ ಬೆಂಕಿ ಹಚ್ಚಿ ಆಕ್ರೋಶ ವ್ಯಕ್ತಪಡಿಸಿದ ಸಮಾಜ ಬಾಂಧವರು ಸಿದ್ದರಾಮಯ್ಯನವರ ಭಾವಚಿತ್ರವನ್ನು ಸುಡುವುದರ ಮೂಲಕ ಆಕ್ರೋಶ ವ್ಯಕ್ತಪಡಿಸಿದರು.
ಸಮಾಧಾನಕರವಾಗಿ ನಡೆಯುತ್ತಿದ್ದ ಹೋರಾಟಕ್ಕೆ ಮುಖ್ಯಮಂತ್ರಿಗಳು ಲಾಟಿ ಪ್ರಹಾರ ನಡೆಸಿ ಹೋರಾಟವನ್ನು ಹತ್ತಿಕ್ಕುವ ಕಾರ್ಯ ಮಾಡಿದ್ದಾರೆ, ಗೃಹ ಮಂತ್ರಿಗಳು ಹಾಗೂ ಮುಖ್ಯಮಂತ್ರಿಗಳ ಮೇಲೆ ಮತ್ತು ಪೊಲೀಸ್ ಆಯುಕ್ತರ ಮೇಲೆ ಕೂಡಲೇ ಕ್ರಮ ಜರುಗಿಸಬೇಕು ಎಂದು ಸಮಾಜದ ಮುಖಂಡರು ಆಗ್ರಹಿಸಿದರು.
ಬಾಕ್ಸ-
ದಶಕಗಳಿಂದ ಮೀಸಲಾತಿ ಹೋರಾಟ ನಡೆಯುತ್ತಿದೆ. ಯಾವ ಸರಕಾರವೂ ನಮ್ಮ ಹೋರಾಟಕ್ಕೆ ಇಷ್ಟು ಕಡೆಗಣನೆ ಮಾಡಿರಲಿಲ್ಲ. ಈ ಸರಕಾರ ಲಾಠೀ ಪ್ರಹಾರ ನಡೆಸಿ ಹೋರಾಟ ಹತ್ತಿಕ್ಕುವ ಕಾರ್ಯ ಮಾಡಿದ್ದರೂ ಸಹಿತ ಕಾಂಗ್ರೇಸ್ ಪಕ್ಷದಲ್ಲಿನ ಲಿಂಗಾಯತ ಶಾಸಕರು ಸುಮ್ಮನಿರುವುದು ನಮ್ಮ ದುರಾದೃಷ್ಠ. ಸಮಾಜದ ವಿರೋಧಿಯಾದ ಈ ಸರಕಾರಕ್ಕೆ ಹಾಗೂ ಧ್ವನಿ ಮೊಳಗಿಸದ ಶಾಸಕ, ಸಚಿವರಿಗೆ ಮುಂಬರುವ ದಿನಗಳಲ್ಲಿ ಸಮಾಜ ತಕ್ಕ ಪಾಠ ಕಲಿಸಲಿದೆ.
ವಿ.ಹೆಚ್. ಬಿರಾದಾರ, ಪಂಚಮಸಾಲಿ ಸಮಾಜದ ಅಧ್ಯಕ್ಷ ಇಂಡಿ ತಾಲೂಕು.
ಮಾಜಿ ಶಾಸಕ ರವಿಕಾಂತ ಪಾಟೀಲ, ಭೀಮನಗೌಡ ಪಾಟೀಲ, ಬಿಜೆಪಿ ಮುಖಂಡ ಕಾಸುಗೌಡ ಬಿರಾದಾರ, ಅಯೂಬ ನಾಟೀಕಾರ, ಡಾ. ರಮೇಶ ರಾಠೋಡ, ಬಾಳು ಮುಳಜಿ, ಸೋಮಶೇಖರ ದೇವರ, ಅನೀಲಗೌಡ ಬಿರಾದಾರ, ನಿಂಗನಗೌಡ ಬಿರಾದಾರ ಮಾತನಾಡಿದರು.
ತದನಂತರ ಸ್ಥಳಕ್ಕೆ ಆಗಮಿಸಿದ್ದ ತಹಸೀಲ್ದಾರ ಬಿ.ಎಸ್. ಕಡಕಭಾವಿ ಅವರಿಗೆ ರಾಜ್ಯಪಾಲರಿಗೆ ಬರೆದ ಆರೋಪ ಪತ್ರವನ್ನು ನೀಡಲಾಯಿತು.
ಪತ್ರ ಸ್ವೀಕರಿಸಿದ ತಹಸೀಲ್ದಾರರು ರಾಜ್ಯಪಾಲರಿಗೆ ಈ ಪತ್ರವನ್ನು ಕಳುಹಿಸಿ ಕೊಡಲಾಗುವುದು ಎಂದು ತಿಳಿಸಿದರು.
ಗುರುವಾರರಂದೇ ತಾಲೂಕಿನ ಅಗರಖೇಡ, ಲಚ್ಯಾಣ, ಸಾತಲಗಾಂವ ಗ್ರಾಮಗಳಲದಲಿಯೂ ಸಹ ಪ್ರತಿಭಟನೆ ನಡೆಸಲಾಯಿತು.
ಈ ಸಂದರ್ಭದಲ್ಲಿ ಶ್ರೀಕಾಂತ ದೇವರ, ಪಾಪು ಕಿತ್ತಲಿ, ಶಿವಾನಂದ ಚಾಳೀಕಾರ, ರವಿಗೌಡ ಪಾಟೀಲ, ಭೀಮರಾಯ ಬಿರಾದಾರ, ಪ್ರಶಾಂತ ಲಾಳಸಂಗಿ, ಸುನೀಲಗೌಡ ಬಿರಾದಾರ, ಅಶೋಕ ಅಕಲಾದಿ, ದಯಾನಂದ ಪಾಟೀಲ, ಅನೀಲಪ್ರಸಾದ ಏಳಗಿ, ಪ್ರಭು ಹೊಸಮನಿ, ಅರವಿಂದ ಪಾಟೀಲ, ಮಹಾದೇವ ಗುಡ್ಡೊಡಗಿ, ಭೀಮರಾಯ ಮದರಖಂಡಿ, ವೀರೇಂದ್ರ ಪಾಟೀಲ, ಗಂಗಾಧರ ಪಾಟೀಲ, ಎಸ್.ಆರ್. ಬಿರಾದಾರ, ಡಿ.ಜಿ. ಜೋತಗೊಂಡ, ಬಿ.ಬಿ. ಬಿರಾದಾರ, ಭೀಮನಗೌಡ ಪಾಟೀಲ, ಶಿವಾನಂದ ದೇವರ, ಸಂತೋಶ ಪಾಟೀಲ, ಪ್ರವೀಣ ಸಲಗರ, ಸಂಜು ನಾಯ್ಕೋಡಿ, ಜೀತಪ್ಪ ಕಲ್ಯಾಣಿ, ದುಂಡಪ್ಪ ಹ್ಯಾಳದ, ಶಿವಾನಂದ ಬೋಳಗೊಂಡ, ಸೋಮನಾಥ ಶಿವೂರ, ಭೀಮರಾಯ ಪಡಶೆಟ್ಟಿ, ಅಶೋಕಗೌಡ ಬಿರಾದಾರ, ಶ್ರೀಶೈಲಗೌಡ ಬಿರಾದಾರ, ಪ್ರಶಾಂತ ಬಿರಾದಾರ, ಶಿವಾನಂದ ಕಾಮಗೊಂಡ, ಪ್ರತೀಕ ಬಿರಾದಾರ, ಸಂಗಣ್ಣ ಹೊಸೂರ, ಶಿವಾನಂದ ಬಿರಾದಾರ, ನೀಲಕಂಠ ಬಿರಾದಾರ, ಸಾಹೇಬಗೌಡ ಪಾಟೀಲ, ದಾದಾಗೌಡ ಪಾಟೀಲ, ಮಲ್ಲು ಚಾಕುಂಡಿ, ಭೀಮ ಪ್ರಚಂಡಿ, ಅಂಬಣ್ಣ ಕವಟಗಿ ಸೇರಿದಂತೆ ಐದು ನೂರಕ್ಕೂ ಹೆಚ್ಚು ಸಮಾಜ ಬಾಂಧವರು ಭಾಗವಹಿಸಿದ್ದರು.

